ಆ್ಯಪ್ನಗರ

ಮಳೆಗಾಲದಲ್ಲಿ ಪ್ರಯಾಣ ಮಾಡುವಾಗ ಎಚ್ಚರವಹಿಸಿ ಎನ್ನುವ ಸಯಾನಿ

ಸೀಸನ್‌ಗಳು ಸದಾ ಬದಲಾಗುತ್ತಲೇ ಇರುತ್ತವೆ, ಅದಕ್ಕೆ ತಕ್ಕಂತೆ ನಾವು ಮುನ್ನೆಡೆಯುವುದು ಮುಖ್ಯ. ಮಾನ್ಸೂನ್‌ ಎಂದಿಗೂ ಬ್ಯೂಟಿಫುಲ್‌ ಎನ್ನುತ್ತಾರೆ ನಟಿ ಸಯಾನಿ ಗುಪ್ತಾ.

Vijaya Karnataka 18 Aug 2019, 3:24 pm
ಸೀಸನ್‌ಗಳು ಸದಾ ಬದಲಾಗುತ್ತಲೇ ಇರುತ್ತವೆ, ಅದಕ್ಕೆ ತಕ್ಕಂತೆ ನಾವು ಮುನ್ನೆಡೆಯುವುದು ಮುಖ್ಯ. ಮಾನ್ಸೂನ್‌ ಎಂದಿಗೂ ಬ್ಯೂಟಿಫುಲ್‌ ಎನ್ನುತ್ತಾರೆ ನಟಿ ಸಯಾನಿ ಗುಪ್ತಾ. ಲವಲವಿಕೆಯೊಂದಿಗೆ ಮಾತನಾಡಿರುವ ಅವರು, ಮಳೆಗಾಲದಲ್ಲಿಆದಷ್ಟೂ ಹೊರಗೆ ಹೋಗುವಾಗ ಪ್ರಿಪೇರ್‌ ಆಗಿರಬೇಕು. ಅಂಬ್ರೆಲ್ಲಾ, ರೇನ್‌ಕೋಟ್‌ ಸೇರಿದಂತೆ ಅಗತ್ಯವಿರುವಂತದ್ದನ್ನು ಕೊಂಡು ಹೋಗುವುದು ಮುಖ್ಯ ಎಂದು ಸಲಹೆ ನೀಡುತ್ತಾರೆ
Vijaya Karnataka Web sayani gupta01


ಆಹಾರ ಹೀಗಿರಲಿ

ಸೇವಿಸುವ ಆಹಾರವನ್ನು ಬಿಸಿಯಾಗಿರುವಾಗಲೇ ಸೇವಿಸಬೇಕು. ತಣ್ಣೀರು ಸ್ನಾನ, ಶೀತಗುಣವುಳ್ಳ ಆಹಾರ ಪದಾರ್ಥವನ್ನು ವರ್ಜಿಸಬೇಕು ಎನ್ನುತ್ತಾರೆ.

ಟ್ರಾವೆಲ್‌ ಮಾಡುವಾಗ ಎಚ್ಚರ

ಮಾನ್ಸೂನ್‌ನಲ್ಲಿಟ್ರಾವಲ್‌ ಎಂದರೆ ತುಂಬಾ ಇಷ್ಟ. ಆದರೆ, ಮೊದಲೇ ಹವಮಾನ ಇಲಾಖೆಯ ರಿಪೋರ್ಟ್‌ ತಿಳಿದು ಹೋಗುವುದು ಉತ್ತಮ. ಯಾಕೆಂದರೆ, ಮಳೆಯಲ್ಲಿಸಿಲುಕಿಹಾಕಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇನ್ನು ಹೋಗಲೇಬೇಕಾದ ಸಂದರ್ಭದಲ್ಲಿ ಸ್ವೆಟರ್‌, ಜಾಕೆಟ್‌ನಂಥ ಬೆಚ್ಚಗಿನ ಉಡುಪು ಪ್ಯಾಕ್‌ ಮಾಡಿಕೊಳ್ಳಬೇಕು ಆಗ ಎಂತಹ ಚಳಿಯು ನಿಮಗೆ ಆಹ್ಲಾದಕರ ಎಂದನಿಸುತ್ತದೆ. ಜತೆಗೆ ಸೀಸನ್‌ ಅನ್ನು ಎಂಜಾಯ್‌ ಮಾಡಬಹುದು. ಇಲ್ಲವಾದಲ್ಲಿಶೀತ ನೆಗಡಿ-ಜ್ವರ ಎಂದು ಮಲಗಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ. ಅದಕ್ಕಾಗಿ ಮಳೆಗಾಲವನ್ನು ಬೆಚ್ಚಗೆ ಸ್ವಾಗತಿಸಬೇಕು. ಆರೋಗ್ಯದಿಂದ ಎದುರಿಸಬೇಕು ಎನ್ನುತ್ತಾರೆ.

ಪ್ರಯಾಣ ಮಾಡುವಾಗ ರಾತ್ರಿ ವೇಳೆ ಚರ್ಮಕ್ಕೆ ಮಾಯಿಶ್ಚರೈಸರ್‌ ಹಚ್ಚಿದಲ್ಲಿ, ಸ್ಕಿನ್‌ ಒರಟಾಗದು. ಕಾಂತಿಯುಕ್ತವಾಗುವುದು. ದುಪಟ್ಟಾಗಳು ಚಳಿಗಾಲದಲ್ಲಿಟು ಇನ್‌ ಒನ್‌ ಕೆಲಸ ಮಾಡುತ್ತವೆ. ಬಿಸಿಲಿದ್ದಲ್ಲಿ ಫ್ಯಾಷನ್‌ಕ್ಕೆ ತಕ್ಕಂತೆ ಧರಿಸಬಹುದು. ಸಂಜೆ ಚಳಿಗೆ ಶಾಲಿನಂತೆ ಹೊದ್ದುಕೊಳ್ಳಬಹುದು. ಚಳಿಗಾಳಿಗೆ ಕೂದಲು ಒರಟಾಗುವುದಲ್ಲದೆ, ನಿಸ್ತೇಜವಾಗುತ್ತವೆ. ಕೂದಲಿಗೆ ಆಗಾಗ್ಗೆ ಕಂಡೀಷನಿಂಗ್‌ ಮಾಡುವುದು ಅತ್ಯಗತ್ಯ. ಆದಷ್ಟೂ ಫುಲ್‌ಸ್ಲೀವ್‌ ಇರುವ ಉಡುಪುಗಳನ್ನು ಧರಿಸುವುದು ಉತ್ತಮ ಎನ್ನುತ್ತಾರೆ.

ವ್ಯಾಯಾಮ ಅಗತ್ಯ

ಚಳಿಗಾಲ ಎಂದಾಕ್ಷಣ ಬೆಚ್ಚಗೆ ಹೊದ್ದುಕೊಂಡು ಮಲಗುವುದು ಉತ್ತಮವಲ್ಲ. ಈ ಸೀಸನ್‌ನಲ್ಲೂವ್ಯಾಯಾಮ ಇಲ್ಲವೇ ಯೋಗ ಮಾಡುವುದು ಅಗತ್ಯ ಎನ್ನುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ