ಆ್ಯಪ್ನಗರ

ಅಪಾಯ ತಂದೊಡ್ಡುವ ಮುನ್ನ ಭಾವನೆಗಳನ್ನು ನಿಯಂತ್ರಿಸಿ

ನಿಮ್ಮನ್ನು ಡಿಸ್ಟರ್ಬ್ ಮಾಡುವ ಭಾವನೆಗಳನ್ನು ನಿಯಂತ್ರಿಸಿ. ಇಲ್ಲವಾದರೆ ಅದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನು ತಂದಿಡಬಹುದು.

Vijaya Karnataka Web 2 Apr 2019, 3:35 pm
ಜೀವನ ಮತ್ತು ಭಾವನೆ ನಡುವಿನ ಬಂಧ ಬಹಳ ಗಟ್ಟಿಯಾದದ್ದು. ದೇಹಕ್ಕೂ ಮನಸ್ಸಿಗೂ ಹತ್ತಿರದ ನಂಟಿದೆ. ಭಾವನೆಗಳ ಮೇಲಿನ ಹಿಡಿತ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸುವುದವಶ್ಯ.
Vijaya Karnataka Web Yoga


ನಿಮ್ಮನ್ನು ಡಿಸ್ಟರ್ಬ್ ಮಾಡುವ ಭಾವನೆಗಳನ್ನು ನಿಯಂತ್ರಿಸಿ. ಇಲ್ಲವಾದರೆ ಅದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನು ತಂದಿಡಬಹುದು.

ಕಚೇರಿ, ಸಂಬಂಧ, ಹಣಕಾಸು ಸೇರಿದಂತೆ ಇತರೇ ಬೇಸರ, ನೋವು, ಅಸಹಾಯಕತೆಯಿಂದ ಉಂಟಾಗುವ ಭಾವನೆಗಳು ಒತ್ತಡಕ್ಕೆ ಕಾರಣವಾಗಬಹುದು. ಇದರಿಂದ ತಲೆನೋವು, ಎದೆನೋವು, ಗ್ಯಾಸ್ಟ್ರಿಕ್ ಸಮಸ್ಯೆ, ನಿದ್ರಾ ಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಕಂಡುಬರಬಹುದು. ಈಗಾಗಲೇ ಒತ್ತಡದ ಕಾರಣಕ್ಕೆ ದೈಹಿಕ ಸಮಸ್ಯೆಗಳಿಗೆ ಒಳಗಾದ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಿವೆ ಎನ್ನಲಾಗಿದೆ.

“ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು” ಎನ್ನುತ್ತಾರೆ ಸಾಧು ಸಂತರು. ಸಕಾರಾತ್ಮಕ ವಿಚಾರಗಳಿಗೆ ಹೆಚ್ಚು ಗಮನಕೊಡಲು ಪ್ರಯತ್ನಿಸಿ. ಶಾಂತಿಗುಣ ದೇಹಕ್ಕೆ ಜೀವಾಧಾರ” ಎನ್ನುತ್ತದೆ ಜ್ಞಾನೋಕ್ತಿ. ಮನಸ್ಸಿನ ಶಾಂತಿಯನ್ನು ಅರಿಯಲು ಧ್ಯಾನ ಮಾಡಿ. ಆಳವಾಗಿ, ದೀರ್ಧವಾಗಿ ಉಸಿರಾಟ ತೆಗೆದುಕೊಳ್ಳುವ ಮೂಲಕ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ.

ಉತ್ಸಾಹ, ಭಯ ಮತ್ತು ಸಂತಸ ಮುಂತಾದ ಭಾವನೆಗಳು ನಮ್ಮ ಹೃದಯದೊಂದಿಗೆ ಸಂಪರ್ಕ ಹೊಂದಿವೆ. ಒತ್ತಡ, ಕೋಪ, ಖಿನ್ನತೆ, ಆತಂಕ ಮುಂತಾದ ವಿಭಿನ್ನ ಭಾವನೆಗಳು ನೇರವಾಗಿ ಅಪಾಯ ತಂದೊಡ್ಡದಿದ್ದರೂ ಹೃದಯರೋಗದ ಅಪಾಯದ ಸ್ಥಿತಿಗೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ಅತಿರೇಖದ ಭಾವನೆಗಳನ್ನು ನಿಯಂತ್ರಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ