ಆ್ಯಪ್ನಗರ

ಕಿಂಡಲ್‌ ಕಾರ್ನರ್‌

ಹಣವನ್ನು ಬೇಡ ಎನ್ನುವವರು ಈ ಪ್ರಪಂಚದಲ್ಲಿ ಇದ್ದಾರ?

Vijaya Karnataka 16 Jun 2018, 4:03 pm
ಹಣವನ್ನು ಬೇಡ ಎನ್ನುವವರು ಈ ಪ್ರಪಂಚದಲ್ಲಿ ಇದ್ದಾರ?
Vijaya Karnataka Web kindle corner by komal
ಕಿಂಡಲ್‌ ಕಾರ್ನರ್‌

ಬೋರೇಗೌಡ, ಸರಸ್ವತಿಪುರ
ಪ್ರಾಣಿ, ಪಕ್ಷಿಗಳು ಇದ್ದಾವಲ್ಲ.

ಅಪ್ಪಿಕೊಳ್ಳುವುದಕ್ಕೂ, ತಬ್ಬಿಕೊಳ್ಳುವುದಕ್ಕೂ ಏನು ವ್ಯತ್ಯಾಸ?
ಜಯವಂತ್‌, ಕುಂದಾಪುರ
ಅಪ್‌ಲ್ಲಿ ಗಾಡಿ ಹೋಗದಕ್ಕೂ, ಡೌನ್‌ನಲ್ಲಿ ಗಾಡಿ ಹೋಗದಕ್ಕೂ ಇರುವ ವ್ಯತ್ಯಾಸ.

ಇಲ್ಲೊಬ್ಬಳು ಕಿರುಗಣ್ಣಲ್ಲಿ ನೋಡುತ್ತಾ, ಪಕ್ಕದಲ್ಲಿರುವ ನಾಯಿಗೆ ಮುತ್ತು ಕೊಡುತ್ತಾಳೆ. ಇದರರ್ಥವೇನು?
ಮುರುಳಿ, ಕೋಲಾರ
ಕಿರು ಕಣ್ಣೂರಿನ ಗಯ್ಯಾಳಿ ಇರಬೇಕು.

ಪ್ರಶ್ನೆ ಕೇಳಿ ಸುಸ್ತಾದ್ರೆ ನೀವು ನೀರು ಕೊಡ್ತೀರಾ?
ದೇವರಾಜ್‌, ಹಿರಿಯೂರು
ನೀರಿಗೆ ತೃಪ್ತಿ ಸಿಗುತ್ತಾ!

ಸಂಸಾರದ ನೌಕೆಯನ್ನು ಯಾವಾಗಲೂ ಗಂಡಸೇ ಯಾಕೆ ಎಳೆಯುತ್ತಾನೆ?

ನಾಗೇಶ್‌, ಹುಳಿಯಾರು
ಹಾರ್ಸ್‌ ಪವರ್‌ ಜಾಸ್ತಿ ಇರತ್ತೆ.

ಇಲ್ಲೊಬ್ಬಳು ಕೆಂಪು ಗುಲಾಬಿ ಕೊಡು ಅಂತಾಳೆ ಏನ್ಮಾಡ್ಲಿ?
ವಿಷ್ಣು, ಸಿಂಧಗಿ
ಯಾವುದಾದ್ರೂ ಗಾರ್ಡನ್‌ನಿಂದ ಕಿತ್ತು ತಂದು ಕೊಡಿ.

ನೀವು ಏನಾದ್ರೂ ಮಾಡುವುದಿದ್ದರೆ ಮೊದಲು ಕಣಿ ಕೇಳುತ್ತೀರಂತೆ?
ವೆಂಕಟೇಶ್‌ ಪ್ರಸಾದ್‌, ಹುಬ್ಬಳ್ಳಿ
ನನಗೆ ಕವಡೆ ಶಾಸ್ತ್ರ ಅಂದ್ರೆ ತುಂಬಾ ಇಷ್ಟ ಅದಕ್ಕೆ.

ಮನೆಯ ಮಂಗಳಾರತಿಗೂ, ದೇವಸ್ಥಾನದ ಮಂಗಳಾರತಿಗೂ ಏನು ವ್ಯತ್ಯಾಸ?
ಜಗದೀಶ್‌, ಕಂಚೀಪುರ
ದಾನದ ಕರ್ಪೂರಕ್ಕೆ, ದುಡ್ಡು ಕೊಟ್ಟಿರುವ ಕರ್ಪೂರಕ್ಕೂ ಇರುವ ವ್ಯತ್ಯಾಸ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ