ಆ್ಯಪ್ನಗರ

ಮಕ್ಕಳ ಕಥೆ: ಮನುಷ್ಯ ಸ್ವಭಾವ

ದಟ್ಟ ಕಾಡೊಂದರಲ್ಲಿ ಸಾಧು ತಪಸ್ಸು ಮಾಡುತ್ತಿದ್ದ ಆಗ ಹುಲಿಯೊಂದು ಗರ್ಜಿಸುತ್ತ ಬಂದು ಸಾಧು ಮುಂದೆ ನಿನ್ನನ್ನು ತಿನ್ನುವೆ ಎಂದು ಹೇಳಿತು...

Vijaya Karnataka 19 May 2019, 5:00 am
ಅನಿಲ್‌ ಕಾಮತ್‌
Vijaya Karnataka Web kids story-1


ದಟ್ಟ ಕಾಡೊಂದರಲ್ಲಿ ಸಾಧು ತಪಸ್ಸು ಮಾಡುತ್ತಿದ್ದ. ಆಗ ಹುಲಿಯೊಂದು ಗರ್ಜಿಸುತ್ತ ಬಂದು ಸಾಧು ಮುಂದೆ ನಿನ್ನನ್ನು ತಿನ್ನುವೆ ಎಂದು ಹೇಳಿತು. ಆಗ ಸಾಧು, ನೀನು ಯಾಕೆ ನನ್ನನ್ನು ತಿನ್ನುವೆ ಎಂದು ಕೇಳಿದಾಗ ಹುಲಿಯು, ಮನುಷ್ಯರನ್ನು ತಿನ್ನುವುದು ಪ್ರಾಣಿಯ ಸ್ವಭಾವ ಎಂದು ಹೇಳಿತು. ಆಗ ಸಾಧು ತನ್ನ ಮಂತ್ರ ಶಕ್ತಿಯಿಂದ ಅಲ್ಲಿಂದ ಮಾಯವಾದ. ಹುಲಿ ಅಲ್ಲಿಂದ ಓಡಿ ಹೋಯಿತು.

ಸಾಧು ಮತ್ತೆ ತಪಸ್ಸಿಗೆ ಕುಳಿತಾಗ ನಾಗರಹಾವೊಂದು ಬುಸ್‌ ಎಂದು ಹೆಡೆಯೆತ್ತಿ ನಾನು ನಿನಗೆ ಕಚ್ಚುವೆ ಎಂದು ಸಾಧುವಿಗೆ ಹೇಳಿತು. ಆಗ ಸಾಧು, ನನಗೇಕೆ ನೀನು ಕಚ್ಚುವೆ ಎಂದು ಕೇಳಿದಾಗ ಅದು, ಕಚ್ಚುವುದು ನನ್ನ ಸ್ವಭಾವ ಎಂದು ಹೇಳಿತು. ಸಾಧು ತನ್ನ ಮಂತ್ರ ಶಕ್ತಿಯಿಂದ ಮಾಯವಾದಾಗ ಹಾವು ಅಲ್ಲಿಂದ ಕದಲಿತು.

ಸಾಧು ಮತ್ತೆ ತಪಸ್ಸಿಗೆ ಕುಳಿತಾಗ ಅಳಿಲೊಂದು ಸಾಧು ಬಳಿ ಬಂದು ಕಾಲು ನೆಕ್ಕುತ್ತ ಕಾಡಿನಲ್ಲಿರುವ ಮಾವಿನ ಮರದಲ್ಲಿ ಯಥೇಚ್ಛವಾಗಿ ಹಣ್ಣುಗಳಾಗಿವೆ. ನಿಮಗೆ ಬೇಕೆ ಎಂದು ಕೇಳಿತು. ಅದಕ್ಕೆ ಸಾಧು ಆಗಲಿ ತಂದು ಕೊಡು ಎಂದಾಗ ಅಳಿಲು ಕ್ಷ ಣಾರ್ಧದಲ್ಲಿ ಮಾವಿನಹಣ್ಣನ್ನು ಸಾಧುವಿಗೆ ತಂದು ಕೊಟ್ಟಿತು. ಆಗ ಸಾಧು ಒಂದೊಂದು ಪ್ರಾಣಿಗಳಲ್ಲಿ ಒಂದೊಂದು ಸ್ವಭಾವ ಇರುವಂತೆ ಮನುಷ್ಯರಲ್ಲಿಯೂ ಒಬ್ಬೊಬ್ಬರಲ್ಲೂ ಒಂದೊಂದು ಸ್ವಭಾವ ಇರುತ್ತದೆ ಎಂದು ಅಂದುಕೊಂಡು ತಪಸ್ಸಿನಲ್ಲಿ ಲೀನನಾದನು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ