ಸಣ್ಣ ಕಥೆ: ಸೀತಾ ಕೇಶವ, ಸಿಡ್ನಿ
ಹೊರಗಡೆ ಜೋರು ಮಳೆಯು ಬರುತ್ತಿತ್ತು.. ಜಲಜ ಫಿಲ್ಟರ್ ಸ್ಟ್ರಾಂಗ್ ಕಾಫಿ ಹಿಡಿದು ಪೇಪರ್ ಓದುತ್ತಿದ್ದವಳಿಗೆ , 'ಕೆಫೀನ್' ಮಹತ್ವವೊ ಏನೋ, ’ಎಲ್ರೂ ಕೊರೊನಾ ಕೊರೊನಾ’ ಅಂತಾರೆ ಅದೇ ಹೆಸರಿಂದು ಕಾರಿದೆ ಅಲ್ಲವಾ?’ ಅವಳಿಗೆ ಜ್ಞಾನೋದಯವಾಯಿತು. ಟಯೋಟ ಕಂಪನಿಯವರು ತಯಾರಿಸೋ ಕಾರೆಲ್ಲಾ ’ಕ, ಕ’ ಗಳೇ - ಕರೋಲಾ, ಕ್ಯಾಮ್ರಿ, ಕ್ರೋನ್ ಹೀಗೆ. ಅವುಗಳ ಹೆಸರು ಕೇಳುವುದು ಕಡಿಮೆಯಾಗುತ್ತಿರುವುದರಿಂದಲೋ ಏನೋ ಬಚ್ಚಿಟ್ಟುಕೊಂಡಿದ್ದ ಮಹಾಮಾರಿ ’ಕೊರೊನಾ ’ ಕೋವಿಡ್-19 ಪಾನ್ಡೆಮಿಕ್ ’ನಾನು ಇಲ್ಲೇ ಇದ್ದೀನಿ ಎಂದು ದೇಶವನ್ನೆಲ್ಲಾ ಒಂದೇ ಬಾರಿಗೆ ಆಕ್ರಮಿಸಿಕೊಂಡು ಬಿಟ್ಟಿತಲ್ಲಾ ಅಂತ ಗೆಳತಿ ವನಜಳಿಗೆ ಫೋನ್ ಮಾಡಿದಳು.
ಆಚಾರ್ಯ ಚಾಣಕ್ಯನ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..! ಯಾರೀ ಚಾಣಕ್ಯ.?
ಜಲಜ, ವನಜ ಆಗಾಗ್ಗೆ ಫೋನ್ ಮಾಡಿಕೊಂಡು, ವಿಚಾರ ವಿನಿಮಯ ಮಾಡ್ಕೋತಾ ಇದ್ದರು. ಆದರೆ ಈಚೆಗೆ ಸ್ವಲ್ಪ ಕಡಿಮೆಯಾಗಿ 'ನಿನ್ನ ಕಡೆದು ಏನು ’ಸ್ಪೈ ಸಿ’ ಸಮಾಚಾರ ಎಂದಾಗ 'ಹತ್ತಿದ್ದಲ್ಲ ಹರಿಯಲ್ಲ’ ಪಕ್ಕದ ಮನೆ ಜಗಳ ದಿನಾ ಇದ್ದದ್ದೇ ಬೇರೇ ಏನು ಹೇಳಿಕೊಳ್ಳುವಂತದಿಲ್ಲ ಎಂದಳು.
ಇವರುಗಳ ಇನ್ನೊಬ್ಬ ಸ್ನೇಹಿತೆ ಗಿರಿಜಾ ಇವರಿಬ್ಬರ ಹಾಗೆ ಕಾಲಕ್ಕೆ ತಕ್ಕಂತೆ ಅಷ್ಟು ಬೇಗ ಬದಲಾವಣೆಗೆ ಇಷ್ಟ ಪಡುತ್ತಿರಲಿಲ್ಲ. ಒಂದು ತರಹ ಸಂಕೋಚ, ಶಾಂತ, ಸರಳ, ತೃಪ್ತಿಕರ, ಮೃದು ಸ್ವಭಾವದವಳು ಹಾಗೂ ಮಾತು ಕಡಿಮೆ ಇವರಿಬ್ಬರಿಗೆ ಹೋಲಿಸಿದರೆ, ಒಂದು ತರಹ ’ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ’ ತರದವಳು. ಇವರಿಬ್ಬರು 'ಬಾಯಿ ಬಡಕರು'...!!
ಹಲವು ದಿವಸಗಳಿಂದ ವಿಪರೀತ ಬೇಜಾರಾಗಿ ಜಲಜ, ವನಜ ಎಲ್ಲಾ ಪತ್ತೇನೆ ಇಲ್ಲ, ಎಲ್ಲಿ ಹೋದರೋ, ಹೇಗಿದ್ದಾರೋ ಒಂದೂ ಗೊತ್ತಾಗಲಿಲ್ಲ, ಈಮೈಲ್ ಗಳಿಗೂ ಉತ್ತರವೇ ಇಲ್ಲ, ಮನೆಯ ಫೋನ್ ಗು ಫೋನೇ ಬರೊಲ್ಲಾ, ನನ್ನ ಎಲ್ಲಾ ಮರೆತುಬಿಟ್ಟಿರಬೇಕೆಂದು ಯೋಚನೆ ಮಾಡಿಕೊಂಡು ಅದೇ ಗುಂಗಿನಲ್ಲಿದ್ದಳು..!!
ನೋಡಿದರೆ..'ಆತ್ಮಗಳು ಸಂವಹನ ನಡೆಸುತ್ತವೆ'ಅಂತಾರಲ್ಲ ಹಾಗೆ, ಜಲಜ, ವನಜನು ಗಿರಿಜಾಳ ಬಗ್ಗೆ ಮಾತನಾಡುತ್ತಿರುವಾಗ, ನಾವಂತು ಈಚೆಗೆ ಈಮೈಲ್ ನೋಡುವುದೇ ಇಲ್ಲ, ಅವಳೋ ಮೊಬೈಲ್ ಫೋನ್ ಗೆ ಅಪ್ಡೇಟ್ ಆಗಿದಾಳೊ ಇಲ್ಲವೋ ಅಂತ ಜಲಜ ಈಮೈಲ್ ಚೆಕ್ ಮಾಡಿದರೆ ಗಿರಿಜಳ ಈಮೈಲ್ ನೋಡಿ, ಕನಿಕರವಾಗಿ ತಕ್ಷಣ ಈಮೈಲ್ ಮಾಡಿ, ಸಾರಿ ಸಾರಿ ಎಂದು ಕ್ಷಮೆ ಕೇಳಿ ದೂರವಾಣಿ ನಂಬರ್ ತಿಳಿಸಿ ಈಮೈಲ್ ಕಳುಹಿಸುವಂತೆ ಬರೆದಳು. ಗಿರಿಜಳೋ ಈಮೈಲ್ , ಮನೆಯ ಫೋನ್ ಕಾದು ಎದುರು ನೋಡುವ ಗಿರಾಕಿ..ಜಲಜನ ಈಮೈಲ್ ನೋಡಿ ಕಣ್ಣೀರು ತುಂಬಿಕೊಂಡು ಚಕಚಕನೆ ಮನೆಯ ದೂರವಾಣಿ ನಂಬರ್ ಕಳುಹಿಸಿದಳು..!!
'ರಂಗಸ್ಥಲಂ'ನಲ್ಲಿ ರಾಮ್ ಚರಣ್-ಸಮಂತಾ ಲಿಪ್ಲಾಕ್; ಆ ದೃಶ್ಯದ ಹಿಂದಿತ್ತು ಒಂದು ರೋಚಕ ಕಥೆ!
ಇತ್ತ ಗಿರಿಜಾಳ ಮೆಸೇಜ್ ಗಾಗಿ ಕಾದಿದ್ದ ಜಲಜಳ ಖುಶಿ, ಸಂತೋಷ ಅಷ್ಟಿಷ್ಟಲ್ಲ..!! ತಕ್ಷಣ ಕರೆಮಾಡಿ ಹೃದಯ ತುಂಬಿ ಮಾತನಾಡಿ, ಮೊದಲು ನೀನು ಮೊಬೈಲ್ ಫೋನ್ ತೆಗೆದುಕೊ, ಈಗ ಯಾರು ಹೆಚ್ಚಾಗಿ ಈಮೈಲ್ ಸಂಪರ್ಕ, ಮನೆಯ ಲ್ಯಾಂಡ್ ಲೈನ್ ಫೋನ್ ಇಟ್ಟುಕೊಳ್ಳುತ್ತಿಲ್ಲ. ಹೀಗಾಗಿ ನಾನು ಮತ್ತು ವನಜ ಮಾತನಾಡುವಾಗೆಲ್ಲಾ ನಿನ್ನನ್ನು ನೆನಸಿಕೊಳ್ಳದ ದಿವಸವೇ ಇಲ್ಲ ಎಂದು ಸುಮಾರು ಎರಡು ಗಂಟೆ ಕಾಲ ತೃಪ್ತಿಯಾಗಿ ಮಾತನಾಡಿಕೊಂಡರು. ಜಲಜ ತಕ್ಷಣವೇ ವನಜಳಿಗೂ ಫೋನ್ ಮಾಡಿ ಗಿರಿಜಾಳ ನಂಬರ್ ಕೊಟ್ಟಳು.
ಮಾರನೆಯ ದಿವಸವೇ ವನಜ ಗಿರಿಜಾಳಿಗೆ , ಏನಮ್ಮ ಪತ್ತೇನೇ ಇಲ್ಲ, ನಮ್ಮ ಸ್ನೇಹ, ಸಂಪರ್ಕ ನಿನಗೆ ಬೇಡವಾ, ಹೀಗೆ 'ಸುಮ್ಮನೆ’ ಆಗಿಬಿಟ್ಟರೆ ಹೆಂಗೆ ಎಂದಳು. ತಕ್ಷಣವೇ ನಮ್ಮದು ತಪ್ಪು, ಈಮೈಲ್ ನೋಡುವುದಿಲ್ಲ, ಬೇಜಾರಾಯಿತು. ಬೇಜಾರು ಮಾಡಿಕೊಳ್ಳಬೇಡ.. ಹೇಳು ಹೇಗಿದ್ದೀಯಾ? ಕೊರೊನಾ ಹೇಗೆ ಎದುರಿಸುತ್ತಿದ್ದೀಯಾ ಅಂತಾ ಎಲ್ಲಾ ಮಾತಾಯಿತು. ಕೊರೊನಾ ಬಂದಾಗಿನಿಂದ ಏಕೋ ಯಾರು ಫೋನ್ ಮಾಡಲ್ಲ, ಮಾತೇ ಬೇಡದಂತಿರುವರು, ಬೇಜಾರಾಗುತ್ತೆ. ಆದರೆ ನಾನು ನನ್ನ ದಿನಚರಿ ’ವಾಕ್’ ಮಾತ್ರ ತಪ್ಪಿಸುವುದಿಲ್ಲ ಅದರಲ್ಲಿ ಮನಸ್ಸಿಗೆ ಕೊಡುವ ಉಲ್ಲಾಸ ಸಂತೋಷ ನೆಮ್ಮದಿ ಅಷ್ಟಿಷ್ಟಲ್ಲ ಎಂದಾಗ, ವನಜ ನಿನ್ನ ಶಿಸ್ತು ಸಂಯಮ ನಮ್ಮಿಬ್ಬರಿಗೆ ಬರಲೇ ಇಲ್ಲ.. ನಿನಗೆ ಹ್ಯಾಟ್ಸ್ ಆಫ್..ಮೊದಲಿನಂತೆ ಎಲ್ಲಿಗೂ ಅಷ್ಟಾಗಿ ಹೋಗುವ ಹಾಗಿಲ್ಲ, ಹೋಗಬೇಕಾದರು ಮಾಸ್ಕ್ ಹಾಕಿಕೊಂಡೇ ಹೋಗಬೇಕು, ಇದೆಲ್ಲಾ ಯಾವಾಗ ಸರಿಹೋಗುತ್ತೋ ಎನಿಸಿಬಿಟ್ಟಿದೆ ಎಂದಳು.
ಆಗ ಗಿರಿಜಾಳ ಮಾತಿಗೆ ವನಜ, ನೋಡು ನೀನು ಮೊಬೈಲ್ ಫೋನ್ ಮೊದಲು ತೆಗೆದುಕೋ.. ಅದರಲ್ಲಿ ಸಾಕಷ್ಟು ಉಪಯೋಗ ಇದೆ. ನೀನು ನಮ್ಮೆಲ್ಲರೊಡನೆ ಸ್ಕೈಪ್, ಫೇಸ್ ಬುಕ್, ವಾಟ್ಸ್ ಆಪ್, ಜೂಮ್, ಮೆಸೇಜಸ್, ಹೀಗೆ ಇವುಗಳಲ್ಲೆಲ್ಲಾ ಒಡನಾಟ ಇಟ್ಟುಕೊಳ್ಳಬಹುದು. ಆಗ ನಾವು ಮೂರು ಮಂದಿಯೂ ಮೊದಲಿನಂತೆ ಪ್ರತಿದಿವಸ ನಮ್ಮ ನಮ್ಮ ದಿನಚರಿ ಎಲ್ಲಾ ಹಂಚಿಕೊಂಡು ಕೊರೊನಾ ಮರೆತು ದಿವಸ ಸಾಗಿಸಬಹುದೆಂದು ಸಾಕಷ್ಟು ತಿಳಿಹೇಳಿದಳು.
ಗಿರಿಜಾ ಕೇಳಿಸಿಕೊಳ್ಳುತ್ತಾಇದ್ದಾಳೋ ಇಲ್ಲವೋ ಪರೀಕ್ಷಿಸಲು ಆಕಡೆಯಿಂದ 'ಆ, ಹುಂ 'ಏನು ಇಲ್ಲ, ಕೇಳಿಸಿಕೊಂಡೆಯಾ, ಎಚ್ಚರವಾಗಿದ್ದೀಯಾ ತಾನೇ ಎಂದಳು. ಎಲ್ಲಾ ಕೇಳಿಸಿಕೊಂಡೆ, ನಿನ್ನ ಧ್ವನಿಯೇ ಕೇಳದೆ ಕೇಳಿದ್ದು ಸಂತೋಷವಾಗಿ ನನ್ನನ್ನು ನಾನೇ ಮರೆತುಬಿಟ್ಟೆ ಅಂದಳು ಗಿರಿಜಾ..!!
ಗಿರಿಜಾ ಬಹಳ ದೀರ್ಘವಾಗಿ ಯೋಚಿಸಿ ಹೌದಲ್ಲವಾ, ಸುಮ್ಮನೆ ಬೇಜಾರು ಮಾಡಿಕೊಂಡು ಮನಸ್ಸಿಗೆ ಮತ್ತು ದೇಹಕ್ಕೂ ಉತ್ಸಾಹವಿಲ್ಲದೆ ದಿನ ಕಳೆಯುವುದು ಎಷ್ಟು ಬೇಜಾರು ಎಂದು ಮೊಬೈಲ್ ತೆಗೆದುಕೊಳ್ಳುವ ತೀರ್ಮಾನ ಮಾಡಿಯೇಬಿಟ್ಟಳು. ತಕ್ಷಣ ಗೆಳತಿಯರಿಗು ಈಮೈಲ್ ನಲ್ಲಿ ವಿಷಯ ತಿಳಿಸಿ ಅವರುಗಳ ಮೊಬೈಲ್ ನಂಬರ್ ತಿಳಿಸುವಂತೆ ಕೇಳಿದಳು. ವನಜ ಮತ್ತು ಜಲಜಳ ಬಿಡದ ಪ್ರಯತ್ನ ಫಲಕಾರಿಯಾಗಿ ತ್ರಿವಳಿ ಸ್ನೇಹಿತರ ಸ್ನೇಹ ಸಂಪರ್ಕ ಮತ್ತೆ ಗಟ್ಟಿಯಾಯಿತು.
ಹೊರಗಡೆ ಜೋರು ಮಳೆಯು ಬರುತ್ತಿತ್ತು.. ಜಲಜ ಫಿಲ್ಟರ್ ಸ್ಟ್ರಾಂಗ್ ಕಾಫಿ ಹಿಡಿದು ಪೇಪರ್ ಓದುತ್ತಿದ್ದವಳಿಗೆ , 'ಕೆಫೀನ್' ಮಹತ್ವವೊ ಏನೋ, ’ಎಲ್ರೂ ಕೊರೊನಾ ಕೊರೊನಾ’ ಅಂತಾರೆ ಅದೇ ಹೆಸರಿಂದು ಕಾರಿದೆ ಅಲ್ಲವಾ?’ ಅವಳಿಗೆ ಜ್ಞಾನೋದಯವಾಯಿತು. ಟಯೋಟ ಕಂಪನಿಯವರು ತಯಾರಿಸೋ ಕಾರೆಲ್ಲಾ ’ಕ, ಕ’ ಗಳೇ - ಕರೋಲಾ, ಕ್ಯಾಮ್ರಿ, ಕ್ರೋನ್ ಹೀಗೆ. ಅವುಗಳ ಹೆಸರು ಕೇಳುವುದು ಕಡಿಮೆಯಾಗುತ್ತಿರುವುದರಿಂದಲೋ ಏನೋ ಬಚ್ಚಿಟ್ಟುಕೊಂಡಿದ್ದ ಮಹಾಮಾರಿ ’ಕೊರೊನಾ ’ ಕೋವಿಡ್-19 ಪಾನ್ಡೆಮಿಕ್ ’ನಾನು ಇಲ್ಲೇ ಇದ್ದೀನಿ ಎಂದು ದೇಶವನ್ನೆಲ್ಲಾ ಒಂದೇ ಬಾರಿಗೆ ಆಕ್ರಮಿಸಿಕೊಂಡು ಬಿಟ್ಟಿತಲ್ಲಾ ಅಂತ ಗೆಳತಿ ವನಜಳಿಗೆ ಫೋನ್ ಮಾಡಿದಳು.
ಆಚಾರ್ಯ ಚಾಣಕ್ಯನ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..! ಯಾರೀ ಚಾಣಕ್ಯ.?
ಜಲಜ, ವನಜ ಆಗಾಗ್ಗೆ ಫೋನ್ ಮಾಡಿಕೊಂಡು, ವಿಚಾರ ವಿನಿಮಯ ಮಾಡ್ಕೋತಾ ಇದ್ದರು. ಆದರೆ ಈಚೆಗೆ ಸ್ವಲ್ಪ ಕಡಿಮೆಯಾಗಿ 'ನಿನ್ನ ಕಡೆದು ಏನು ’ಸ್ಪೈ ಸಿ’ ಸಮಾಚಾರ ಎಂದಾಗ 'ಹತ್ತಿದ್ದಲ್ಲ ಹರಿಯಲ್ಲ’ ಪಕ್ಕದ ಮನೆ ಜಗಳ ದಿನಾ ಇದ್ದದ್ದೇ ಬೇರೇ ಏನು ಹೇಳಿಕೊಳ್ಳುವಂತದಿಲ್ಲ ಎಂದಳು.
ಇವರುಗಳ ಇನ್ನೊಬ್ಬ ಸ್ನೇಹಿತೆ ಗಿರಿಜಾ ಇವರಿಬ್ಬರ ಹಾಗೆ ಕಾಲಕ್ಕೆ ತಕ್ಕಂತೆ ಅಷ್ಟು ಬೇಗ ಬದಲಾವಣೆಗೆ ಇಷ್ಟ ಪಡುತ್ತಿರಲಿಲ್ಲ. ಒಂದು ತರಹ ಸಂಕೋಚ, ಶಾಂತ, ಸರಳ, ತೃಪ್ತಿಕರ, ಮೃದು ಸ್ವಭಾವದವಳು ಹಾಗೂ ಮಾತು ಕಡಿಮೆ ಇವರಿಬ್ಬರಿಗೆ ಹೋಲಿಸಿದರೆ, ಒಂದು ತರಹ ’ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ’ ತರದವಳು. ಇವರಿಬ್ಬರು 'ಬಾಯಿ ಬಡಕರು'...!!
ಹಲವು ದಿವಸಗಳಿಂದ ವಿಪರೀತ ಬೇಜಾರಾಗಿ ಜಲಜ, ವನಜ ಎಲ್ಲಾ ಪತ್ತೇನೆ ಇಲ್ಲ, ಎಲ್ಲಿ ಹೋದರೋ, ಹೇಗಿದ್ದಾರೋ ಒಂದೂ ಗೊತ್ತಾಗಲಿಲ್ಲ, ಈಮೈಲ್ ಗಳಿಗೂ ಉತ್ತರವೇ ಇಲ್ಲ, ಮನೆಯ ಫೋನ್ ಗು ಫೋನೇ ಬರೊಲ್ಲಾ, ನನ್ನ ಎಲ್ಲಾ ಮರೆತುಬಿಟ್ಟಿರಬೇಕೆಂದು ಯೋಚನೆ ಮಾಡಿಕೊಂಡು ಅದೇ ಗುಂಗಿನಲ್ಲಿದ್ದಳು..!!
ನೋಡಿದರೆ..'ಆತ್ಮಗಳು ಸಂವಹನ ನಡೆಸುತ್ತವೆ'ಅಂತಾರಲ್ಲ ಹಾಗೆ, ಜಲಜ, ವನಜನು ಗಿರಿಜಾಳ ಬಗ್ಗೆ ಮಾತನಾಡುತ್ತಿರುವಾಗ, ನಾವಂತು ಈಚೆಗೆ ಈಮೈಲ್ ನೋಡುವುದೇ ಇಲ್ಲ, ಅವಳೋ ಮೊಬೈಲ್ ಫೋನ್ ಗೆ ಅಪ್ಡೇಟ್ ಆಗಿದಾಳೊ ಇಲ್ಲವೋ ಅಂತ ಜಲಜ ಈಮೈಲ್ ಚೆಕ್ ಮಾಡಿದರೆ ಗಿರಿಜಳ ಈಮೈಲ್ ನೋಡಿ, ಕನಿಕರವಾಗಿ ತಕ್ಷಣ ಈಮೈಲ್ ಮಾಡಿ, ಸಾರಿ ಸಾರಿ ಎಂದು ಕ್ಷಮೆ ಕೇಳಿ ದೂರವಾಣಿ ನಂಬರ್ ತಿಳಿಸಿ ಈಮೈಲ್ ಕಳುಹಿಸುವಂತೆ ಬರೆದಳು. ಗಿರಿಜಳೋ ಈಮೈಲ್ , ಮನೆಯ ಫೋನ್ ಕಾದು ಎದುರು ನೋಡುವ ಗಿರಾಕಿ..ಜಲಜನ ಈಮೈಲ್ ನೋಡಿ ಕಣ್ಣೀರು ತುಂಬಿಕೊಂಡು ಚಕಚಕನೆ ಮನೆಯ ದೂರವಾಣಿ ನಂಬರ್ ಕಳುಹಿಸಿದಳು..!!
'ರಂಗಸ್ಥಲಂ'ನಲ್ಲಿ ರಾಮ್ ಚರಣ್-ಸಮಂತಾ ಲಿಪ್ಲಾಕ್; ಆ ದೃಶ್ಯದ ಹಿಂದಿತ್ತು ಒಂದು ರೋಚಕ ಕಥೆ!
ಇತ್ತ ಗಿರಿಜಾಳ ಮೆಸೇಜ್ ಗಾಗಿ ಕಾದಿದ್ದ ಜಲಜಳ ಖುಶಿ, ಸಂತೋಷ ಅಷ್ಟಿಷ್ಟಲ್ಲ..!! ತಕ್ಷಣ ಕರೆಮಾಡಿ ಹೃದಯ ತುಂಬಿ ಮಾತನಾಡಿ, ಮೊದಲು ನೀನು ಮೊಬೈಲ್ ಫೋನ್ ತೆಗೆದುಕೊ, ಈಗ ಯಾರು ಹೆಚ್ಚಾಗಿ ಈಮೈಲ್ ಸಂಪರ್ಕ, ಮನೆಯ ಲ್ಯಾಂಡ್ ಲೈನ್ ಫೋನ್ ಇಟ್ಟುಕೊಳ್ಳುತ್ತಿಲ್ಲ. ಹೀಗಾಗಿ ನಾನು ಮತ್ತು ವನಜ ಮಾತನಾಡುವಾಗೆಲ್ಲಾ ನಿನ್ನನ್ನು ನೆನಸಿಕೊಳ್ಳದ ದಿವಸವೇ ಇಲ್ಲ ಎಂದು ಸುಮಾರು ಎರಡು ಗಂಟೆ ಕಾಲ ತೃಪ್ತಿಯಾಗಿ ಮಾತನಾಡಿಕೊಂಡರು. ಜಲಜ ತಕ್ಷಣವೇ ವನಜಳಿಗೂ ಫೋನ್ ಮಾಡಿ ಗಿರಿಜಾಳ ನಂಬರ್ ಕೊಟ್ಟಳು.
ಮಾರನೆಯ ದಿವಸವೇ ವನಜ ಗಿರಿಜಾಳಿಗೆ , ಏನಮ್ಮ ಪತ್ತೇನೇ ಇಲ್ಲ, ನಮ್ಮ ಸ್ನೇಹ, ಸಂಪರ್ಕ ನಿನಗೆ ಬೇಡವಾ, ಹೀಗೆ 'ಸುಮ್ಮನೆ’ ಆಗಿಬಿಟ್ಟರೆ ಹೆಂಗೆ ಎಂದಳು. ತಕ್ಷಣವೇ ನಮ್ಮದು ತಪ್ಪು, ಈಮೈಲ್ ನೋಡುವುದಿಲ್ಲ, ಬೇಜಾರಾಯಿತು. ಬೇಜಾರು ಮಾಡಿಕೊಳ್ಳಬೇಡ.. ಹೇಳು ಹೇಗಿದ್ದೀಯಾ? ಕೊರೊನಾ ಹೇಗೆ ಎದುರಿಸುತ್ತಿದ್ದೀಯಾ ಅಂತಾ ಎಲ್ಲಾ ಮಾತಾಯಿತು. ಕೊರೊನಾ ಬಂದಾಗಿನಿಂದ ಏಕೋ ಯಾರು ಫೋನ್ ಮಾಡಲ್ಲ, ಮಾತೇ ಬೇಡದಂತಿರುವರು, ಬೇಜಾರಾಗುತ್ತೆ. ಆದರೆ ನಾನು ನನ್ನ ದಿನಚರಿ ’ವಾಕ್’ ಮಾತ್ರ ತಪ್ಪಿಸುವುದಿಲ್ಲ ಅದರಲ್ಲಿ ಮನಸ್ಸಿಗೆ ಕೊಡುವ ಉಲ್ಲಾಸ ಸಂತೋಷ ನೆಮ್ಮದಿ ಅಷ್ಟಿಷ್ಟಲ್ಲ ಎಂದಾಗ, ವನಜ ನಿನ್ನ ಶಿಸ್ತು ಸಂಯಮ ನಮ್ಮಿಬ್ಬರಿಗೆ ಬರಲೇ ಇಲ್ಲ.. ನಿನಗೆ ಹ್ಯಾಟ್ಸ್ ಆಫ್..ಮೊದಲಿನಂತೆ ಎಲ್ಲಿಗೂ ಅಷ್ಟಾಗಿ ಹೋಗುವ ಹಾಗಿಲ್ಲ, ಹೋಗಬೇಕಾದರು ಮಾಸ್ಕ್ ಹಾಕಿಕೊಂಡೇ ಹೋಗಬೇಕು, ಇದೆಲ್ಲಾ ಯಾವಾಗ ಸರಿಹೋಗುತ್ತೋ ಎನಿಸಿಬಿಟ್ಟಿದೆ ಎಂದಳು.
ಆಗ ಗಿರಿಜಾಳ ಮಾತಿಗೆ ವನಜ, ನೋಡು ನೀನು ಮೊಬೈಲ್ ಫೋನ್ ಮೊದಲು ತೆಗೆದುಕೋ.. ಅದರಲ್ಲಿ ಸಾಕಷ್ಟು ಉಪಯೋಗ ಇದೆ. ನೀನು ನಮ್ಮೆಲ್ಲರೊಡನೆ ಸ್ಕೈಪ್, ಫೇಸ್ ಬುಕ್, ವಾಟ್ಸ್ ಆಪ್, ಜೂಮ್, ಮೆಸೇಜಸ್, ಹೀಗೆ ಇವುಗಳಲ್ಲೆಲ್ಲಾ ಒಡನಾಟ ಇಟ್ಟುಕೊಳ್ಳಬಹುದು. ಆಗ ನಾವು ಮೂರು ಮಂದಿಯೂ ಮೊದಲಿನಂತೆ ಪ್ರತಿದಿವಸ ನಮ್ಮ ನಮ್ಮ ದಿನಚರಿ ಎಲ್ಲಾ ಹಂಚಿಕೊಂಡು ಕೊರೊನಾ ಮರೆತು ದಿವಸ ಸಾಗಿಸಬಹುದೆಂದು ಸಾಕಷ್ಟು ತಿಳಿಹೇಳಿದಳು.
ಗಿರಿಜಾ ಕೇಳಿಸಿಕೊಳ್ಳುತ್ತಾಇದ್ದಾಳೋ ಇಲ್ಲವೋ ಪರೀಕ್ಷಿಸಲು ಆಕಡೆಯಿಂದ 'ಆ, ಹುಂ 'ಏನು ಇಲ್ಲ, ಕೇಳಿಸಿಕೊಂಡೆಯಾ, ಎಚ್ಚರವಾಗಿದ್ದೀಯಾ ತಾನೇ ಎಂದಳು. ಎಲ್ಲಾ ಕೇಳಿಸಿಕೊಂಡೆ, ನಿನ್ನ ಧ್ವನಿಯೇ ಕೇಳದೆ ಕೇಳಿದ್ದು ಸಂತೋಷವಾಗಿ ನನ್ನನ್ನು ನಾನೇ ಮರೆತುಬಿಟ್ಟೆ ಅಂದಳು ಗಿರಿಜಾ..!!
ಗಿರಿಜಾ ಬಹಳ ದೀರ್ಘವಾಗಿ ಯೋಚಿಸಿ ಹೌದಲ್ಲವಾ, ಸುಮ್ಮನೆ ಬೇಜಾರು ಮಾಡಿಕೊಂಡು ಮನಸ್ಸಿಗೆ ಮತ್ತು ದೇಹಕ್ಕೂ ಉತ್ಸಾಹವಿಲ್ಲದೆ ದಿನ ಕಳೆಯುವುದು ಎಷ್ಟು ಬೇಜಾರು ಎಂದು ಮೊಬೈಲ್ ತೆಗೆದುಕೊಳ್ಳುವ ತೀರ್ಮಾನ ಮಾಡಿಯೇಬಿಟ್ಟಳು. ತಕ್ಷಣ ಗೆಳತಿಯರಿಗು ಈಮೈಲ್ ನಲ್ಲಿ ವಿಷಯ ತಿಳಿಸಿ ಅವರುಗಳ ಮೊಬೈಲ್ ನಂಬರ್ ತಿಳಿಸುವಂತೆ ಕೇಳಿದಳು. ವನಜ ಮತ್ತು ಜಲಜಳ ಬಿಡದ ಪ್ರಯತ್ನ ಫಲಕಾರಿಯಾಗಿ ತ್ರಿವಳಿ ಸ್ನೇಹಿತರ ಸ್ನೇಹ ಸಂಪರ್ಕ ಮತ್ತೆ ಗಟ್ಟಿಯಾಯಿತು.