ಆ್ಯಪ್ನಗರ

ಆ ತಾಯಿ ಮಾತು ಕೇಳುತ್ತಿದ್ದರೆ; ಈ ನೋವು ಯಾರಿಗೂ ಬರಬಾರದು!

ಸಾವು ಬದುಕಿನ ನಡುವೆ ಹೋರಾಡುತ್ತಾ ಆಕೆ ಮೊದಲ ಸಲ ಕಣ್ಣು ಬಿಟ್ಟು ನನ್ನನ್ನು ನೋಡಿದಳು. ಆಕೆಯ ಕಣ್ಣಲ್ಲಿ ಕಣ್ಣೀರು ಬರಲಿಲ್ಲ. ಬಾಯಿಂದ ಮಾತು ಹೊರಡಲಿಲ್ಲ. ಆಕೆ ನನ್ನ ಕೈಯನ್ನು ಎದೆಗಿಟ್ಟುಕೊಂಡು ಧೈರ್ಯ ತುಂಬಿದಳು.

Vijaya Karnataka Web 7 Oct 2017, 4:12 pm
'ಸಾವು ಬದುಕಿನ ನಡುವೆ ಹೋರಾಡುತ್ತಾ ಆಕೆ ಮೊದಲ ಸಲ ಕಣ್ಣು ಬಿಟ್ಟು ನನ್ನನ್ನು ನೋಡಿದಳು. ಆಕೆಯ ಕಣ್ಣಲ್ಲಿ ಕಣ್ಣೀರು ಬರಲಿಲ್ಲ. ಬಾಯಿಂದ ಮಾತು ಹೊರಡಲಿಲ್ಲ. ಆಕೆ ನನ್ನ ಕೈಯನ್ನು ಎದೆಗಿಟ್ಟುಕೊಂಡು ಧೈರ್ಯ ತುಂಬಿದಳು. ಆ ದಿನವನ್ನು ನೆನೆದರೆ ನನಗೆ ಈಗಲೂ ಹೃದಯ ಭಾರವಾಗುತ್ತದೆ. ನಿತ್ಯ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಸುದ್ದಿಗಳನ್ನು ನೋಡಿದಾಗಲೆಲ್ಲಾ...'
Vijaya Karnataka Web nirbhayas parents shares their agony
ಆ ತಾಯಿ ಮಾತು ಕೇಳುತ್ತಿದ್ದರೆ; ಈ ನೋವು ಯಾರಿಗೂ ಬರಬಾರದು!


'ನನ್ನ ಮಗಳ ತ್ಯಾಗದ ಫಲ ಇದೇನಾ ಅನ್ನಿಸುತ್ತದೆ. ನನ್ನ ಮಗಳ ವಿಚಾರದಲ್ಲಿ ನ್ಯಾಯ ಸಿಕ್ಕಿರಬಹುದು. ಆದರೆ, ನನ್ನಂತೆಯೇ ಅದೆಷ್ಟೋ ಅಮ್ಮಂದಿರು ನೋವನುಭವಿಸುತ್ತಿದ್ದಾರೆ. ಅವರಿಗೆ ಯಾರು ನ್ಯಾಯ ಕೊಡುತ್ತಾರೆ? ನನ್ನ ಮಗಳ ಸಾವಿನ ಬಳಿಕ ಬಂದ 'ನಿರ್ಭಯಾ' ಕಾಯಿದೆ ಅಪರಾಧಿಗಳಿಗೆ ಶಿಕ್ಷೆಯಾಗಲು...ನಾವೂ ಸಹಿತ ಹೋರಾಡುತ್ತಿದ್ದೇವೆ. ಪ್ರತಿ ಹೆಣ್ಣುಮಗು ನನ್ನ ಮಗಳಿದ್ದಂತೆ'.

ಇದಿಷ್ಟು ನಿರ್ಭಯಾ ತಂದೆತಾಯಿಯ ಮನದಾಳದ ಮಾತುಗಳು. ಸದ್ಯಕ್ಕೆ ನಮ್ಮ ದೇಶದಲ್ಲಿ ನಿರ್ಭಯಾ ಕಾಯಿದೆ ಜಾರಿಯಾಗುತ್ತಿರುವ ಬಗ್ಗೆ, ಅಪರಾಧಿಗಳು ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ಅವರು ವೀಡಿಯೋ ಒಂದರಲ್ಲಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. ಮಗುವನ್ನು ಕಳೆದುಕೊಳ್ಳುವ ನೋವು ಎಷ್ಟು ಭಾರವಾಗಿರುತ್ತದೋ...ಬತ್ತಿಹೋದ ಅವರ ಕಣ್ಣುಗಳನ್ನು ನೋಡಿದರೆ ಅರ್ಥವಾಗುತ್ತದೆ.

ಮಹಿಳೆಯರ ಮೇಲೆ ನಡೆಯುತ್ತಿರುವ ಮಾರಣಹೋಮಗಳ ಮೇಲೆ ಹೋರಾಟ ನಿಂತಂತೆಯೇ? ಕಾನೂನು ಕಟ್ಟಳೆಗಳನ್ನು ಮಾಡಿ ಕೈತೊಳೆದುಕೊಂಡರೆ ಸಾಕೆ? ಅಮ್ಮ, ಅಕ್ಕ, ತಂಗಿ, ಹೆಂಡತಿ...ಹೀಗೆ ನಮ್ಮ ಮನೆಯ ಹೆಣ್ಣುಮಕ್ಕಳಿಗೇ ಈ ಕಷ್ಟ ಎದುರಾದರೆ ನಾವು ತಡೆದುಕೊಳ್ಳಲು ಸಾಧ್ಯವೆ? ಉತ್ತರ ಇಲ್ಲದ ಈ ಪ್ರಶ್ನೆಗೆ ಸರಕಾರದ ಮೇಲೆ ಗೂಬೆ ಕೂರಿಸಿದರೆ ಸಾಲದು. ಸಮಾಜವೂ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಬೇಕು. ಇಲ್ಲದಿದ್ದರೆ ನಿರ್ಭಯಾ ತಾಯಿಯಂತೆ ಅದೆಷ್ಟೋ ಮಂದಿ ತಾಯಂದಿರು ನಿತ್ಯ ನೋವನುಭವಿಸುತ್ತಿರಬೇಕು. ಈ ವಿಡಿಯೋದಲ್ಲಿ ನಿರ್ಭಯಾ ತಂದೆತಾಯಿ ಆಶಾದೇವಿ, ಭದ್ರಿ ಸಿಂಗ್‌ರ ಮಾತುಗಳು...ಮನಸ್ಸಿಗೆ ತಾಕುತ್ತವೆ. ಸಮಾಜದಲ್ಲಿನ ಬದಲಾವಣೆಗಾಗಿ ಈ ಮಾಹಿತಿ. ಹಂಚಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ