ಆ್ಯಪ್ನಗರ

ಬಾಣ ಬಿಟ್ರೆ ಮಿಸ್‌ ಆಗ್ಬಾರದಂತೆ ಹೌದಾ?

ಬೇರೆ ಯಾರಿಗಾದ್ರೂ ಚುಚ್ಚಿಕೊಳ್ಳುತ್ತಲ್ಲ.

Vijaya Karnataka 10 Mar 2019, 5:00 am
ಯಾವುದು ಸುಲಭ ಸನ್ಯಾಸಿಯಾಗೋದು ಅಥವಾ ಸನ್ಯಾಸತ್ವ ತ್ಯಜಿಸುವುದು?
Vijaya Karnataka Web kindle corner by komal
ಬಾಣ ಬಿಟ್ರೆ ಮಿಸ್‌ ಆಗ್ಬಾರದಂತೆ ಹೌದಾ?


ಬಸಪ್ಪ, ರೋಣಾ

ಕಾವಿ ಹಾಕೋದು ಕಷ್ಟ, ಅದಕ್ಕೆ ಕಾವು ಕೊಡುವುದು ಕಷ್ಟ.



ನಮ್ಮ ಅಂಕಲ್‌ ಮೊಬೈಲ್‌ ರಿಂಗಾದ ಕೂಡಲೇ ಸಖತ್‌ ಗಾಬರಿ ಆಗ್ತಾರೆ ಯಾಕೆ?


ರಾಜೇಶ್‌, ಕೋಲಾರ

ಅವರ ಪಕ್ಕದ ಮನೆ ಆಂಟಿ ಕಾಲ್‌ ಮಾಡ್ತಾ ಇರಬೇಕು. ಒಮ್ಮೆ ಚೆಕ್‌ ಮಾಡಿ.

ಡಾಕ್ಟ್ರು ಬರೆಯುವ ಚೀಟಿ ನಿಮಗೆ ಯಾವಾತ್ತಾದ್ರೂ ಅರ್ಥವಾಗಿದೆಯಾ?

ಚಂದ್ರು, ಚಳ್ಳಕೆರೆ

ಅರ್ಥ ಆಗಬಾರದು ಅಂತಾನೆ ಬರೆಯೋದು.

ನಿಮಗೆ ಯಾವಾತ್ತಾದ್ರೂ ರಾಂಗ್‌ ಕರೆ ಬಂದಿತ್ತಾ?

ಗಣೇಶ್‌, ರಾಣಿಬೆನ್ನೂರು

ಬಂದಾಗೆಲ್ಲ ಒಳ್ಳೆದಾಗಿದೆ.



ಈ ಸೆಲ್ಫಿಯಿಂದ ಸೆಲ್ಫ್‌ ರೆಸ್ಪೆಕ್ಟ್ ಬರತ್ತಾ?

ಮೈಲಾರಪ್ಪ, ಉಡುಪಿ

ಸೆಲ್ಫ್‌ ಖುಷಿ ಸಿಗತ್ತೆ.

ಈ ರಾಜಕಾರಣಿಗಳ್ಯಾಕೆ ಎಲೆಕ್ಷನ್‌ ಟೈಮ್‌ನಲ್ಲಿ ಹುಚ್ಚಾಪಟ್ಟೆ ಓಡಾಡ್ತಾರೆ?

ವಿಜಯ್‌, ತುಮಕೂರು

ಓಡಾಡಿಲ್ಲ ಅಂದರೆ ಐದು ವರ್ಷ ರೆಸ್ಟ್‌ ತಗೋಬೇಕಾಗತ್ತೆ ಅದಕ್ಕೆ.

ನೀವು ಫಸ್ಟ್‌ ಕಲಿತಿದ್ದು ಕನ್ನಡನೋ, ಇಂಗ್ಲಿಷೋ?

ನಟರಾಜ್‌, ಚಿಕ್ಕನಾಯಕನಹಳ್ಳಿ

ನನ್ನ ಮಾತೃ ಭಾಷೆನಾ!

ಮನುಷ್ಯ ಸುಳ್ಳು ಹೇಳದ ದಿನ ಯಾವುದಾದರೂ ಇದೆಯಾ?

ಚಂದ್ರು, ಹಿರಿಯೂರು

ಸತ್ತ ದಿನ.



ಬಾಣ ಬಿಟ್ರೆ ಮಿಸ್‌ ಆಗ್ಬಾರದಂತೆ ಹೌದಾ?


ರಾಜು, ಸಾಗರ

ಬೇರೆ ಯಾರಿಗಾದ್ರೂ ಚುಚ್ಚಿಕೊಳ್ಳುತ್ತಲ್ಲ.

ಸಲ್ಮಾನ್‌ ಖಾನ್‌ಗೆ ನೀವಾದ್ರೂ ಹೆಣ್ಣು ಹುಡುಕಿ ಕೊಡಬಾರದಾ?

ಮಂಜುನಾಥ್‌, ರಾಮನಗರ

ನಾನೇನು ಬ್ರೋಕರ್ರಾ!

ಕನ್ನಡದ ಶಕ್ತಿಮಾನ್‌ ಸೀರಿಯಲ್‌ಗೆ ನೀವೆ ಹೀರೊ ಅಂತೆ?

ಲೋಕೇಶ್‌, ಮಂಡ್ಯ

ಡಬ್ಬಿಂಗ್‌ಗಾ...

ನೀವು ಈ ಬಾರಿ ಯಾರಿಗೂ ಗೊತ್ತಾಗದ ಹಾಗೆ ಲೋಕಸಭಾ ಎಲೆಕ್ಷನ್‌ ಟಿಕೆಟ್‌ಗೆ ಟ್ರೈ ಮಾಡಿದ್ರಂತೆ?

ಧರಣಿ, ಕೆ ಬಿ ಕ್ರಾಸ್‌

ಬೆಂಗಳೂರು ಗ್ರಾಮಾಂತರಕ್ಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ