ಆ್ಯಪ್ನಗರ

ಧನ್‌ತೇರಾಸ್‌ ಹಬ್ಬದ ವೇಳೆಗೆ ಇಳಿದ ಚಿನ್ನದ ದರ ಖರೀದಿಗೆ ಸಕಾಲ

ಸಾಂಪ್ರದಾಯಿಕವಾಗಿ ಧನ್‌ ತೇರಾಸ್‌, ದೀಪಾವಳಿಯ ವೇಳೆಗೆ ಜನ ಬಂಗಾರ ಖರೀದಿಗೆ ಉತ್ಸುಕರಾಗುತ್ತಾರೆ...

Vijaya Karnataka 20 Oct 2019, 5:00 am
ಕೇಶವಪ್ರಸಾದ್‌ ಕಿದೂರ್‌
Vijaya Karnataka Web jewels-7


ಸಾಂಪ್ರದಾಯಿಕವಾಗಿ ಧನ್‌ ತೇರಾಸ್‌, ದೀಪಾವಳಿಯ ವೇಳೆಗೆ ಜನ ಬಂಗಾರ ಖರೀದಿಗೆ ಉತ್ಸುಕರಾಗುತ್ತಾರೆ. ಈ ಹಬ್ಬದ ದಿನಗಳಲ್ಲಿಮನೆಗೆ ಚಿನ್ನ ತಂದರೆ, ಸಂಪತ್ತಿನ ಅಧಿದೇವತೆ ಲಕ್ಷ್ಮಿ ಹಾಗೂ ಧನಾಧಿಪತಿ ಕುಬೇರನನ್ನು, ಪೂಜಿಸಿದರೆ ದೈವಾನುಗ್ರಹವಾಗಿ ಸಿರಿ ಸಂಪತ್ತು ವೃದ್ಧಿಸುತ್ತದೆ, ಅದೃಷ್ಟ ಖುಲಾಯಿಸುತ್ತದೆ ಎಂಬುದು ಜನತೆಯ ನಂಬಿಕೆ. ಧನ್‌ ತೇರಾಸ್‌ ಉತ್ತರಭಾರತದಲ್ಲಿಮಹತ್ವದ ಹಬ್ಬ. ಈಗ ಉತ್ತರ-ದಕ್ಷಿಣ ಎನ್ನದೆ ಇಡೀ ಭಾರತದಲ್ಲಿವ್ಯಾಪಕವಾಗಿ ಆಚರಿಸಲಾಗುತ್ತಿದೆ. ಈ ವರ್ಷ ಆದಿಯಿಂದಲೇ ಉನ್ನತ ಮಟ್ಟದಲ್ಲಿದ್ದ ಬಂಗಾರದ ದರ ಕೆಲ ದಿನಗಳಿಂದ ಇಳಿಮುಖವಾಗಿದೆ. ಹೀಗಾಗಿ ಕೊಳ್ಳುಗರಿಗೆ ಅನುಕೂಲಕರವಾಗಿದೆ. ಅದೇ ರೀತಿ ತುರ್ತು ಅಗತ್ಯ ಇದ್ದರೆ ಚಿನ್ನವನ್ನು ಮಾರಾಟ ಮಾಡಿ ನಗದೀಕರಿಸುವವರಿಗೂ ಸಕಾಲ. ಯಾಕೆಂದರೆ ಒಟ್ಟಾರೆಯಾಗಿ ಸುವರ್ಣ ದರ ಉನ್ನತ ಮಟ್ಟದಲ್ಲಿಯೇ ಇದೆ. ಹಾಗಾದರೆ ಈ ವರ್ಷ ಬಂಗಾರದ ದರದ ಏರಿಳಿತ ಹೇಗಿತ್ತು?

2019ರ ಜನವರಿ 1ರಂದು 24 ಕ್ಯಾರಟ್‌ ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ಗೆ 32,350 ರೂ. ಇತ್ತು. ಇದು ಶುದ್ಧ ಚಿನ್ನದ ಬೆಲೆಯಾದರೆ, ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಸ್ವರ್ಣದ ಬೆಲೆ ಪ್ರತಿ 10 ಗ್ರಾಮ್‌ಗೆ 30,650 ರೂ. ಇತ್ತು. ಈ ನಡುವೆ ಸೆಪ್ಟೆಂಬರ್‌ ವೇಳೆಗೆ ಬಂಗಾರದ ದರ ಅನೂಹ್ಯವಾಗಿ ಗಗನಕ್ಕೇರಿತ್ತು. ಸೆಪ್ಟೆಂಬರ್‌ 30ರ ವೇಳೆಗೆ 24 ಕ್ಯಾರಟ್‌ ಬಂಗಾರದ ದರ ಪ್ರತಿ 10 ಗ್ರಾಮ್‌ಗೆ ಬರೋಬ್ಬರಿ 40,145 ರೂ. ಹಾಗೂ 22 ಕ್ಯಾರಟ್‌ ಆಭರಣ ಚಿನ್ನದ ದರ 36,500 ರೂ.ಗೆ ಏರಿಕೆಯಾಗಿತ್ತು. ಜನ ಸಾಮಾನ್ಯರು ಬಂಗಾರ ಖರೀದಿಸಲು ಹಿಂದೇಟು ಹಾಕುವ ಸನ್ನಿವೇಶ ಉಂಟಾಗಿತ್ತು. ಇದೀಗ ಅಕ್ಟೋಬರ್‌ 18ರ ವೇಳೆಗೆ 24 ಕ್ಯಾರಟ್‌ ಚಿನ್ನಕ್ಕೆ 38,500 ರೂ. ಹಾಗೂ 22 ಕ್ಯಾರಟ್‌ ಚಿನ್ನದ ದರ 35,950 ರೂ. ಆಸುಪಾಸಿಗೆ ಇಳಿದಿದೆ.

ತುಸು ಇಳಿಕೆಯಾಗಿದ್ದರೂ, ಈಗಲೂ ಉನ್ನತ ಮಟ್ಟದಲ್ಲಿಯೇ ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿಬೆಳ್ಳಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ಬೆಳ್ಳಿಯ ದರ ಬೆಂಗಳೂರಿನಲ್ಲಿಪ್ರತಿ ಕೆಜಿಗೆ 48,000 ರೂ. ಆಸುಪಾಸಿಗೆ ವೃದ್ಧಿಸಿದೆ.

ಭಾರತೀಯರು ಚಿನ್ನದ ದರ ಎಷ್ಟಿದ್ದರೂ, ಅಗತ್ಯಕ್ಕೆ ತಕ್ಕಷ್ಟಾದರೂ ಖರೀದಿಸದೆ ಬಿಡುವುದಿಲ್ಲ. ದರ ದುಬಾರಿಯಾಗಿದ್ದಾಗ ಖರೀದಿಯ ಪ್ರಮಾಣ ಕಡಿಮೆಯಾದೀತು. ಆದರೆ ಬಹುತೇಕ ಎಲ್ಲರೂ ಬಂಗಾರದ ಪ್ರೇಮಿಗಳೇ. ಹೀಗಾಗಿ ಜ್ಯುವೆಲ್ಲರಿ ಮಳಿಗೆಗಳಲ್ಲಿಸದಾ ಜನ ಜಂಗುಳಿ ಕಾಣಬಹುದು. ರಜಾ ದಿನಗಳಲ್ಲಿ, ಹಬ್ಬದ ಸೀಸನ್‌ಗಳಲ್ಲಂತೂ ಜ್ಯುವೆಲ್ಲರಿ ಮಳಿಗೆಗಳಿಗೆ ಕಾಲಿಡುವುದೇ ಕಷ್ಟ ಎಂಬಷ್ಟು ಜನ ಆಗಮಮಿಸುತ್ತಾರೆ.

ಭಾರತದಲ್ಲಿಚಿನ್ನದಲ್ಲಿಹೂಡಿಕೆಗೆ ಸಂಬಂಧಿಸಿ ಬ್ಯಾಂಕ್‌ಗಳಲ್ಲಿಗೋಲ್ಡ್‌ ಮಾನಿಟೈಸೇಶನ್‌ (ಜಿಎಂಎಸ್‌) ಎಂಬ ಯೋಜನೆ ಇದೆ. ನಿಮ್ಮಲ್ಲಿರುವ ಹೆಚ್ಚುವರಿ ಚಿನ್ನವನ್ನು ಬ್ಯಾಂಕ್‌ಗಳಲ್ಲಿನ ಜಿಎಂಎಸ್‌ ಯೋಜನೆಯಲ್ಲಿಠೇವಣಿ ಇಟ್ಟರೆ ಅದಕ್ಕೆ ಪ್‌ತಿಯಾಗಿ ಬಡ್ಡಿಯೂ ಸಿಗುತ್ತದೆ. ಹೀಗಾಗಿ ನಿಮ್ಮ ಬಂಗಾರ ನಿಮಗೆ ಆದಾಯವನ್ನೂ ತಂದುಕೊಡಬಲ್ಲುದು. ಬಡ್ಡಿ ಎಷ್ಟು ಎಂಬುದನ್ನು ಕೇಂದ್ರ ಸರಕಾರ ಮತ್ತು ಆರ್‌ಬಿಐ ನಿರ್ಧರಿಸುತ್ತದೆ.

ಲಾಕರ್‌ನಲ್ಲಿಡುವ ಬದಲು ಜಿಎಂಎಸ್‌ ಸೂಕ್ತ

ಅನೇಕ ಮಂದಿ ಬಂಗಾರವನ್ನು ಬ್ಯಾಂಕ್‌ ಲಾಕರ್‌ಗಳಲ್ಲಿಇಡುತ್ತಾರೆ. ಆದರೆ ಅದರ ಬದಲಿಗೆ ಜಿಎಂಎಸ್‌ನಲ್ಲಿಠೇವಣಿ ಇಟ್ಟರೆ ವಾರ್ಷಿಕ ಶೇ.2.5ರಷ್ಟು ಬಡ್ಡಿ ಆದಾಯ ಗಳಿಸಬಹುದು. ನಿಮ್ಮ ಬಂಗಾರದ ಮೌಲ್ಯ ಏರುತ್ತಾ ಹೋಗುವುದನ್ನು ಗಮನಿಸಬಹುದು. 2015ರಲ್ಲಿಸರಕಾರ ಜಿಎಂಎಸ್‌ ಯೋಜನೆಯನ್ನು ಬಿಡುಗಡೆಗೊಳಿಸಿತ್ತು.

ಏರುತ್ತಲೇ ಇದೆ ಚಿನ್ನದ ದರ!

ಚಿನ್ನದ ದರ ತಾತ್ಕಾಲಿಕವಾಗಿ ಇಳಿಯಬಹುದು. ಆದರೆ ಒಟ್ಟಾರೆ ಇತಿಹಾಸ ಗಮನಿಸಿದರೆ ಏರುತ್ತಲೇ ಇದೆ. ಹೂಡಿಕೆದಾರರಿಗೆ ಉತ್ತಮ ಆದಾಯ ಕೊಟ್ಟಿದೆ. 2004ರಲ್ಲಿ10 ಗ್ರಾಮ್‌ ಚಿನ್ನದ ದರ 5,850 ರೂ. ಇತ್ತು. ಆಗ 39,000 ರೂ. ಸಮೀಪಕ್ಕೆ ಏರಿಕೆಯಾಗಿದೆ. 2004ರಲ್ಲಿಒಬ್ಬ ವ್ಯಕ್ತಿ ಚಿನ್ನದಲ್ಲಿ1.5 ಲಕ್ಷ ರೂ. ಹೂಡಿದ್ದರೆ, 256.4 ಗ್ರಾಮ್‌ ಚಿನ್ನ ಸಿಗುತ್ತಿತ್ತು. ಈಗ 256.4 ಗ್ರಾಮ್‌ ಬಂಗಾರದ ಬೆಲೆ 10 ಲಕ್ಷ ರೂ.ಗೆ ಏರಿದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ