ಆ್ಯಪ್ನಗರ

ತೆರಿಗೆ ಪಾವತಿಗೆ ಕೊನೆಯ ದಿನ

ಪ್ರಾಪರ್ಟಿ ತೆರಿಗೆಯನ್ನು ಶೇ. 5ರ ರಿಯಾಯಿತಿಯೊಂದಿಗೆ ಪಾವತಿ ಮಾಡಲು ಸೋಮವಾರ ಅಂದರೆ ಏಪ್ರಿಲ್‌ 30 ಅಂತಿಮ ಗಡು. ಮಂಗಳವಾರದಿಂದ ತೆರಿಗೆ ಪಾವತಿ ಮಾಡುವವರು ಶೇ. 5ರ ರಿಯಾಯಿತಿ ಪಡೆಯಲು ಅನರ್ಹರಾಗಿರುತ್ತಾರೆ.

Vijaya Karnataka 28 Apr 2018, 12:00 pm
ಪ್ರಾಪರ್ಟಿ ತೆರಿಗೆಯನ್ನು ಶೇ. 5ರ ರಿಯಾಯಿತಿಯೊಂದಿಗೆ ಪಾವತಿ ಮಾಡಲು ಸೋಮವಾರ ಅಂದರೆ ಏಪ್ರಿಲ್‌ 30 ಅಂತಿಮ ಗಡು. ಮಂಗಳವಾರದಿಂದ ತೆರಿಗೆ ಪಾವತಿ ಮಾಡುವವರು ಶೇ. 5ರ ರಿಯಾಯಿತಿ ಪಡೆಯಲು ಅನರ್ಹರಾಗಿರುತ್ತಾರೆ.
Vijaya Karnataka Web interest-rate


ಇಂಡಿಪೆಂಡೆಂಟ್‌ ಹೌಸ್‌ ಅಥವಾ ಅಪಾರ್ಟ್‌ಮೆಂಟ್‌, ವಿಲ್ಲಾ ಹೀಗೆ ಯಾವುದೇ ಪ್ರಾಪರ್ಟಿಗೂ ವಾರ್ಷಿಕ ಪ್ರಾಪರ್ಟಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಏಪ್ರಿಲ್‌ 30 ಇದಕ್ಕೆ ಅಂತಿಮ ಗಡುವಾಗಿದ್ದು, ಅಷ್ಟರೊಳಗೆ ಕಟ್ಟಿದರೆ ಶೇ. 5ರ ರಿಯಾಯಿತಿಯನ್ನು ಬಿಬಿಎಂಪಿ ನೀಡುತ್ತದೆ.

ರಿಯಾಯಿತಿ ವ್ಯಾಪ್ತಿ

ಪ್ರತಿವರ್ಷದ ಏಪ್ರಿಲ್‌ ಒಂದರಿಂದ ಮುಂದಿನ ವರ್ಷದ ಮಾರ್ಚ್‌ 30ರವರೆಗೆ ತೆರಿಗೆಯನ್ನು ವಿಧಿಸಲಾಗುತ್ತದೆ. ಏಪ್ರಿಲ್‌ 30 ತೆರಿಗೆ ಕಟ್ಟಲು ಅಂತಿಮ ಗಡುವಾಗಿರುತ್ತದೆ. ಒಂದೇ ಕಂತಿನ ವರ್ಷದ ತೆರಿಗೆ ಕಟ್ಟಿದರೆ ಆಗ ಬಿಬಿಎಂಪಿ ಶೇ. 5ರ ರಿಯಾಯಿತಿ ನೀಡುತ್ತದೆ. ಇದಲ್ಲದೆ ಎರಡು ಕಂತುಗಳಲ್ಲಿ ಕೂಡ ಕಟ್ಟಬಹುದಾಗಿದೆ. ಇದಕ್ಕೆ ಬಡ್ಡಿ ಪಾವತಿ ಮಾಡಬೇಕಾದ ಅಗತ್ಯವಿಲ್ಲ. ಅದೆಂದರೆ ಏಪ್ರಿಲ್‌ 30 ಮತ್ತು ಸೆಪ್ಟೆಂಬರ್‌ 30ರ ಅಂತಿಮ ಗಡುವಿನೊಳಗೆ ಎರಡು ಕಂತುಗಳು. ಇದಕ್ಕೆ ರಿಯಾಯಿತಿ ಅನ್ವಯವಾಗುವುದಿಲ. ನಿಗದಿತ ಕಂತನ್ನು ಗಡುವಿನೊಳಗೆ ಕಟ್ಟದಿದ್ದರೆ ಮಾಸಿಕ ಶೇ. 2 ಅಥವಾ ವಾರ್ಷಿಕ ಶೇ. 24ರ ಬಡ್ಡಿಯನ್ನು ತೆರಿಗೆಯ ಮೇಲೆ ಪಾವತಿ ಮಾಡಬೇಕಾಗುತ್ತದೆ.

ಪಾವತಿ ವಿಧಾನ

ತೆರಿಗೆಯನ್ನು ನೇರವಾಗಿ ಇಲ್ಲವೇ ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಸಾಧ್ಯವಿದೆ. ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಡಿಮ್ಯಾಂಡ್‌ ಡ್ರಾಫ್ಟ್‌ ಅಥವಾ ಚೆಕ್‌ ಮೂಲಕ ಸಮೀಪದ ಬಿಬಿಎಂಪಿ ಸಹಾಯ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಕೆನರಾ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ನ ನಗರದಲ್ಲಿರುವ ಎಲ್ಲಾ ಶಾಖೆಗಳಲ್ಲಿ ಪಾವತಿ ಮಾಡಬಹುದು. ಪ್ರಾಪರ್ಟಿ ಅಥವಾ ಕಟ್ಟಡ ರಚನೆಯಲ್ಲಿ ಆದ ಯಾವುದೇ ಬದಲಾವಣೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿ ಸೂಕ್ತ ಚಲನ್‌ ಪಡೆದುಕೊಳ್ಳಬೇಕು.

ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಬಯಸುವವರು hಠಿಠಿp:/ಚಿಚಿಞpಠಿa್ಡ.ka್ಟ್ಞaಠಿaka.ಜಟv.ಜ್ಞಿ ಅಂತರ್ಜಾಲದ ಪ್ರವೇಶಿಸಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ತೆರಿಗೆ ಪಾವತಿ ಮಾಡಬಹುದು.

ಶುಲ್ಕ ವಿನಾಯಿತಿ

ಇದೇ ವೇಳೆ, 5 ಸಾವಿರ ರೂ.ನೊಳಗಿನ ಆನ್‌ಲೈನ್‌ ತೆರಿಗೆ ಪಾವತಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಸರಳ ಮತ್ತು ಸುಲಭವಾಗಿ ಆನ್‌ಲೈನ್‌ ತೆರಿಗೆ ಪಾವತಿಗಾಗಿ ಸಾಫ್ಟ್‌ವೇರ್‌ನ್ನು ಅಪ್‌ಗ್ರೇಡ್‌ ಮಾಡಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಆಯುಕ್ತ ಎಂ. ವೆಂಕಟಚಲಪತಿ ತಿಳಿಸಿದ್ದಾರೆ. ಐದು ಸಾವಿರದವರೆಗಿನ ತೆರಿಗೆ ಪಾವತಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದರು. ಆದರೆ ಯಾವುದೇ ಕಾರಣಕ್ಕೂ ರಿಯಾಯಿತಿ ಸಹಿತ ತೆರಿಗೆ ಪಾವತಿಯ ಗಡುವನ್ನು ವಿಸ್ತರಿಸುವುದಿಲ್ಲ ಎಂದವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ