ಆ್ಯಪ್ನಗರ

ಇಂದೇಕೆ ಅವಳ ನೆನಪು- ಭಾಗ 24; ಆಸ್ಪತ್ರೆಯಲ್ಲಿ ಸೆಟ್ಟಲ್ಮೆಂಟ್ ಶೇಖರ್; ಮುದುಡಿದಳು ಸುಮಾ!

ದೂರದಲ್ಲಿ ದೃಷ್ಟಿ ನೆಟ್ಟ ಸುಮಾಳಿಗೆ ಬಾಗಿಲು ತೆರೆದಿದ್ದು ಅರಿವಾಗಲಿಲ್ಲ. ಜಗತ್ತೇ ಶೂನ್ಯವಾಗಿತ್ತು. ಶೇಖರನ ಅಪಘಾತ, ತನ್ನೊಡಲು ಬರಿದಾಗಿದ್ದು, ಸಂಪತ್ ತನ್ನನ್ನು ಆಟವಾಡಿಸಿದ್ದು, ಶೇಖರನನ್ನು ದಾಳವಾಗಿ ಬಳಸಿಕೊಂಡಿದ್ದು, ಅನೇಕ ತಿರುವುಗಳನ್ನು ಪಡೆದ ತನ್ನ ಬದುಕಿನ ಹಾದಿಯ ಬಗ್ಗೆ ಯೋಚಿಸುತ್ತಾ ನಿಂತವಳು, ತನ್ನ ಭುಜದ ಮೇಲೆ ಕೈ ಬಿದ್ದಾಗ ಬಿಚ್ಚಿದಳು.

Vijaya Karnataka Web 2 Oct 2021, 8:59 am
ಸುದ್ದಿ ಮಾಧ್ಯಮಗಳಲ್ಲಿ ಅಲ್ಲೋಲಕಲ್ಲೋಲ. ಎಲ್ಲೆಡೆ ಶೇಖರ, ಸುಮಾ ಹಾಗೂ ‘ಅವಳು’. ಹೇಳಿದ್ದನ್ನೇ ಹೇಳಿ, ಕೇಳಿದ್ದನ್ನೇ ಕೇಳಿ ಯಾರ ತಲೆಯೂ ಚಿಟ್ಟು ಹಿಡಿಯಲಿಲ್ಲ. ಟಿ ಆರ್ ಪಿ ಯದ್ವಾತದ್ವಾ ಏರಿದವು. ಅವನ ಇಡೀ ವೃತ್ತಿ ಜೀವನ, ವೈಯಕ್ತಿಕ ಜೀವನ, ಮತ್ತು ಇತರ ವಿವರಗಳು ಹರಿದಾಡಿ ಎಲ್ಲರ ಬಾಯಿಗೆ ಆಹಾರವಾದವು. ಪ್ರಜ್ಞೆ ತಪ್ಪಿ ಬಿದ್ದಿದ್ದ ಶೇಖರನನ್ನು ಐಸಿಯೂಗೆ ಶಿಫ್ಟ್ ಮಾಡಿ ಆಸ್ಪತ್ರೆಯ ಜಾಗವನ್ನು ‘ರೋಗಿಗಳಿಗೆ ಮಾತ್ರ’ ಎಂದು ಘೋಷಿಸಿದರು. ಆದರೂ ನುಸುಳಿ ಬರುವ ಮಾಧ್ಯಮದವರನ್ನು ತಡೆಗಟ್ಟುವುದೇ ದೊಡ್ಡ ಕೆಲಸವಾಗಿತ್ತು.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ದೂರದಲ್ಲಿ ದೃಷ್ಟಿ ನೆಟ್ಟ ಸುಮಾಳಿಗೆ ಬಾಗಿಲು ತೆರೆದಿದ್ದು ಅರಿವಾಗಲಿಲ್ಲ. ಜಗತ್ತೇ ಶೂನ್ಯವಾಗಿತ್ತು. ಶೇಖರನ ಅಪಘಾತ, ತನ್ನೊಡಲು ಬರಿದಾಗಿದ್ದು, ಸಂಪತ್ ತನ್ನನ್ನು ಆಟವಾಡಿಸಿದ್ದು, ಶೇಖರನನ್ನು ದಾಳವಾಗಿ ಬಳಸಿಕೊಂಡಿದ್ದು, ಅನೇಕ ತಿರುವುಗಳನ್ನು ಪಡೆದ ತನ್ನ ಬದುಕಿನ ಹಾದಿಯ ಬಗ್ಗೆ ಯೋಚಿಸುತ್ತಾ ನಿಂತವಳು, ತನ್ನ ಭುಜದ ಮೇಲೆ ಕೈ ಬಿದ್ದಾಗ ಬಿಚ್ಚಿದಳು.
ಇಂದೇಕೆ ಅವಳ ನೆನಪು- ಭಾಗ 23; ಸುಮಾಳನ್ನು ತೊರೆದ ಶೇಖರ್ ನ ಬದುಕಿನಲ್ಲಿ ಮತ್ತೆ ತಂಗಾಳಿ?!
ಬಂದಿದ್ದು ಸಂಪತ್ ಎಂದರಿವಾದಾಗ ಸಿಟ್ಟು, ರೋಷ, ದುಃಖ, ಅಸಹಾಯಕತೆ ಉಕ್ಕಿ ಬಂತು. ಮೂಕಳಂತೆ ನಿಂತ ಅವಳ ತೋಳು ಹಿಡಿದು ಮೆಲ್ಲನೆ ಮಂಚದ ಮೇಲೆ ಕುಳ್ಳಿರಿಸಿ, ತಾವೂ ಅಲ್ಲೇ ಖುರ್ಚಿಯ ಮೇಲೆ ಕುಳಿತರು. ‘ ಶೇಖರನ ಅಪಘಾತದಲ್ಲಿ ನನ್ನದು ಏನೂ ಪಾತ್ರವಿಲ್ಲ, ಸುಮಾ. ಇದು ಸತ್ಯ. ಸಿಟ್ಟಿನಿಂದ ಕುರುಡಾಗಿ ಆಸ್ಪತ್ರೆ ಹೊರಗಡೆ ಓಡಿದಾಗ ಆಂಬ್ಯುಲೆನ್ಸ್ ಬಂದು ಗುದ್ದಿದೆ. ತಲೆಗೆ ಏಟಾಗಿದೆ, ಆದರೆ ಜೀವಕ್ಕೆ ಭಯವಿಲ್ಲ ಎನ್ನುತ್ತಿದ್ದಾರೆ ಡಾಕ್ಟರ್ಗಳು” ಅವರ ಮಾತುಗಳು ಅವಳಿಗೆ ಯಾವ ಸಾಂತ್ವಾನ ನೀಡಲಿಲ್ಲ. ಸುಮ್ಮನೆ ಕುಳಿತಿದ್ದ ಅವಳನ್ನು ನೋಡಿ ಮೆಲ್ಲನೆ ತಲೆ ಸವರಿದರು. ‘ಜಾಸ್ತಿ ಯೋಚಿಸಬೇಡ, ಸುಮ್ಮನೆ ರೆಸ್ಟ್ ತೊಗೋ’.
ಇಂದೇಕೆ ಅವಳ ನೆನಪು- ಭಾಗ 21 :"ಮಡದಿಯ ಬಸಿರು, ಪತಿಯ ಆಟ"; ಸೆಟ್ಟಲ್ಮೆಂಟ್ ಮಾಡಿಕೊಂಡನೇ ಶೇಖರ?!
ಅಷ್ಟರಲ್ಲಿ ಅವಳ ತಂದೆ , ತಾಯಿ ಒಳಬಂದರು. ಅವರಿಗೆ ಕೈ ಮುಗಿದು ಸಮಾಧಾನದ ಮಾತುಗಳನ್ನು ಹೇಳಿ ಆತ ಹೊರಟ. ಕೆಲವೇ ನಿಮಿಷದಲ್ಲಿ ಆತನ ಸೆಕ್ರೆಟರಿ ದೊಡ್ಡ ಹೂವಿನ ಬೊಕೆ, ಹಣ್ಣುಗಳ ಬುಟ್ಟಿ ತಂದಿಟ್ಟು, ದೊಡ್ಡ ಮೊತ್ತದ ಚೆಕ್ ಸುಮಾಳ ಕೈಗಿತ್ತ. ಕಣ್ಸನ್ನೆಯಲ್ಲೇ ‘ ಇನ್ನೂ ಬೇಕಾದರೂ ಸರ್ ಕೊಡುವರು’ ಎಂದು ನುಡಿದು ಹೊರಟ ಆತನ ಬೆನ್ನನ್ನೇ ನೋಡುತ್ತಾ ಸುಮಾ ಹಾಗೆಯೇ ಕುಸಿದಳು. ಇಡೀ ಪ್ರಪಂಚವೇ ತನ್ನನ್ನು ನೋಡಿ ನಗುತ್ತ ಇದೆ, ತಾನು ಸಂಪೂರ್ಣವಾಗಿ ಸೋತು ಹೋದೆ ಎಂಬ ಭಾವ ಉಕ್ಕಿ, ಕಣ್ಣೀರು ಧಾರಾಕಾರವಾಗಿ ಹರಿಯಿತು. ಮಗಳ ಅವಸ್ಥೆ ಕಂಡು ತಂದೆ, ತಾಯಿಗೆ ದಿಕ್ಕು ತೋಚದಂತಾಯಿತು.
ಇಂದೇಕೆ ಅವಳ ನೆನಪು- ಭಾಗ 22: ಸುಮಾ-ಶೇಖರ್ ಸಂಬಂಧ; ಮನದಲ್ಲಿ ಭುಗಿಲೆದ್ದ ಕಾರ್ಮೋಡ!
ಯಾರ ಕಣ್ಣೀರು, ಸಿಟ್ಟು, ಕೋಪ,ಏನೇ ಇರಲಿ, ಕಾಲ ತನ್ನ ಪಾಡಿಗೆ ತಾನು ಸಾಗುತ್ತಿತ್ತು. ದಿನಗಳು ಕಳೆದು ವಾರವಾಯಿತು. ವಾರಗಳು ತಿಂಗಳಾಗುತ್ತಾ ಬಂದಿತು. ಸೆಟ್ಟಲ್ಮೆಂಟ್ ಧಾರಾವಾಹಿ ಶೇಖರನ ಪಾತ್ರವಿಲ್ಲದೆ ಹಾಯಾಗಿ ಮುಂದೆ ಸಾಗುತ್ತಿತ್ತು. ಪ್ರೇಕ್ಷಕರ ಮನಸ್ಸು ಬೇರೆಡೆ ತಿರುಗಿಸುವಲ್ಲಿ ಕತೆ, ಚಿತ್ರಕತೆ ಬರೆಯುವವರು ಯಶಸ್ವಿಯಾಗಿದ್ದರು. ಅಚ್ಚರಿಯ ವಿಷಯವೆಂದರೆ ಅವಳ ಪಾತ್ರವೂ ಕಳಾಹೀನವಾಗತೊಡಗಿದ್ದು. ನಿಧಾನವಾಗಿ ಆ ಪಾತ್ರವೂ ಮೂಲೆಗುಂಪಾಗುತ್ತಾ ಬರುತ್ತಿದೆ ಎಂದು ಎಲ್ಲರಿಗೂ ಅನಿಸತೊಡಗಿತು. ಏನಾದರೂ ಮಾಡಿ ಮತ್ತೆ ಈ ಧಾರಾವಾಹಿಯ ರೇಟಿಂಗ್ ಜಾಸ್ತಿ ಮಾಡಲೇಬೇಕು ಎಂದು ನಿರ್ಮಾಪಕ, ನಿರ್ದೇಶಕರು ನಿರ್ಧರಿಸಿದರು.
(ಮುಂದುವರಿಯುವುದು)
ಧಾರಾವಾಹಿ ಕಥೆ: ಸಹನಾ ಪ್ರಸಾದ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ