ಆ್ಯಪ್ನಗರ

ಹೊಸ ಪುಸ್ತಕ, ಪುಸ್ತಕ, ಸಾಹಿತ್ಯ

Vijaya Karnataka 5 Jan 2019, 5:33 pm
ಪ್ರೇಮದ ಕೊಳದಲಿ ಮೀಯಲು...
Vijaya Karnataka Web poem
ಹೊಸ ಪುಸ್ತಕ, ಪುಸ್ತಕ, ಸಾಹಿತ್ಯ




ಸವಿಯದ ಮಾತುಗಳಿಗಿಂತ

ನುಡಿಯದ ಮುತ್ತಿನಹಾರದ

ಸೇತುವೆಯದ್ದೇ ಮೇಲುಗೈ

ನಮ್ಮಿಬ್ಬರ ನಡುವೆ,

ಒಮ್ಮೆಯಾದರೂ ತುಂಡರಿಸಿ

ನೋಡಬೇಕಿತ್ತು,

ಅನುರಾಗ ಚಿಮ್ಮುತ್ತಿತ್ತೇನೋ!?

ಬಿಸಿಯಪ್ಪುಗೆ, ಚುಂಬನ...

ನಾಲ್ಕುಗೋಡೆಯೊಳಗೇ ಸೀಮಿತ

ಎಲ್ಲೆ ದಾಟಿದ ಮೇಲೆ

ನೀ ಯಾರೋ ನಾ ಯಾರೋ,

ಬೆರಳೆಣಿಕೆಯನೂ ಮೀರಿ

ವಸಂತಗಳು ಬಂದು ಹೋದವು

ಇಳೆ ತಬ್ಬಿದ ಮಳೆಯಲಿ

ಕೌತುಕ, ಆಡಂಬರ, ಸಡಗರ...

ಒಂಟಿತನ, ನೋವು, ವಿರಹದ್ದೇ

ಕಾರುಬಾರು ನನ್ನಲಿ

ನಾಳೆಗಳ ನೆಪವೊಡ್ಡಿ

ಗಳಿಕೆಯನೇ ಗಮ್ಯವಾಗಿಸಿ

ಮರೀಚಿಕೆಯ ಬೆನ್ನಹತ್ತಿದೆ,

ಜಾರಿ ಬಿದ್ದಿದ್ಯಾವಾಗ

ಪ್ರೇಮದ ಹೆಗಲ ಚೀಲ ?

ಕತ್ತರಿ ಬಿದ್ದದ್ಯಾವಾಗ

ಸವಿ ಸನಿಹದ ಕಿಸೆಗೆ ?

ಮುಟ್ಟಿ ನೋಡಿಕೊಳ್ಳಲೂ

ಪುರುಸೊತ್ತಿಲ್ಲ ನಿನಗೆ

ಒಬ್ಬಳೇ ಏರಿ ಇಳಿದಾಗಿದೆ

ವೇದನೆಯ ಶಿಖರವ

ನಿಟ್ಟುಸಿರು, ನಿರಾಸೆಗಳೇ

ಕಣಿವೆಯುದ್ದಕೂ,

ಬದುಕೇ ಭ್ರಮನಿರಸ

ವಿರಕ್ತಯಾಗ,

ನಿಲ್ಲದ ನಿವೇದನೆ ನನ್ನದು

ಪ್ರೇಮದ ಪನ್ನೀರಿನ ಕೊಳದಲಿ

ನಿತ್ಯ ಮೀಯಲು...

ಧಿಧಿಧಿಧಿಧಿಧಿಧಿಧಿ

- ಜಮುನಾ ರಾಣಿ ಹೆಚ್‌.ಎಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ