ಕನ್ನಡ ಕಂಪು
ಕನ್ನಡ ಎಂದರೆ ಅದೇ ಹಳದಿ ಕೆಂಪಿನ ಲಾಂಛನ
ತಿಂಗಳ ತುಂಬ ಗೆಲ್ಗೆ ಬಾಳ್ಗೆಗಳ ದಿಬ್ಬಣ
ಹಾಡು, ಹರಟೆ ವೇದಿಕೆ
ರಸ್ತೆ ಬೀದಿಗೆ ರಥಗಳ ಸಾಲು, ಅಷ್ಟೇನಾ?
ಕಸ್ತೂರಿ ಪರಿಮಳ ಎಲ್ಲರಿಗೂ ನಾಟಿದೆ
ಗಂಧದ ಕಾಡು, ನಾಡ ತುಂಬ ಹಬ್ಬಿದೆ
ಜ್ಞಾನಕ್ಕೆ ಪೀಠವಾದವರು ಎಂಟು ಜನ
ಕನ್ನಡಮ್ಮನಿಗೆ ಮಕ್ಕಳಾದರು ಆರುಕೋಟಿ ಜನ|
ಹೊಗೆ ಆಡಿದೆ ಉತ್ತರ ದಕ್ಷಿಣಗಳ ಪ್ರತ್ಯೇಕ ದಿಕ್ಕಿಗೆ
ಯೋಜನೆಗಳು ಬಿದ್ದಿವೆ ನನೆಗುದಿಗೆ
ಕನ್ನಡಿಗರಿಗಿದ್ದಿದ್ದೆ ಕೂಗಾಟ
ನರಳಾಟ ಉದ್ಯೋಗಕ್ಕೆ ಪರದಾಟ|
ಅಆಇಈ ಅರಸಿ ಬಂದ ಮಕ್ಕಳಿಗೆ
ಶಾಲೆಗಳ ಎತ್ತಂಗಡಿ
ಕಲಿಸಲು ನಿಂತ ಬೋಧಕರಿಗೆ
ಗಣತಿ, ಚುನಾವಣೆ, ಬಿಸಿಯೂಟದ ತಕ್ಕಡಿ|
ಕರುನಾಡು ಕೊಡವಿಕೊಳ್ಳುವುದೆಂದು?
ಇಚ್ಛಾಶಕ್ತಿ ಉದಯಿಸಬೇಕಿದೆ ಮುಂದು|
ಭೇದಿಸುವರೆ ಕನ್ನಡಿಗನಿಗಾಗುವ ಮೋಸವ?
ಆಗುವುದು ಅಂದು ನಿತ್ಯಸತ್ಯದ ರಾಜ್ಯ ಉತ್ಸವ
-ರವೀಂದ್ರಸಿಂಗ್, ಕೋಲಾರ
ರವೀಂದ್ರ ಸಿಂಗ್ ಕೋಲಾರದ ಬಂಗಾರಪೇಟೆಯವರು. ಖಾಸಗಿ ಕಾಲೇಜಿನಲ್ಲಿ ಆಡಳಿತಾಧಿಕಾರಿ. 'ದಿಕ್ಕಾಪಾಲು' ಪ್ರಕಟಿತ ಕಾದಂಬರಿ, ಕಪ್ಪು ಫ್ರೇಮಿನ ಕನ್ನಡಕ, ಋುತುಗಾನ ಪ್ರಕಟಿತ ಕವನ ಸಂಕಲನಗಳು. ಇನ್ನೆರಡು ಪುಸ್ತಕಗಳು ಅಚ್ಚಿನಲ್ಲಿವೆ.
ತಿಂಗಳ ತುಂಬ ಗೆಲ್ಗೆ ಬಾಳ್ಗೆಗಳ ದಿಬ್ಬಣ
ಹಾಡು, ಹರಟೆ ವೇದಿಕೆ
ರಸ್ತೆ ಬೀದಿಗೆ ರಥಗಳ ಸಾಲು, ಅಷ್ಟೇನಾ?
ಕಸ್ತೂರಿ ಪರಿಮಳ ಎಲ್ಲರಿಗೂ ನಾಟಿದೆ
ಗಂಧದ ಕಾಡು, ನಾಡ ತುಂಬ ಹಬ್ಬಿದೆ
ಜ್ಞಾನಕ್ಕೆ ಪೀಠವಾದವರು ಎಂಟು ಜನ
ಕನ್ನಡಮ್ಮನಿಗೆ ಮಕ್ಕಳಾದರು ಆರುಕೋಟಿ ಜನ|
ಹೊಗೆ ಆಡಿದೆ ಉತ್ತರ ದಕ್ಷಿಣಗಳ ಪ್ರತ್ಯೇಕ ದಿಕ್ಕಿಗೆ
ಯೋಜನೆಗಳು ಬಿದ್ದಿವೆ ನನೆಗುದಿಗೆ
ಕನ್ನಡಿಗರಿಗಿದ್ದಿದ್ದೆ ಕೂಗಾಟ
ನರಳಾಟ ಉದ್ಯೋಗಕ್ಕೆ ಪರದಾಟ|
ಅಆಇಈ ಅರಸಿ ಬಂದ ಮಕ್ಕಳಿಗೆ
ಶಾಲೆಗಳ ಎತ್ತಂಗಡಿ
ಕಲಿಸಲು ನಿಂತ ಬೋಧಕರಿಗೆ
ಗಣತಿ, ಚುನಾವಣೆ, ಬಿಸಿಯೂಟದ ತಕ್ಕಡಿ|
ಕರುನಾಡು ಕೊಡವಿಕೊಳ್ಳುವುದೆಂದು?
ಇಚ್ಛಾಶಕ್ತಿ ಉದಯಿಸಬೇಕಿದೆ ಮುಂದು|
ಭೇದಿಸುವರೆ ಕನ್ನಡಿಗನಿಗಾಗುವ ಮೋಸವ?
ಆಗುವುದು ಅಂದು ನಿತ್ಯಸತ್ಯದ ರಾಜ್ಯ ಉತ್ಸವ
-ರವೀಂದ್ರಸಿಂಗ್, ಕೋಲಾರ
ರವೀಂದ್ರ ಸಿಂಗ್ ಕೋಲಾರದ ಬಂಗಾರಪೇಟೆಯವರು. ಖಾಸಗಿ ಕಾಲೇಜಿನಲ್ಲಿ ಆಡಳಿತಾಧಿಕಾರಿ. 'ದಿಕ್ಕಾಪಾಲು' ಪ್ರಕಟಿತ ಕಾದಂಬರಿ, ಕಪ್ಪು ಫ್ರೇಮಿನ ಕನ್ನಡಕ, ಋುತುಗಾನ ಪ್ರಕಟಿತ ಕವನ ಸಂಕಲನಗಳು. ಇನ್ನೆರಡು ಪುಸ್ತಕಗಳು ಅಚ್ಚಿನಲ್ಲಿವೆ.