ನಿದ್ದೆ ಕಿತ್ತುಕೊಂಡ ಉರಿ ನೆನಪುಗಳೇ
ಅಷ್ಟೂ ಒಳ ಜೀವಗಳೇ-
ಒಳಗಿನದೆಲ್ಲವ ಖಾಲಿ ಮಾಡಿ
ಕುಂತ ನನ್ನೊಳಗೆ ಏನಿದೆ ಹೇಳಿ?
ಇಗೋ ಈ ಕಣ್ಣು ಕೊಡಲೇ?
ಈ ಕಿವಿ ಈ ಮೂಗು ಈ ನಾಲಿಗೆ ಈ ಚರುಮ?
ದುಃಖದ ಆಸಾಮಿ ನಾ-
ನಕ್ಕಿದ್ದು ನೆನಪಿಲ್ಲ.
ಹೌದು, ಪೊಗರು ತುಂಬಿದೆ ಕಣ್ಣಲ್ಲಿ:
ನೀವು ಕೊಟ್ಟುದೇ.
ಸಿಟ್ಟು-ಸೆಡವಿದೆ: ನೀವು ಅಣಿ ಮಾಡಿಹುದೇ.
ಮೊಂಡುತನ- ನಿಮ್ಮುಡುಗೊರೆಯೇ.
ಸುಡಿ! ನಿಮ್ಮದೆನ್ನುವ ಈ ಹಗಲನು.
ಉರಿಹಚ್ಚಿ ಬರುವ ಇರುಳಿಗೂ.
ಉರುಬಿಬಿಡಿ ಉಷೆಯ; ಮುಸ್ಸಂಜೆಯ ಮುರುಟಿಬಿಡಿ!
ನೀವು ತಾನೆ ಜಗದೊಡೆಯರು?
ಕಸುಬು ಕಿತ್ತುಕೊಂಡವರೆ ಕರಿಬಣ್ಣ ಬಿಟ್ಟಿರಿ ಹಾಗೆ!
ಇಗೋ ಆಡಿ ಚೆಂಡಾಟವ ನನ್ನ ರುಂಡದಿಂದ.
ದೂರ ಹೋದುದ ನಾನೇ ಎತ್ತಿ ತಂದುಕೊಡುವೆ-
ನಿಮ್ಮಪ್ಪಣೆಯಂತೆ.
ಆಡಿ ಆಟ. ಈ ಬಯಲು ನಿಮ್ಮದೇ; ಕಾಲ ಕೂಡ.
ನಾನು ಒಬ್ಬ ಮಾತ್ರವೇ ಅಲ್ಲ-
ನೂರಾರು ತಲೆಮಾರು.
* ಕೆ ಪಿ ಮೃತ್ಯುಂಜಯ
ಕಾರ್ಕಳ ತಾಲೂಕು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಇದುವರೆಗೆ ಐದು ಕವನ ಸಂಕಲನ ಹೊರತಂದಿದ್ದಾರೆ. ಆರನೇ ಸಂಕಲನದ ಹಸ್ತಪ್ರತಿಗೆ ಇತ್ತೀಚೆಗೆ ‘ವಿಭಾ’ ಪ್ರಶಸ್ತಿ ಲಭಿಸಿದೆ.
ಅಷ್ಟೂ ಒಳ ಜೀವಗಳೇ-
ಒಳಗಿನದೆಲ್ಲವ ಖಾಲಿ ಮಾಡಿ
ಕುಂತ ನನ್ನೊಳಗೆ ಏನಿದೆ ಹೇಳಿ?
ಇಗೋ ಈ ಕಣ್ಣು ಕೊಡಲೇ?
ಈ ಕಿವಿ ಈ ಮೂಗು ಈ ನಾಲಿಗೆ ಈ ಚರುಮ?
ದುಃಖದ ಆಸಾಮಿ ನಾ-
ನಕ್ಕಿದ್ದು ನೆನಪಿಲ್ಲ.
ಹೌದು, ಪೊಗರು ತುಂಬಿದೆ ಕಣ್ಣಲ್ಲಿ:
ನೀವು ಕೊಟ್ಟುದೇ.
ಸಿಟ್ಟು-ಸೆಡವಿದೆ: ನೀವು ಅಣಿ ಮಾಡಿಹುದೇ.
ಮೊಂಡುತನ- ನಿಮ್ಮುಡುಗೊರೆಯೇ.
ಸುಡಿ! ನಿಮ್ಮದೆನ್ನುವ ಈ ಹಗಲನು.
ಉರಿಹಚ್ಚಿ ಬರುವ ಇರುಳಿಗೂ.
ಉರುಬಿಬಿಡಿ ಉಷೆಯ; ಮುಸ್ಸಂಜೆಯ ಮುರುಟಿಬಿಡಿ!
ನೀವು ತಾನೆ ಜಗದೊಡೆಯರು?
ಕಸುಬು ಕಿತ್ತುಕೊಂಡವರೆ ಕರಿಬಣ್ಣ ಬಿಟ್ಟಿರಿ ಹಾಗೆ!
ಇಗೋ ಆಡಿ ಚೆಂಡಾಟವ ನನ್ನ ರುಂಡದಿಂದ.
ದೂರ ಹೋದುದ ನಾನೇ ಎತ್ತಿ ತಂದುಕೊಡುವೆ-
ನಿಮ್ಮಪ್ಪಣೆಯಂತೆ.
ಆಡಿ ಆಟ. ಈ ಬಯಲು ನಿಮ್ಮದೇ; ಕಾಲ ಕೂಡ.
ನಾನು ಒಬ್ಬ ಮಾತ್ರವೇ ಅಲ್ಲ-
ನೂರಾರು ತಲೆಮಾರು.
* ಕೆ ಪಿ ಮೃತ್ಯುಂಜಯ
ಕಾರ್ಕಳ ತಾಲೂಕು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಇದುವರೆಗೆ ಐದು ಕವನ ಸಂಕಲನ ಹೊರತಂದಿದ್ದಾರೆ. ಆರನೇ ಸಂಕಲನದ ಹಸ್ತಪ್ರತಿಗೆ ಇತ್ತೀಚೆಗೆ ‘ವಿಭಾ’ ಪ್ರಶಸ್ತಿ ಲಭಿಸಿದೆ.