ಆ್ಯಪ್ನಗರ

ಕರ್ನಾಟಕದ ಊಟಿ ಸಕಲೇಶಪುರ

ತಮಿಳಿನಾಡಿನ ಊಟಿ ನೋಡಲು ಹೋಗಬೇಕೆನ್ನುವವರು ಕರ್ನಾಟಕದ ಊಟಿಗೆ ಭೇಟಿ ನೀಡಿದ್ದೀರಾ?

Vijaya Karnataka Web 12 Jul 2017, 6:12 pm
ತಮಿಳಿನಾಡಿನ ಊಟಿ ನೋಡಲು ಹೋಗಬೇಕೆನ್ನುವವರು ಕರ್ನಾಟಕದ ಊಟಿಗೆ ಭೇಟಿ ನೀಡಿದ್ದೀರಾ? ಬೆಂಗಳೂರಿನಿಂದ ಮಂಗಳೂರು ಅಥವಾ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳಕ್ಕೆ ಹೋಗುವಾಗ ನಿಮಗೆ ಸಕಲೇಶಪುರ ಸಿಗುತ್ತದೆ.
Vijaya Karnataka Web weekend getaways sakhleshpur
ಕರ್ನಾಟಕದ ಊಟಿ ಸಕಲೇಶಪುರ


ಬಡವರ ಊಟಿಯೆಂದೇ ಈ ಜಾಗ ಫೇಮಸ್. ವೀಕೆಂಡ್‌ನಲ್ಲಿ ಚಿಕ್ಕ ಟ್ರಿಪ್‌ ಹೋಗಿ ರಿಲ್ಯಾಕ್ಸ್ ಆಗಿ ಬರಬೇಕೆಂದು ಬಯಸುವುದಾದರೆ ಇದು ಬೆಸ್ಟ್ ಜಾಗ. ಅದರಲ್ಲೂ ಟ್ರಕ್ಕಿಂಗ್‌ ಪ್ರಿಯರಿಗಂತೂ ಈ ಸ್ಥಳ ತುಂಬಾನೇ ಇಷ್ಟವಾಗುವುದು.

ಇಲ್ಲಿಯ ದೇವಾಲಯ ಹೊಯ್ಸಳರ ಕಾಲವನ್ನು ನೆನಪಿಸುತ್ತದೆ. ಇನ್ನು ಇಲ್ಲಿಗೆ ಮಳೆಗಾಲದ ಸಮಯದಲ್ಲಿ ಹೋದರೆ ಮಂಜೆಹಳ್ಳಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಟಿಪ್ಪು ನಿರ್ಮಿಸಿರುವ ನಕ್ಷತ್ರಾಕಾರದ ಮಂಜರಾಬಾದ್ ಕೋಟೆ ಇಲ್ಲಿಯ ಮತ್ತೊಂದು ಪ್ರಮುಖ ಆಕರ್ಷಣೆ.
ಇಲ್ಲಿ ಪ್ರವಾಸಿಗರಿಗೆ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ಜೇನುಕಲ್ಲು ಗುಡ್ಡ ಹಾಗೂ ರೈಲು ಮಾರ್ಗ.

ಹಸಿರನ್ನು ಕಣ್ತುಂಬಿಕೊಳ್ಳುತ್ತಾ ಮಾಡುವ ಟ್ರಕ್ಕಿಂಗ್‌ ನಿಮಗೊಂದು ಹೊಸ ಅನುಭವ ನೀಡುವುದು. ಇನ್ನು ಅಲ್ಲಿಯ ಇತರ ಸ್ಥಳಗಳನ್ನು ಸುತ್ತಾಡಿಕೊಂಡು ಬರಬೇಕೆಂದು ಬಯಸುವುದಾದರೆ ಬಾಡಿಗೆ ಜೀಪ್‌ಗಳಿವೆ.

ಇನ್ನು ಇಲ್ಲಿ ತಂಗಲು ಹೋಮ್‌ ಸ್ಟೇ, ರೆಸಾರ್ಟ್‌ಗಳಿವೆ. ರೆಸಾರ್ಟ್‌ಗಳಲ್ಲಿ ತಂಗಲು ಒಬ್ಬರಿಗೆ ರೂ 2000-3000 ಬೇಕಾಗಬಹುದು.

ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ: ಜುಲೈ-ಜನವರಿ
ದೂರ: ಬೆಂಗಳೂರಿನಿಮದ 221 ಕಿ. ಮೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ