ಆ್ಯಪ್ನಗರ

ಸ್ಟ್ಯಾಂಪ್‌ ವರ್ಲ್ಡ್‌: ಜ್ಞಾನಪೀಠ ಪ್ರಶಸ್ತಿ ವಿಜೇತರು

ಭಾರತೀಯ ಅಂಚೆ ಇಲಾಖೆ 1997 ರಲ್ಲಿ ಕೈಗೊಂಡ ತೀರ್ಮಾನ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವವಾದದ್ದು...

Vijaya Karnataka 8 Jul 2018, 5:00 am
ಭಾರತೀಯ ಅಂಚೆ ಇಲಾಖೆ 1997 ರಲ್ಲಿ ಕೈಗೊಂಡ ತೀರ್ಮಾನ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವವಾದದ್ದು. ಅದು ಕರ್ನಾಟಕ ಸೇರಿದಂತೆ ಭಾರತಕ್ಕೆ ಅತ್ಯಮೂಲ್ಯ ಸಾಹಿತ್ಯಿಕ ಕೊಡುಗೆ ನೀಡಿ ವಿಶೇಷ ಸಾಧನೆ ಮಾಡಿ ಸರ್ವಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕರ್ನಾಟಕದ ಸಾಹಿತಿಗಳ ಚಿತ್ರಗಳಿರುವ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತು.
Vijaya Karnataka Web stamp-2


1997 ಮಾರ್ಚ್‌ 28 ರಂದು ಬಿಡುಗಡೆಯಾದ ಈ ಅಂಚೆ ಚೀಟಿಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಾದ ಕುವೆಂಪು, ದಾ.ರಾ ಬೇಂದ್ರೆ, ವಿ.ಕೆ ಗೋಕಾಕ್‌, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಚಿತ್ರಗಳಿದ್ದವು. ಕುವೆಂಪು ಶ್ರೀ ರಾಮಾಯಣದರ್ಶನಂ, ದಾ.ರಾ ಬೇಂದ್ರೆ ನಾಕುತಂತಿ, ವಿ.ಕೆ ಗೋಕಾಕ್‌ ಭಾರತ ಸಿಂಧು ರಶ್ಮಿ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಚಿಕ್ಕವೀರರಾಜೇಂದ್ರ ಕೃತಿಗಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿವಿಧ ಭಾಷೆಗಳಲ್ಲಿ ಅತ್ಯಮೂಲ್ಯ ಸಾಹಿತ್ಯ ಸೇವೆ ಮಾಡಿ ಜ್ಞಾನಪೀಠ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಹಿತಿಗಳಿಗೆ ಗೌರವ ನೀಡುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ಈ ಕ್ರಮ ಕೈಗೊಂಡಿದೆ. ಈ ವಿಶೇಷ ಅಂಚೆ ಚೀಟಿಯ ಮುಖ ಬೆಲೆ 2 ರೂಪಾಯಿ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ