ಆ್ಯಪ್ನಗರ

ಭಾವ ಲೀಲೆ

ಭಾವ ಲೀಲೆ ಹಾಗೆ ಹೀಗೆ ಹಲ್ಲಿಯ ಲೊಚಗುಡಿಕೆ ಮರಕುಟಿಗದ ಕರಕರ ಗುಬ್ಬಚ್ಚಿಯ ಚಿಂವ್‌ ಚಿಂವ್‌ ಮರದ ಟೊಂಗೆಯಿಂದ ನೆಗೆವ ಕಪಿ ಎದೆ ಹೂ ಅರಳುತ್ತವೆ ಶಿಶಿರದ ಚಳಿಗೆ ...

Vijaya Karnataka Web 16 Jun 2019, 5:00 am
Vijaya Karnataka Web facebook poem
ಭಾವ ಲೀಲೆ
ಭಾವ ಲೀಲೆ



ಹಾಗೆ ಹೀಗೆ

ಹಲ್ಲಿಯ ಲೊಚಗುಡಿಕೆ

ಮರಕುಟಿಗದ ಕರಕರ

ಗುಬ್ಬಚ್ಚಿಯ ಚಿಂವ್‌ ಚಿಂವ್‌

ಮರದ ಟೊಂಗೆಯಿಂದ ನೆಗೆವ ಕಪಿ

ಎದೆ ಹೂ ಅರಳುತ್ತವೆ

ಶಿಶಿರದ ಚಳಿಗೆ ಪುಳಕಿಸಿ

ಹಸಿ ಚಿಗುರು ಹೂವ ಮಾಯೆ

ಮಾವು ಗೇರು ಮೋಡಿ

ವಸಂತನ ಮರೆಯಲ್ಲಿ

ನಾದ ಕೋಗಿಲೆ

ಆಳದ ರಾಗ ಪಲ್ಲವಿ

ಗಾಳಿಯಲಿ ಸುಗಂಧದಂತೆ

ತೇಲಿ ಬಂದು ಹೋದವರು

ಪರಿಮಳದ ಸ್ಪರ್ಶವಾಗುವರು

ಕತೆ ಕವನದ ಧಾತುವಾಗಿ

ಕರಗದ ಅಕ್ಷ ರವಾಗುವರು

ಓ ಉಸಿರ ವ್ಯಾಪಾರಿ,

ಹೂ ತೇರ ಮನಕೆ ತಂದವನು

ಕಣ್ಣಿನೊಳಗೆ ನಕ್ಷ ತ್ರ ನೆಟ್ಟವನು?

ಮನೆ, ಮನಕೆ ನದಿ ಕಡಲು ಹರಿಯಬಿಟ್ಟವನು

ನೀನಲ್ಲವೇ..

ಈಗಲಾದರೂ ಆಗು

ಕವನ

ಲೀಲೆಗೆ

ಧ್ಯಾನ ಪಕಳೆ

ಅಕ್ಷ ರ ತಂತು

ಧಿ- ಪೂರ್ಣಿಮಾ ಸುರೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ