ಆ್ಯಪ್ನಗರ

ಚುನಾವಣೆ ಫಲಿತಾಂಶದ ನಿರೀಕ್ಷೆಯಲ್ಲಿ ರಿಯಾಲ್ಟಿ

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ ಈ ಬಾರಿಯ ಫಲಿತಾಂಶದ ಮೇಲೆ ರಿಯಾಲ್ಟಿ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

Vijaya Karnataka 12 May 2018, 12:27 pm
ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ. ಈ ಬಾರಿಯ ಫಲಿತಾಂಶದ ಮೇಲೆ ರಿಯಾಲ್ಟಿ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.
Vijaya Karnataka Web real estate


ವಿಧಾನಸಭೆ ಚುನಾವಣೆಯ ಫಲಿತಾಂಶವು ಖಚಿತವಾಗಿಯೂ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ. ಸ್ಥಿರ ಸರಕಾರ ರಚನೆಯಾದರಂತೂ ರಿಯಾಲ್ಟಿ ಪ್ರಗತಿಗೆ ಪೂರಕವಾಗಲಿದೆ ಎಂಬುದು ರಿಯಲ್‌ ಎಸ್ಟೇಟ್‌ ಕ್ಷೇತ್ರದ ತಜ್ಞರ ಅಭಿಪ್ರಾಯ.

ಕಳೆದ ಮೂರು ವರ್ಷಗಳಿಂದ ಒಂದಲ್ಲ ಒಂದು ಹಂತದಲ್ಲಿ ನಾನಾ ಕಾರಣಗಳಿಂದ ರಿಯಾಲ್ಟಿ ಕ್ಷೇತ್ರದ ಪ್ರಗತಿ ಕುಂಠಿತವಾಗಿತ್ತು. ಈಗ ಪ್ರಗತಿಯ ಹಳಿಗೆ ಮತ್ತೆ ತಲುಪಿದೆ. ಈ ಹಂತದಲ್ಲಿ ರಾಜ್ಯದಲ್ಲಿ ಸ್ಥಿರ ಸರಕಾರ ಅಧಿಕಾರಕ್ಕೆ ಬಂದರೆ ಈ ಪ್ರಗತಿಯ ವೇಗ ಹೆಚ್ಚುತ್ತದೆ ಎಂದು ಕ್ರೆಡೈ ಬೆಂಗಳೂರು ಕಾರ್ಯದರ್ಶಿ ಸುರೇಶ್‌ ಹರಿ ಅಭಿಪ್ರಾಯ ಪಡುತ್ತಾರೆ.

'ಕಳೆದ ಸುಮಾರು ಎರಡು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರ ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ. ಮೊದಲಿಗೆ ನೋಟು ಅಮಾನ್ಯದಿಂದ ಕಂಗೆಟ್ಟಿತ್ತು. ಆದರೂ ಇದರಿಂದ ಕಪ್ಪು ಹಣ ಬಳಕೆದಾರರು ರಿಯಾಲ್ಟಿ ಕ್ಷೇತ್ರದಿಂದ ಹೊರಗೆ ಹೋಗುವಂತಾಯಿತು. ಬಳಿಕ ಜಿಎಸ್‌ಟಿ ಜಾರಿಗೆ ಬಂತು. ಇದನ್ನು ಅರ್ಥ ಮಾಡಿಕೊಳ್ಳಲು ಒಂದಿಷ್ಟು ಕಾಲಾವಕಾಶ ಬೇಕಾಯಿತು. ಆ ನಂತರ ಬಂದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ರೇರಾ) ಕೂಡ ಮೊದಲಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆಯನ್ನು ಎದುರಿಸುವಂತೆ ಮಾಡಿದ್ದರೂ, ಈಗ ಪರಿಸ್ಥಿತಿ ಸುಧಾರಣೆ ಕಂಡಿದೆ. ಈ ಸನ್ನಿವೇಶದಲ್ಲಿ ರಾಜ್ಯದಲ್ಲಿ ಯಾವುದೇ ಪಕ್ಷವಾಗಿರಲಿ ಸ್ಥಿರ ಸರಕಾರ ರಚನೆಯಾದರೆ ರಿಯಾಲ್ಟಿ ಪ್ರಗತಿ ಇನ್ನಷ್ಟು ಮುಂದಕ್ಕೆ ಹೋಗಲು ಸಾಧ್ಯ' ಎಂದು ಸುರೇಶ್‌ ಹರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ