ಆ್ಯಪ್ನಗರ

ಕಿಂಡಲ್‌ ಕಾರ್ನರ್‌

ಹಸಿವು ಇಲ್ಲದವನಿಗೆ ಮೃಷ್ಟಾನ್ನವೂ ಹಳಸಿದಂತೆ ಅನ್ನಿಸುತ್ತದೆ ಅಲ್ವಾ?

Vijaya Karnataka 25 Nov 2018, 5:00 am
ಹಸಿವು ಇಲ್ಲದವನಿಗೆ ಮೃಷ್ಟಾನ್ನವೂ ಹಳಸಿದಂತೆ ಅನ್ನಿಸುತ್ತದೆ ಅಲ್ವಾ?
Vijaya Karnataka Web kindle corner by komal
ಕಿಂಡಲ್‌ ಕಾರ್ನರ್‌

ದೇವೇಂದ್ರ, ಕಡೂರು
ಹಸಿವು ಇರುವವರಿಗೆ ಈ ಪ್ರಶ್ನೆ ಕೇಳ್ಬಾರ್ದು.

ನಿಮಗೆ ವಯಸ್ಸಾಗಿದೆಯಾ?
ರೇಣು, ಕೊಡೇರಿ
ಆಗ್ತಾ ಇದೆ.

ನಮಗೆ ಒಳ್ಳೆಯದಾಗುವುದಕ್ಕಿಂತ ಬೇರೆಯವರಿಗೆ ಕೆಟ್ಟದಾಗುವುದರ ಬಗ್ಗೆ ಯಾಕೆ ಚಿಂತೆ ಮಾಡುತ್ತಾರೆ?

ದೇವು, ಬೀರೂರು
ಅದಕ್ಕೆ ಎಲ್ಲ ಕೆಟ್ಟು ಹೋಗಿರುವುದು.
ಇತ್ತೀಚೆಗೆ ಸಿನಿಮಾಗಿಂತ ಸೀರಿಯಲ್‌ಗಳೇ ಫೇಮಸ್‌ ಅಲ್ವಾ?
ಸುರೇಶ್‌, ನಂದಬಳ್ಳಿ
ಫ್ರೀ ಅಲ್ವಾ ಅದಕ್ಕೆ.


ಯೋಗರಾಜ ಭಟ್‌ ಹತ್ರ ಕವಿತೆ ಬರೆಸಿಕೊಂಡ್ರೆ ಮಾತ್ರ ಹುಡುಗಿಯೊಬ್ಬಳು ನನ್ನ ಲವ್‌ ಮಾಡ್ತಾಳಂತೆ ?

ನವೀನ್‌, ತುಮಕೂರು
ಯಾಕೆ ಹರಿಕೃಷ್ಣ ಮ್ಯೂಸಿಕ್‌ ಬೇಡ್ವಂತಾ!

ನನ್ನ ಕನಸಲ್ಲಿ ಬರೀ ರಾಜರೇ ಬರ್ತಾರಲ್ಲ?
ಲೋಕೇಶ್‌, ಮೈಸೂರು
ಕುದುರೆ ಮೇಲೆ ಬರ್ತಾರೋ, ನಡೆದುಕೊಂಡು ಬರ್ತಾರೋ!


ಮತ್ತೆ ಎಲ್‌ಕೆಜಿಗೆ ಸೇರ್ಕೋಬೇಕು ಅನ್ನಿಸ್ತಾ ಇದೆ ಏನ್ಮಾಡ್ಲಿ?
ಮಾನಸ, ಉಡುಪಿ
ಎಷ್ಟು ಕೆಜಿ ಇದ್ದೀರಾ ನೀವು!


ದನಗಳನ್ನು ರಾತ್ರಿ ಪಾಳಿಯಲ್ಲಿ ಯಾಕೆ ಕಾಯುವುದಿಲ್ಲ?

ಸಂದೇಶ್‌, ಮೈಸೂರು
ದನಗಳು ಡೀಸೆಂಟ್‌. ಎಲ್ಲಿಗೂ ಹೋಗುವುದಿಲ್ಲ.

ನನ್ನ ಮಗಳು ಚಂದಮಾಮನನ್ನು ತೋರಿಸಿ ಊಟ ಮಾಡಿಸಿದ್ರೆ ಚಂದಮಾಮ ನನಗೆ ಇಷ್ಟ ಇಲ್ಲ ಅಂತಾಳೆ?

ಚೈತ್ರಾ, ರಾಮದುರ್ಗ
ನೀವು ಅಮಾವಸ್ಯೆ ದಿನ ತೋರಿಸಿರಬೇಕು.

ರಾಹುಲ್‌ಗಾಂಧಿ ಜಡೆ ಮಾಯಸಂದ್ರದಲ್ಲಿ ಹೆಣ್ಣು ನೋಡಿದ್ದಾರಂತೆ?
ಸೋಮು, ತುರುವೇಕೆರೆ
ಅದಕ್ಕೆ ಸುಮಾರು ಜಡೆಗಳು ಮಾಯಾ ಆಗಿ ಹೋಗಿವೆ.


ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ. ಇದನ್ನು ಬೇರೆ ರೀತಿ ಹೇಳ್ತಿರಾ?

ಹೇಮಂತ್‌, ಚನ್ನಪಟ್ಟಣ
ಕೆಲಸ ಇಲ್ಲದವನಿಗೆ ಫ್ರೀಡಂ ಪಾರ್ಕ್‌ನಲ್ಲಿಯೂ ನಿದ್ದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ