‘ಏಕೆ ನಿಯಮಗಳನ್ನು ಪ್ರೀತಿಸಿದೆ ನೀನು?’- ಡಾ.ಸಹನಾ ಪ್ರಸಾದ್ ಅವರ ಕವನ
ಲೇಖಕಿ, ಪ್ರಾಧ್ಯಾಪಕಿಯೂ ಆಗಿರುವ ಡಾ.ಸಹನಾ ಪ್ರಸಾದ್ ಅವರು ನೂರಾರು ಲೇಖನ, ಕಥೆ, ಕವನಗಳನ್ನು ಬರೆದಿದ್ದಾರೆ. ಕಾದಂಬರಿಗಾರ್ತಿಯೂ ಆಗಿರುವ ಇವರು ಇತ್ತೀಚೆಗೆ 'ಇಂದೇಕೆ ಅವಳ ನೆನಪು' ಎಂಬ ಧಾರಾವಾಹಿಯನ್ನು ಬರೆದಿದ್ದರು. ಇದು ವಿಜಯ ಕರ್ನಾಟಕದಲ್ಲಿ 50 ಕಂತುಗಳನ್ನು ಪೂರೈಸಿ ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಪ್ರತಿಭಾನ್ವಿತ ಕವಿಯೂ ಆಗಿರುವ ಡಾ.ಸಹನಾ ಪ್ರಸಾದ್ ಅವರ ಕವನವೊಂದು ಇಲ್ಲಿದೆ.
Vijaya Karnataka Web 26 Jun 2022, 3:09 pm
ನನ್ನ ಪ್ರೀತಿಸಬೇಕಿತ್ತು ಇನಿಯ
ಪರಿಗಣಿಸಿದ್ದೆ ನಿನ್ನನ್ನು ನಾ ಗೆಳೆಯ.
ಆದರೆ ನೀ ಅರಿತಿಲ್ಲ ನನ್ನನ್ನು
ಬೆಳಗಲು ಬಂದೆನೆಂದು ನಿನ್ನ ಬಾಳನ್ನು
ಎಲ್ಲರನ್ನೂ ಬಿಟ್ಟು ನಿನ್ನ ಜತೆಗೆ
ಬರೆಯಲು ಮುನ್ನುಡಿ ನಿನ್ನ ಬಾಳಿನ ಕತೆಗೆ.
ಆದರೆ ನೀನು ಅರಿಯಲಿಲ್ಲ ನನ್ನ ಮನ
ಪ್ರೀತಿಯಿಂದ ನಾ ಬರೆದ ಕವನ.
ತಿಳಿಯದೆ ನಿನಗೆ ಪ್ರಿಯತಮ
ಪ್ರೀತಿಯಲ್ಲಿ ಇರುವುದಿಲ್ಲ ನಿಯಮ.
ಜತೆಯಲ್ಲಿ ಮಿಡಿವ ಜೀವಗಳು
ಒಟ್ಟಿಗೆ ವಿಹರಿಸುವ ಪ್ರಣಯಿಗಳು
ಬಯಸುವುದಿಲ್ಲ ಕಟ್ಟಲೆಗಳು
ಹೂಡುವುದಿಲ್ಲ ದಾವೆಗಳು
ಮಾಡುವುದಿಲ್ಲ ದೂಷಣೆಗಳು.
ಆದರೆ ನಿನಗೆ ಬೇಕಾಯ್ತು ಕಾಯ್ದೆಗಳು
ಷರತ್ತುಗಳು, ಒಪ್ಪಂದಗಳು
ಪ್ರೀತಿಸಲು ನೀ ಹಾಕಿದೆ ಹಲವಾರು
ಕರಾರುಗಳು ನೂರಾರು
ಹೀಗಿದ್ದರೆ ಮಾತ್ರ ಪ್ರೀತಿ
ಹೇಳಲು ಬಂದೆ ನೀತಿ.
ಆದರೆ ಷರತ್ತು ಇರುವ ಒಲವು
ಸಂತಸ ನೀಡುವುದಿಲ್ಲ ಕೊಂಚವೂ.
ಸಂತ್ರಸ್ತೆ ಎಂಬ ಭಾವನೆ
ಮೂಡುವುದು ಮನದಲ್ಲಿ ದಟ್ಟಣೆ .
ಹಿಂದೆಗೆದುಕೊ ನಿನ್ನ ಪ್ರೀತಿ
ಇದಲ್ಲ ಒಲುಮೆಯ ರೀತಿ!!
ಪರಿಗಣಿಸಿದ್ದೆ ನಿನ್ನನ್ನು ನಾ ಗೆಳೆಯ.
ಆದರೆ ನೀ ಅರಿತಿಲ್ಲ ನನ್ನನ್ನು
ಬೆಳಗಲು ಬಂದೆನೆಂದು ನಿನ್ನ ಬಾಳನ್ನು
ಎಲ್ಲರನ್ನೂ ಬಿಟ್ಟು ನಿನ್ನ ಜತೆಗೆ
ಬರೆಯಲು ಮುನ್ನುಡಿ ನಿನ್ನ ಬಾಳಿನ ಕತೆಗೆ.
ಆದರೆ ನೀನು ಅರಿಯಲಿಲ್ಲ ನನ್ನ ಮನ
ಪ್ರೀತಿಯಿಂದ ನಾ ಬರೆದ ಕವನ.
ತಿಳಿಯದೆ ನಿನಗೆ ಪ್ರಿಯತಮ
ಪ್ರೀತಿಯಲ್ಲಿ ಇರುವುದಿಲ್ಲ ನಿಯಮ.
ಜತೆಯಲ್ಲಿ ಮಿಡಿವ ಜೀವಗಳು
ಒಟ್ಟಿಗೆ ವಿಹರಿಸುವ ಪ್ರಣಯಿಗಳು
ಬಯಸುವುದಿಲ್ಲ ಕಟ್ಟಲೆಗಳು
ಹೂಡುವುದಿಲ್ಲ ದಾವೆಗಳು
ಮಾಡುವುದಿಲ್ಲ ದೂಷಣೆಗಳು.
ಆದರೆ ನಿನಗೆ ಬೇಕಾಯ್ತು ಕಾಯ್ದೆಗಳು
ಷರತ್ತುಗಳು, ಒಪ್ಪಂದಗಳು
ಪ್ರೀತಿಸಲು ನೀ ಹಾಕಿದೆ ಹಲವಾರು
ಕರಾರುಗಳು ನೂರಾರು
ಹೀಗಿದ್ದರೆ ಮಾತ್ರ ಪ್ರೀತಿ
ಹೇಳಲು ಬಂದೆ ನೀತಿ.
ಆದರೆ ಷರತ್ತು ಇರುವ ಒಲವು
ಸಂತಸ ನೀಡುವುದಿಲ್ಲ ಕೊಂಚವೂ.
ಸಂತ್ರಸ್ತೆ ಎಂಬ ಭಾವನೆ
ಮೂಡುವುದು ಮನದಲ್ಲಿ ದಟ್ಟಣೆ .
ಹಿಂದೆಗೆದುಕೊ ನಿನ್ನ ಪ್ರೀತಿ
ಇದಲ್ಲ ಒಲುಮೆಯ ರೀತಿ!!