ಆ್ಯಪ್ನಗರ

ಮಾನ್ಸೂನ್‌ಗೆ ಟಿಪ್ಸ್‌ ಕೊಟ್ಟ ನಟಿ ಅನು

ನಟಿ ಅನು ಮಳೆಗಾಲವನ್ನು ಕಂಪ್ಲೀಟ್‌ ಎಂಜಾಯ್‌ ಮಾಡುತ್ತಾರಂತೆ...

Vijaya Karnataka 24 Sep 2018, 5:00 am
ನಟಿ ಅನು ಮಳೆಗಾಲವನ್ನು ಕಂಪ್ಲೀಟ್‌ ಎಂಜಾಯ್‌ ಮಾಡುತ್ತಾರಂತೆ. ಆದರೆ, ಮಳೆಗಾಲವನ್ನು ಆರೋಗ್ಯಕರ ರೀತಿಯಲ್ಲಿ ಎಂಜಾಯ್‌ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
Vijaya Karnataka Web celebriety tips Anu


ನೇತ್ರಾವತಿ ಕೃಷ್ಣಮೂರ್ತಿ

ಕೊಡಗಿನವರಾದ ನಟಿ ಅನು ಪೂವಮ್ಮ ಅವರಿಗೆ ಚಿಕ್ಕಂದಿನಿಂದಲೂ ಮಳೆ ಎಂದರೆ ಬಹಳ ಇಷ್ಟವಂತೆ. ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಕೊಡಗಿನ ವಿರಾಜಪೇಟೆಯಲ್ಲಿ. ಸೋ, ತುಂತುರು, ಜೋರು, ಸಾಧಾರಣ ಹೀಗೆ ಎಲ್ಲಾ ರೀತಿಯ ಮಳೆಯನ್ನು ನೋಡಿದ್ದೇನೆ. ಜೋರು ಮಳೆ ಸ್ವಲ್ಪ ಭಯ ಹುಟ್ಟಿಸುತ್ತದೆ ಆದರೂ ನಾನು ಆ ಮಳೆಯನ್ನು ತುಂಬಾ ಎಂಜಾಯ್‌ ಮಾಡುತ್ತೇನೆ. ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಶೂಟಿಂಗ್‌ ಮುಗಿಸಿ ನಂತರ ಇಲ್ಲಿ ಬಂದು ರಿಲಾಕ್ಸ್‌ ಮಾಡುತ್ತೇನೆ. ರಿಲಾಕ್ಸ್‌ ಮಾಡಲು ಮಳೆಗಾಲ ಪರ್ಫೆಕ್ಟ್ ಎನ್ನುತ್ತಾರೆ ಅನು.

ಮಳೆ ಎಂದರೆ ರಜೆ

ಹಲವು ಬಾರಿ ನಾನು ಮಳೆಯಲ್ಲೇ ನೆನೆದುಕೊಂಡು ಶಾಲೆಗೆ ಹೋಗುತ್ತಿದ್ದೆ. ನಮ್ಮೂರಲ್ಲಿ ಜೋರು ಮಳೆ ಬೀಳುತ್ತಿದೆ ಎಂದರೆ ಆ ದಿನ ಶಾಲೆಗೆ ರಜೆ ಕೊಡುತ್ತಿದ್ದರು. ಏಕೆಂದರೆ ಚಾನಲ್‌, ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿರುತ್ತದೆ ಹಾಗಾಗಿ ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಹೋಗಲು ಕಷ್ಟ ಎಂಬ ಕಾರಣಕ್ಕೆ ರಜೆ ಕೊಡುತ್ತಿದ್ದರು. ರಜೆ ದಿನ ಸುಮ್ಮನೆ ಮನೆಯಲ್ಲಿ ಕೂತು ಮಳೆ ನೋಡುತ್ತಾ ಊಟ ಮಾಡೋದು ಮಲಗೋದು ಹೀಗೆ ಕಾಲ ಕಳೆಯುತ್ತಿದ್ದೆ ಎಂದು ಬಾಲ್ಯದ ಮಳೆ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ ಅನು. ನಮಗೆ ಯಾವಾಗ ಶಾಲೆ ಪ್ರಾರಂಭವಾಗುತ್ತೋ ಆಗಲೇ ಮಳೆಗಾಲ ಪ್ರಾರಂಭವಾಗುತ್ತಿತ್ತು. ಮಳೆ ಬಂದಾಗಲೆಲ್ಲಾ ರಜೆ ಕೊಡುತ್ತಿದ್ದರಿಂದ ಪೋರ್ಷನ್ಸ್‌ ಕಂಪ್ಲೀಟ್‌ ಆಗದ ಕಾರಣ ಬೇರೆ ಕಡೆ ಗಣೇಶ ಹಬ್ಬ, ದಸರಾ ಹಬ್ಬಕ್ಕೆ ಕೊಡುವ ರೀತಿ ಇಲ್ಲಿ ರಜೆ ಕೊಡುತ್ತಿರಲಿಲ್ಲ, ಹಾಗಾಗಿ ಮಳೆಗಾಲವೇ ರಜಾ ದಿನಗಳಾಗುತ್ತಿದ್ದವು ಎನ್ನುತ್ತಾರೆ ಅವರು.

ನೀರೂರಿಸುವ ಫ್ರೈಡ್‌ ಫುಡ್ಸ್‌

ಮಳೆಗಾಲದಲ್ಲಿ ಕರಿದ ಪದಾರ್ಥಗಳನ್ನು ಸವಿಯುವುದೆಂದರೆ ಬಹಳ ಇಷ್ಟ. ಮಳೆ ಬೀಳುವ ಸಮಯದಲ್ಲಿ ಮನೆಯಲ್ಲಿ ಬಿಸಿ ಬಿಸಿ ಕರಿದ ನಾನ್‌ವೆಜ್‌ ಫುಡ್‌ಗಳನ್ನು ಮಾಡಿಕೊಡುತ್ತಾರೆ. ನೆನಸಿಕೊಂಡರೆ ಬಾಯಲ್ಲಿ ನೀರು ಬರುತ್ತೆ. ಇಂಥ ರುಚಿಯಾದ ಪದಾರ್ಥಗಳನ್ನು ಮಳೆಯನ್ನು ನೋಡುತ್ತಾ ಸವಿಯುವುದರ ಮಜಾನೇ ಬೇರೆ ಎನ್ನುತ್ತಾರೆ ಅವರು. ಆದರೆ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸೇವಿಸುವುದು ಉತ್ತಮ ಎಂದು ಟಿಫ್ಸ್‌ ನೀಡುತ್ತಾರೆ.

ಬೆಚ್ಚಗಿದ್ದು ರಿಲಾಕ್ಸ್‌ ಮಾಡಿ

ಮಳೆಗಾಲದಲ್ಲಿ ನಾನು ಬೆಚ್ಚಗಿರಲು ಮತ್ತು ತುಂಬಾ ರಿಲಾಕ್ಸ್‌ ಆಗಿ ಇರಲು ಇಷ್ಟಪಡುತ್ತೇನೆ ಎನ್ನುವ ಅನು ಮಳೆಯಲ್ಲಿ ನೆನೆಯುವುದಕ್ಕಿಂತ ಬೆಚ್ಚಗಿನ ಉಡುಪು ಧರಿಸಿ ರುಚಿಯಾದ ತಿಂಡಿಗಳನ್ನು ತಿಂದು ಚೆನ್ನಾಗಿ ರಿಲಾಕ್ಸ್‌ ಮಾಡಿ. ಬೇರೆ ಸೀಸನ್‌ನಲ್ಲಿ ಈ ರೀತಿ ಚಾನ್ಸ್‌ ಸಿಗುವುದಿಲ್ಲ ಎಂದು ಸಲಹೆ ನೀಡುತ್ತಾರೆ ಅವರು.

-------------

ಕೋಟ್ಸ್‌

ಇತರ ಸೀಸನ್‌ಗಳಿಗಿಂತ ಮಾನ್ಸೂನ್‌ ಸೀಸನ್‌ ತುಂಬಾ ಉತ್ತಮ

- ಅನು ಪೂವಮ್ಮ, ನಟಿ

-------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ