ಶಾಶ್ವತ
ಸಾಯುವವರೆಗೂ ಸದಾ ಸಂಗಾತಿಗಳಾಗಿರುವೆವೆಂದು ಸಪ್ತಪದಿ ತುಳಿದು ಅಗ್ನಿಸಾಕ್ಷಿಯೆದುರು ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅವರು ನೌಕರಿ ನಿಮಿತ್ತ ನೂರಾರು ಕಿಲೋ ಮೀಟರ್ ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ದುದೈರ್ವವಶಾತ್ ಗಂಡನು ವಿಧಿವಶನಾದ. ವಿಧವೆಯಾದ ಹೆಂಡತಿಯು ವಿಧಿಯ ದೂಷಿಸುತ್ತಲೇ ಬದುಕು ಮಾಡಿದಳು.
ಸ್ಥಿತಿ ಸ್ಥಾಪಕತ್ವ
ಅವರಿವರ ಮನೆಯಲ್ಲಿ ಮುಸುರೆ ತಿಕ್ಕುವ, ಬಟ್ಟೆ ತೊಳೆಯುವ, ಕಸ ಗುಡಿಸುವ ಕೆಲಸ ಮಾಡುತ್ತಲೇ ಮಗನಿಗೆ ಎಂಬಿಬಿಎಸ್ ಶಿಕ್ಷ ಣ ಕೊಡಿಸಿದಳು ಆ ಮಹಾತಾಯಿ. ಬಳಿಕ ಮಗನ ಮದುವೆಯೂ ಆಯಿತು. ತಾಯಿ ಮಗನ ಮನೆಯಲ್ಲಿಯೇ ವಾಶಿಂಗ್ ಮಷಿನ್, ಸ್ವೀಪರ್ನಂತಹ ಗೃಹೋಪಯೋಗಿ ಸಾಧನಗಳೊಂದಿಗೆ ತನ್ನ ಮೂಲ ಕಾಯಕ ಮುಂದುವರೆಸಿದಳು. ಜತೆಗೆ ಕಳೆದುಕೊಂಡ ಗಂಡನ ನೆನಪಾಗಿ ಸುರಿಸುತ್ತಿದ್ದ ಕಂಬನಿ ತಾನಾಗಿ ನೆಲವನ್ನು ಸ್ವಚ್ಛಗೊಳಿಸುತ್ತಿತ್ತು.
ಪರವಶ
ಪ್ರೇಮ ವಿವಾಹಕ್ಕಿಂತ ತಂದೆ ತಾಯಿ, ಬಂಧು-ಮಿತ್ರರು, ಗುರು ಹಿರಿಯರು ನಿಶ್ಚಯಿಸಿ ಮಾಡುವ ಮದುವೆಗಳೇ ಹೆಚ್ಚು ಸುಖಕರ ಹಾಗೂ ಸುರಕ್ಷಿತ ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಮಂಡಿಸಿ ಪಿಹೆಚ್ ಡಿ ಪಡೆದ ಪ್ರಾಧ್ಯಾಪಕನು, ಪ್ರಬಂಧ ಗ್ರಂಥ ಓದಿ ಮರುಳಾದ ಅಭಿಮಾನಿ ವಿದ್ಯಾರ್ಥಿನಿಯ ಮೋಹಕ್ಕೆ ವಶನಾಗಿ ಅವಳನ್ನೇ ಪ್ರೇಮ ವಿವಾಹ ಮಾಡಿಕೊಂಡನು.
ಎದೆಗಾತಿ
ಮದುವೆಯಾಗಿದ್ದರೂ ಕೂಡ ಹೆಂಡತಿಯಲ್ಲಿ ತೃಪ್ತಿ ಹೊಂದಲಾರದೆ ಕಂಡ ಕಂಡ ಹೆಂಗಸರ ಸಂಗ ಮಾಡುತ್ತಿದ್ದ ಮಹಾ ಪುರುಷನಾತ! ಒಮ್ಮೆ ಆತನಿಗೆ ತನ್ನÜ ಪತ್ನಿಯು ಪರ ಪುರುಷನೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಷಯ ತಿಳಿದು ಪ್ರಶ್ನಿಸಿದ. ಅದಕ್ಕವಳು, ನೀನು ಮಾಡುತ್ತಿರುವುದು ಸಕ್ರಮವೇನಲ್ಲವೆಂದು ಧೈರ್ಯವಾಗಿಯೇ ಹೇಳಿ ಪ್ರಿಯಕರನನ್ನು ಮದುವೆ ಮಾಡಿಕೊಂಡು ಸುಖವಾಗಿದ್ದಳು!
ದೀಪದ ಬುಡ
ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಮುಂದಾಗುವ ಹತಾಶ ಮಂದಿಗೆ ಆಪ್ತ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬಿ ಪರಿಹಾರ ದೊರಕಿಸಿಕೊಡುವಲ್ಲಿ ಆತ ಬಹಳ ಹೆಸರುವಾಸಿಯಾಗಿದ್ದ. ಒಮ್ಮೆ ಆತ ತಾನು ಮಾಡದ ತಪ್ಪಿಗೆ ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ಅವಮಾನ ತಾಳಲಾರದೇ ತಾನೇ ಆತ್ಮಹತ್ಯೆ ಮಾಡಿಕೊಂಡನು!
ಅ'ತಿಥಿ'
ಸಾರ್ವಜನಿಕ ಶೌಚಾಲಯದ ಹೊಲಸಾದ ಗೋಡೆಯ ಮೇಲೆ ಅನಾಗರಿಕನೊಬ್ಬ ಬರೆದಿದ್ದ, 'ನಿಮಗೆ ಸುಖ(!) ಬೇಕೇ...? ಹಾಗಾದರೆ ಸಂಪರ್ಕಿಸಿ...994ಧಿಧಿಧಿಧಿ' ಎಂಬ ಹೇಳಿಕೆಯಿಂದ ಪುಳಕಿತನಾದ ತರುಣನೊಬ್ಬ ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಆ ಕಡೆಯಿಂದ ದೊರೆತ ಸೂಚನೆ ಅನುಸರಿಸಿ ಮಾರನೇ ದಿನವೇ ಪೋಲಿಸರ ಆತಿಥ್ಯಕ್ಕೆ ಒಳಗಾದ-ಹೊರಾ.ಪರಮೇಶ್ ಹೊಡೇನೂರು.
ಸಾಯುವವರೆಗೂ ಸದಾ ಸಂಗಾತಿಗಳಾಗಿರುವೆವೆಂದು ಸಪ್ತಪದಿ ತುಳಿದು ಅಗ್ನಿಸಾಕ್ಷಿಯೆದುರು ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅವರು ನೌಕರಿ ನಿಮಿತ್ತ ನೂರಾರು ಕಿಲೋ ಮೀಟರ್ ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ದುದೈರ್ವವಶಾತ್ ಗಂಡನು ವಿಧಿವಶನಾದ. ವಿಧವೆಯಾದ ಹೆಂಡತಿಯು ವಿಧಿಯ ದೂಷಿಸುತ್ತಲೇ ಬದುಕು ಮಾಡಿದಳು.
ಸ್ಥಿತಿ ಸ್ಥಾಪಕತ್ವ
ಅವರಿವರ ಮನೆಯಲ್ಲಿ ಮುಸುರೆ ತಿಕ್ಕುವ, ಬಟ್ಟೆ ತೊಳೆಯುವ, ಕಸ ಗುಡಿಸುವ ಕೆಲಸ ಮಾಡುತ್ತಲೇ ಮಗನಿಗೆ ಎಂಬಿಬಿಎಸ್ ಶಿಕ್ಷ ಣ ಕೊಡಿಸಿದಳು ಆ ಮಹಾತಾಯಿ. ಬಳಿಕ ಮಗನ ಮದುವೆಯೂ ಆಯಿತು. ತಾಯಿ ಮಗನ ಮನೆಯಲ್ಲಿಯೇ ವಾಶಿಂಗ್ ಮಷಿನ್, ಸ್ವೀಪರ್ನಂತಹ ಗೃಹೋಪಯೋಗಿ ಸಾಧನಗಳೊಂದಿಗೆ ತನ್ನ ಮೂಲ ಕಾಯಕ ಮುಂದುವರೆಸಿದಳು. ಜತೆಗೆ ಕಳೆದುಕೊಂಡ ಗಂಡನ ನೆನಪಾಗಿ ಸುರಿಸುತ್ತಿದ್ದ ಕಂಬನಿ ತಾನಾಗಿ ನೆಲವನ್ನು ಸ್ವಚ್ಛಗೊಳಿಸುತ್ತಿತ್ತು.
ಪರವಶ
ಪ್ರೇಮ ವಿವಾಹಕ್ಕಿಂತ ತಂದೆ ತಾಯಿ, ಬಂಧು-ಮಿತ್ರರು, ಗುರು ಹಿರಿಯರು ನಿಶ್ಚಯಿಸಿ ಮಾಡುವ ಮದುವೆಗಳೇ ಹೆಚ್ಚು ಸುಖಕರ ಹಾಗೂ ಸುರಕ್ಷಿತ ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಮಂಡಿಸಿ ಪಿಹೆಚ್ ಡಿ ಪಡೆದ ಪ್ರಾಧ್ಯಾಪಕನು, ಪ್ರಬಂಧ ಗ್ರಂಥ ಓದಿ ಮರುಳಾದ ಅಭಿಮಾನಿ ವಿದ್ಯಾರ್ಥಿನಿಯ ಮೋಹಕ್ಕೆ ವಶನಾಗಿ ಅವಳನ್ನೇ ಪ್ರೇಮ ವಿವಾಹ ಮಾಡಿಕೊಂಡನು.
ಎದೆಗಾತಿ
ಮದುವೆಯಾಗಿದ್ದರೂ ಕೂಡ ಹೆಂಡತಿಯಲ್ಲಿ ತೃಪ್ತಿ ಹೊಂದಲಾರದೆ ಕಂಡ ಕಂಡ ಹೆಂಗಸರ ಸಂಗ ಮಾಡುತ್ತಿದ್ದ ಮಹಾ ಪುರುಷನಾತ! ಒಮ್ಮೆ ಆತನಿಗೆ ತನ್ನÜ ಪತ್ನಿಯು ಪರ ಪುರುಷನೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಷಯ ತಿಳಿದು ಪ್ರಶ್ನಿಸಿದ. ಅದಕ್ಕವಳು, ನೀನು ಮಾಡುತ್ತಿರುವುದು ಸಕ್ರಮವೇನಲ್ಲವೆಂದು ಧೈರ್ಯವಾಗಿಯೇ ಹೇಳಿ ಪ್ರಿಯಕರನನ್ನು ಮದುವೆ ಮಾಡಿಕೊಂಡು ಸುಖವಾಗಿದ್ದಳು!
ದೀಪದ ಬುಡ
ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಮುಂದಾಗುವ ಹತಾಶ ಮಂದಿಗೆ ಆಪ್ತ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬಿ ಪರಿಹಾರ ದೊರಕಿಸಿಕೊಡುವಲ್ಲಿ ಆತ ಬಹಳ ಹೆಸರುವಾಸಿಯಾಗಿದ್ದ. ಒಮ್ಮೆ ಆತ ತಾನು ಮಾಡದ ತಪ್ಪಿಗೆ ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ಅವಮಾನ ತಾಳಲಾರದೇ ತಾನೇ ಆತ್ಮಹತ್ಯೆ ಮಾಡಿಕೊಂಡನು!
ಅ'ತಿಥಿ'
ಸಾರ್ವಜನಿಕ ಶೌಚಾಲಯದ ಹೊಲಸಾದ ಗೋಡೆಯ ಮೇಲೆ ಅನಾಗರಿಕನೊಬ್ಬ ಬರೆದಿದ್ದ, 'ನಿಮಗೆ ಸುಖ(!) ಬೇಕೇ...? ಹಾಗಾದರೆ ಸಂಪರ್ಕಿಸಿ...994ಧಿಧಿಧಿಧಿ' ಎಂಬ ಹೇಳಿಕೆಯಿಂದ ಪುಳಕಿತನಾದ ತರುಣನೊಬ್ಬ ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಆ ಕಡೆಯಿಂದ ದೊರೆತ ಸೂಚನೆ ಅನುಸರಿಸಿ ಮಾರನೇ ದಿನವೇ ಪೋಲಿಸರ ಆತಿಥ್ಯಕ್ಕೆ ಒಳಗಾದ-ಹೊರಾ.ಪರಮೇಶ್ ಹೊಡೇನೂರು.