ಆ್ಯಪ್ನಗರ

ಅಪಾಯಕ್ಕೆ ದಾರಿಯೇ ಅತಿಯಾದ ಸೌಂದರ‍್ಯ ಪ್ರಜ್ಞೆ?

ಶ್ರೀದೇವಿ ಸಾವಿನ ಹಿಂದಿನ ಸೌಂದರ‍್ಯ ಚಿಕಿತ್ಸೆ ಬಗೆಗಿನ ಚರ್ಚೆಗೆ ಈಗ ಜೀವ ಬಂದಿದ್ದು, ಅತಿಯಾದ ಸೌಂದರ‍್ಯ ಪ್ರಜ್ಞೆ ಅಪಾಯ ಎಂಬುದು ಸಿಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರಿಗೂ ಪಾಠವಾಗಬೇಕು ಎಂಬ ಆರೋಗ್ಯ ಕಾಳಜಿಯ ಮಾತುಗಳು ಕೇಳಿ ಬರುತ್ತಿವೆ.

Vijaya Karnataka Web 27 Feb 2018, 5:00 am

*ಶುಭಾ ವಿಕಾಸ್‌

ಚಿರ ಯೌವನದಿಂದಲೇ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದ ಬಾಲಿವುಡ್‌ ತಾರೆ ಶ್ರೀದೇವಿ ಸಾವಿಗೆ ಅವರ ಅತಿಯಾದ ಸೌಂದರ‍್ಯ ಪ್ರಜ್ಞೆಯೇ ಕಾರಣ ಎಂಬುದರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಆರಂಭವಾಗಿರುವ ಚರ್ಚೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಶ್ರೀದೇವಿ ಆಪ್ತೆ ಪಿಯಾಲಿ ಗಂಗೂಲಿ ಕೂಡ ಸಾಮಾಜಿಕ ತಾಣಗಳಲ್ಲಿ ಶ್ರೀದೇವಿಯವರ ಸೌಂದರ‍್ಯ ಕಾಪಾಡಿಕೊಳ್ಳುವ ಪ್ರಯತ್ನ ಹಾಗೂ ಆ ಸಂಬಂಧಧಿ ಒತ್ತಡವೇ ಅವರನ್ನು ಅಕಾಲಿಕವಾಗಿ ಬಲಿ ತೆಗೆದುಕೊಂಡಿರಬಹುದು ಎಂದಿದ್ದರು. ಶ್ರೀದೇವಿ ಸೌಂದರ‍್ಯ ಚಿಕಿತ್ಸೆಗೆ ಸಾಕಷ್ಟು ಸಮಯ ಮೀಸಲಿಟ್ಟಿದ್ದರು. ಸೊಂಟದ ಕೊಬ್ಬು ಚಿಕಿತ್ಸೆ, ಹಲವು ಬಾರಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದು ಸಾಮಾಜಿಕ ತಾಣಗಳಲ್ಲಿ ಈಗಾಗಲೇ ಸಾಕಷ್ಟು ಶೇರ್‌ ಆಗಿವೆ. ಈ ಸಂಬಂಧ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ. ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಆಫ್‌ಲೈನ್‌ನಲ್ಲಿ ಕೂಡ ಅದೇ ಚರ್ಚೆ ಮುಂದುವರಿದಿದ್ದು, ದೈಹಿಕ ಸೌಂದರ‍್ಯವನ್ನು ಕಾಪಾಡಿಕೊಳ್ಳಲು ತೋರಿಸಿದ ಆಸಕ್ತಿಯನ್ನು ಮನಸ್ಸನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳಲು ತೋರಲಿಲ್ಲವಾ ಎಂಬ ಪ್ರಶ್ನೆಗಳು ಇದೀಗ ಬಹುತೇಕರನ್ನು ಕಾಡುತ್ತಿವೆ.

ಪ್ರಕೃತಿಗೆ ವಿರುದ್ದ ಚಿಕಿತ್ಸೆ ಅಪಾಯ: ಶ್ರೀದೇವಿ ಅವರನ್ನು ಹೊರತುಪಡಿಸಿ ಯಾರೇ ಆದರೂ ಅಗತ್ಯವೇ ಇಲ್ಲವಾದರೂ ಆರೋಗ್ಯಪೂರ್ಣ ದೇಹವನ್ನು ಪದೇಪದೆ ಸರ್ಜರಿಗೆ ಒಳಪಡಿಸಿದಾಗ, ದಿಢೀರ್‌ ತೂಕ ಇಳಿಕೆಗೆ ಅನಾರೋಗ್ಯಕರ ಮಾರ್ಗ ಅನುಸರಿಸಿದಾಗ ದೇಹದ ಚಟುವಟಿಕೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಇತರೇ ಆರೋಗ್ಯ ಸಮಸ್ಯೆಗಳ ಉದ್ಭವದ ಜತೆ ಜೀವಿತಾವಧಿಧಿಯನ್ನು ಕಮ್ಮಿ ಆಗುವ ಸಾಧ್ಯತೆ ಇದೆ. ನೈಸರ್ಗಿಕ ಪ್ರಕ್ರಿಯೆಯನ್ನು ನಿಯಂತ್ರಿಸಿ ಅದರ ಮೇಲೆ ಕೃತಕತೆಯನ್ನು ಹೇರಿದಾಗ ಯಾವತ್ತಿದ್ದರೂ ಅಪಾಯ ಎಂಬುದು ವೈದ್ಯರ ಅಭಿಮತ. ಈ ಬಗ್ಗೆ ನಾನಾ ಕ್ಷೇತ್ರದ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Vijaya Karnataka Web dangerous beauty treatments to avoid
ಅಪಾಯಕ್ಕೆ ದಾರಿಯೇ ಅತಿಯಾದ ಸೌಂದರ‍್ಯ ಪ್ರಜ್ಞೆ?

ನಿರ್ದಿಷ್ಟ ಸಮಸ್ಯೆ ಇದ್ದಾಗ ಅದರಿಂದ ಪಾರಾಗಲು ಚಿಕಿತ್ಸೆ ಪಡೆಯುವುದಕ್ಕೂ ಅನಗತ್ಯವಾಗಿ ಕೇವಲ ಸೌಂದರ‍್ಯ ಕಾಳಜಿಯಿಂದ ಚಿಕಿತ್ಸೆ ಪಡೆಯುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ.ಅನಗತ್ಯ ಎಂಬುದು ಸಮಸ್ಯೆಯನ್ನು ನಿವಾರಿಸುವುದಿಲ್ಲ. ಮತ್ತಷ್ಟು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಪದೇಪದೆ ಸೌಂದರ‍್ಯ ಸರ್ಜರಿಗೆ ಒಳಗಾದಾಗ ಅವರಲ್ಲೊಂದು ಆತಂಕ, ಒತ್ತಡ ಇರುತ್ತದೆ. ಇದು ಮಿದುಳಿನಲ್ಲಿ ರಾಸಾಯನಿಕವೊಂದನ್ನು ಉತ್ಪ್ಪಾದಿಸುತ್ತದೆ. ಇದರ ನೇರ ಪ್ರಭಾವ ಹೃದಯ ಬಡಿತದ ಮೇಲಾಗುತ್ತದೆ. ಇದರಿಂದ ಹೃದಯ ಸಮಸ್ಯೆ ಕಾಣಿಸಬಹುದು. ದೈಹಿಕವಾಗಿ ಎಷ್ಟೆ ಫಿಟ್‌ ಆಗಿದ್ದರೂ ಮಾನಸಿಕವಾಗಿ ಆರೋಗ್ಯಪೂರ್ಣವಾಗಿಲ್ಲ ಅಂದರೂ ಹೃದಯಕ್ಕೆ ಅಪಾಯ.- ಡಾ. ವಿಜಯಲಕ್ಷ್ಮೇ ಬಾಳೆಕುಂದ್ರಿ

ತೂಕ ಇಳಿಸುವಿಕೆ, ಸೌಂದರ‍್ಯವರ್ಧಕ ಚಿಕಿತ್ಸೆ, ಸರ್ಜರಿಗಳು ಅನಗತ್ಯ ಎನಿಸಿದಾಗ ಆರೋಗ್ಯಪೂರ್ಣ ದೇಹದ ಚಟುವಟಿಕೆಯ ಮೇಲೆ ನಿರ್ಬಂಧ ಹೇರಿದಂತಾಗುತ್ತದೆ. ಕೇವಲ ಚಿಕಿತ್ಸೆಯಿಂದ ಸಮಸ್ಯೆ ಮುಗಿಯುವುದಿಲ್ಲ. ನಿಮ್ಮ ಯೌವನವನ್ನು ಕಾಪಾಡಿಕೊಳ್ಳಲು ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಚಟುವಟಿಕೆಯಿಂದ ಇರಬೇಕು. ಆರೋಗ್ಯಪೂರ್ಣ ಜೀವನಶೈಲಿ ಅನುಸರಿಸಿ. -ಡಾ. ಕೀರ್ತಿ ಪಟೇಲ್‌, ಡರ್ಮಾಟಾಲಿಸ್ಟ್‌ ಹಾಗೂ ಆ್ಯಂಟಿ ಏಜಿಂಗ್‌ ಫಿಜಿಷಿಯನ್‌

ಚಿರ ಯೌವನವನ್ನು ನೈಸರ್ಗಿಕವಾಗಿಯೇ ಪಡೆದುಕೊಳ್ಳಬಹುದು. ವ್ಯಾಯಾಮ, ಸಮತೋಲನ ಆಹಾರದ ಜತೆ ಆರೋಗ್ಯಪೂರ್ಣ ಜೀವನಶೈಲಿ ನಿಮ್ಮ ತ್ವಚೆಗೆ ಹೊಳಪು ನೀಡುತ್ತದೆ. ಸದಾಚಟುವಟಿಕೆಯಿಂದ ಇದ್ದರೆ ನೀವು ಸುಂದರವಾಗಿ ಕಾಣುತ್ತೀರ. ವಯಸ್ಸನ್ನು ಕೃತಕವಾಗಿ ಮರೆಮಾಚಬೇಕಿಲ್ಲ. ಸೌಂದರ‍್ಯ ಕಾಪಾಡಿಕೊಳ್ಳಲು ಸಾಕಷ್ಟು ಆಧುನಿಕ ಚಿಕಿತ್ಸೆಗಳಿವೆ. ಆದರೆ ಅವೇ ಪರಿಹಾರವಲ್ಲ. ದೇಹದ ನೈಸರ್ಗಿಕ ಕ್ರಿಯೆಯ ವಿರುದ್ಧ ಹೋಗಬೇಡಿ.- ವನಿತಾ ಅಶೋಕ್‌, ಫಿಟ್‌ನೆಸ್‌ ತಜ್ಞೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ