ಆ್ಯಪ್ನಗರ

ಕಿಂಡಲ್‌ ಕಾರ್ನರ್‌

ಬೀರು ಕುಡಿದವರಿಗೆ ಗುಟಕಾ ಉಚಿತ ಅಂತ ಬಾರ್‌ನವರು ಹೇಳಿದರೆ?

Vijaya Karnataka 9 Dec 2018, 5:00 am
ಬೀರು ಕುಡಿದವರಿಗೆ ಗುಟಕಾ ಉಚಿತ ಅಂತ ಬಾರ್‌ನವರು ಹೇಳಿದರೆ?
Vijaya Karnataka Web kindle corner by komal
ಕಿಂಡಲ್‌ ಕಾರ್ನರ್‌

ಗುರುರಾಜ, ಸಂಗನಕಲ್ಲು
ಎಲ್ಲಾ ಅಲ್ಲೇ ಉಗಿತಾರೆ.

ಲವ್‌ ಮಾಡುವಾಗ ಹೆಚ್ಚಾಗಿ ಪಾರ್ಕ್‌ನಲ್ಲಿರುತ್ತಾರೆ. ಮದುವೆ ಆದ ಮೇಲೆ ?
ಗುರು, ಬಳ್ಳಾರಿ
ಗಿಡಕ್ಕೆ ನೀರು ಬಿಡ್ತಾರೆ.

ಹಗಲು ಕನಸು ನಿಜವಾಗುತ್ತಂತೆ?
ದೇವೇಂದ್ರ, ಕಡೂರು
ಅದನ್ನು ಹೇಳಕ್ಕೆ ನಾನು ದೇವೇಂದ್ರನಾ!

ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಆಗಾಗ ಹಾರನ್‌ ಮಾಡುವುದು ತಪ್ಪಾ?
ಲೋಕೇಶ್‌, ಮೈಸೂರು
ಪ್ರಯಾಣ ಮಾಡುವವರು ಯಾಕೆ ಹಾರ್ನ್‌ ಹಾಕೋದು!

ಅರಿಶಿನದ ಕೊಂಬು ಕಟ್ಟಿದ್ರೆ ಮದುವೆ ಆದಂಗೆ ಅಲ್ವಾ?
ಲೋಕೇಶ್‌, ಹೆಮ್ಮಾಡಿ
ಏನ್‌ ಮಾಡಿದ್ರೂ ಮದುವೆ ಆದಂಗೆ.

ಹಾಲಿವುಡ್‌ ಸಿನಿಮಾದಲ್ಯಾಕೆ ಡ್ಯುಯೆಟ್‌ ಸಾಂಗ್‌ಗಳಿರುವುದಿಲ್ಲ?
ಮಹಾಂತೇಶ್‌, ರಾಣಿಬೆನ್ನೂರು
ಅವರ ಸೀನ್‌ನಲ್ಲಿಯೇ ಡ್ಯುಯೆಟ್‌ ಇರುತ್ತದೆ.

ಸೌಜನ್ಯವಾಗಿರೋದು ಅಂದ್ರೆ ಏನು?
ಸಿಂಧು, ಬೆಂಗಳೂರು
ಅಸಿಂಧೂನಾ ಸಿಂಧು ಮಾಡೋದು.

ನಿಮ್ಮ ಸಿನಿಮಾದಲ್ಲಿ ದಪ್ಪ ಕುಂಕುಮದ ಸ್ವಾಮೀಜಿ ಇರ್ತಾರ?
ಸುಭಾಷ್‌, ಪಾವಗಡ
ಇಲ್ಲ ಚಿಕ್ಕ ಕುಂಕುಮ ಇಟ್ಟುಕೊಳ್ಳೋ ದಪ್ಪ ಸ್ವಾಮೀಜಿ ಇರ್ತಾರೆ.

ನನಗೆ ಈ ಸೆನ್ಸಾರ್‌ ಮಂಡಳಿ ಬಗ್ಗೆ ಇದುವರೆಗೂ ಅರ್ಥವಾಗಿಲ್ಲ. ನಿಮಗೂ ಹಾಗೆ ಆಗಿದೆಯ?
ಬಸವರಾಜ್‌, ಬೀರೂರು
ಆಗ್ದೆ ಇರೋದಕ್ಕೆ ಅವರನ್ನು ಸೆನ್ಸಾರ್‌ ಅಂತಾ ಕರಿಯೋದು.

ಕಾಲನ ಕರೆಗೆ ಓಗೊಟ್ಟರು ಅಂತಾರಲ್ಲ, ಈ ಕಾಲಾ ಯಾರು ಸ್ವಾಮಿ?
ಚರಣ್‌, ಶಿವಮೊಗ್ಗ
ಕಾಲ ಅಂದರೆ ರಜಿನೀಕಾಂತ್‌ ಅಂತೂ ಅಲ್ಲ.

ನಾನು ನಿನ್ನೆ ಕನಸಲ್ಲಿ ಯಾರನ್ನೋ ನೋಡಿ ನಗ್ತಾ ಇದ್ದನಂತೆ?
ವಿಜಯ್‌, ಕಡೂರು
ಹೌದು ನನಗೂ ಬಂದು ಹೇಳಿದರು.

ಆರ್‌ಜಿವಿ ಯಾಕೆ ವಿವಾದಾತ್ಮಕ ನಿರ್ದೇಶಕ?
-ಕರಿಯಪ್ಪ, ಕೈನಡು
ಮ್ಯಾಟರ್‌ ಖಾಲಿಯಾಗಿದೆಯಲ್ಲ ಅದಕ್ಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ