ಆ್ಯಪ್ನಗರ

ಮಳೆಗಾಲದಲ್ಲೊಂದು ಚಿಕ್ಕಮಗಳೂರು ಟ್ರಿಪ್‌

ಮಾನ್ಸೂನ್‌ನಲ್ಲಿ ಒಂದು ಚಿಕ್ಕ ವೀಕೆಂಡ್‌ ಟ್ರಿಪ್‌ ಬಯಸುವುದಾದರೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಬಹುದು. ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವ ಈ ನಾಡಿಗೆ ಇಲ್ಲಿಯ ಮುಳ್ಳಯ್ಯಗಿರಿ ಬೆಟ್ಟ ಒಂದು ಮುಕುಟವಿದ್ದಂತೆ.

Vijaya Karnataka Web 25 Jul 2018, 5:10 pm
ಮಾನ್ಸೂನ್‌ನಲ್ಲಿ ಒಂದು ಚಿಕ್ಕ ವೀಕೆಂಡ್‌ ಟ್ರಿಪ್‌ ಬಯಸುವುದಾದರೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಬಹುದು. ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವ ಈ ನಾಡಿಗೆ ಇಲ್ಲಿಯ ಮುಳ್ಳಯ್ಯಗಿರಿ ಬೆಟ್ಟ ಚಿಕ್ಕಮಗಳೂರಿನ ಸೌಂದರ್ಯಕ್ಕೆ ಮುಕುಟವಿದ್ದಂತೆ.
Vijaya Karnataka Web chikmaguluru


ಹಿರೆಕೊಳಲೆ ಕೆರೆ, ದತ್ತಪೀಠ, ಮುಳ್ಳಯ್ಯನಗಿರಿ, ಬೆಳವಾಡಿ, ಭದ್ರಾ ವನ್ಯಧಾಮ, ಕೆಮ್ಮನಗುಂಡಿ, ಮಾಣಿಕ್ಯಧಾರ ಜಲಪಾತ ಮುಂತಾದವುಗಳು ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.

ಟ್ರೆಕ್ಕಿಂಗ್‌ಗೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಮಾನ್ಸೂನ್‌ನಲ್ಲಿ ಪ್ರಕೃತಿಯ ಸೊಬಗಿನಿಂದ ನೋಡುಗರನ್ನು ಮೈಮರೆಯುವಂತೆ ಮಾಡುವುದು. ಜಿಟಿಜಿಟಿ ಮಳೆ ಬೀಳುತ್ತಿರುವಾಗ ಧುಮ್ಮಿಕ್ಕುವ ಜಲಪಾತಗಳು, ತುಂಬಿ ಹರಿಯುತ್ತಿರುವ ಕೆರೆಗಳು, ಹಚ್ಚ-ಹಸಿರಿನ ಪ್ರಕೃತಿ ಸೊಬಗು ಮನಸ್ಸು ಹಾಗೂ ದೇಹಕ್ಕೆ ನವೋತ್ಸಾಹ ತುಂಬುವುದು.

ಧೋ ಎಂದು ಸುರಿಯುವ ಮಳೆಗಿಂತ ಜಿಟಿ-ಜಿಟಿ ಸುರಿಯುವ ಮಳೆಯಲ್ಲಿ ಸುತ್ತಾಡಲು ತುಂಬಾ ಮಜವೆನಿಸುವುದು. ಈಗ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಹೋದರಂತೂ ಸ್ವರ್ಗ ಲೋಕವೆಂದರೆ ಹೀಗಿರಬಹುದೆಂದು ಅನಿಸದೆ ಇರಲ್ಲ, ಮಂಜಿನಿಂದ ಆವೃತವಾಗಿರುವ ಆ ಬೆಟ್ಟ ನೋಡಲು ಅಷ್ಟೊಂದು ಮನ ಮೋಹಕವಾಗಿರುತ್ತದೆ.

ಇಲ್ಲಿಗೆ ಮಳೆಗಾಲದದ ಟ್ರಿಪ್‌ಗೆ ಬೈಕ್‌ಗಿಂತ ಕಾರಿನ ಪ್ರಯಾಣ ಸೂಕ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ