ಆ್ಯಪ್ನಗರ

ನಮ್ಮ ಯಜಮಾನ್ರು ಯಾವಾಗ್ಲೂ ಅವರ ಮಾಜಿ ಲವರ್‌ಗೆ ನನ್ನ ಹೋಲಿಸ್ತಾರೆ ಏನ್ಮಾಡ್ಲಿ?

ನೀವು ರಾಜಿ ಆಗ್ಬಿಡ್ಲಿ ಅಂತ ಇರಬೇಕು.

Vijaya Karnataka 12 May 2019, 5:00 am
Vijaya Karnataka Web kindle corner by komal
ನಮ್ಮ ಯಜಮಾನ್ರು ಯಾವಾಗ್ಲೂ ಅವರ ಮಾಜಿ ಲವರ್‌ಗೆ ನನ್ನ ಹೋಲಿಸ್ತಾರೆ ಏನ್ಮಾಡ್ಲಿ?



ಈ ಹೆಂಗಸರು ಯಾಕೆ ಒಮ್ಮೊಮ್ಮೆ ಜಾಸ್ತಿ ಮಾತಾಡ್ತಾರೆ, ಒಮ್ಮೊಮ್ಮೆ ಮಾತೇ ಆಡುವುದಿಲ್ಲ?


ಸುರೇಶ್‌, ಕೋಲಾರ

ಅದು ಕರೆನ್ಸಿ ಮೇಲೆ ಡಿಪೆಂಡ್‌ ಆಗುತ್ತೆ.



ಸ್ವಾಮೀಜಿಗಳೆಲ್ಲ ಎಲೆಕ್ಷನ್‌ಗೆ ನಿಲ್ಲುತ್ತಿದ್ದಾರಲ್ಲ, ಇದು ಒಳ್ಳೆ ಶಕುನನಾ?


ಜಯವಂತ ಪೈ, ಕುಂದಾಪುರ

ಮಠಕ್ಕೆ ಒಳ್ಳೆ ಅಪಶಕುನ.

ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸಿದವರಿಗೆ ಇದುವರೆಗೂ ಒಳ್ಳೆಯದಾಗಿದೆಯಾ?

ಜಯಂತ್‌, ಉಡುಪಿ

ಪುನಃ ಅಡ ಇಟ್ಟಾಗ ಒಳ್ಳೆಯದಾಗಿದೆ.

ಮೇ 23 ರ ನಂತರ ಸರ್ಕಾರ ಬೀಳಿಸ್ತಾರೋ ,ಇಲ್ಲ ಬೀಳತ್ತೋ ನಿಮಗೇನಾದ್ರು ಗೊತ್ತಾ?

ಮಂಜುನಾಥ್‌, ಗೊರಿಹಟ್ಟಿ

ಆಡಿಸಿ ನೋಡು ಬೀಳಿಸಿ ನೋಡು.

ಸಿನಿಮಾಗಳ ಸಮಯ ಇತ್ತೀಚೆಗೆ ಕಡಿಮೆಯಾಗುತ್ತಿದೆಯಲ್ಲ ಯಾಕೆ?

ಸಂತೋಷ್‌, ಮಂಗಳೂರು

ಜನರ ತಾಳ್ಮೆ ಕಡಿಮೆ ಆಗುತ್ತಿದೆಯಲ್ಲಾ ಅದಕ್ಕೆ.



ನೀವು ಪಬ್ಲಿಕ್‌ ಟ್ಯಾಕ್ಸಿಯಲ್ಲಿ ಓಡಾಡ್ತೀರಾ?


ರಾಜೀವ್‌, ಸೋಮವಾರಪೇಟೆ

ಯಾಕೆ ನಾವು ಪಬ್ಲಿಕ್‌ ಅಲ್ವಾ!

ನಮ್ಮ ಯಜಮಾನ್ರು ಯಾವಾಗ್ಲೂ ಅವರ ಮಾಜಿ ಲವರ್‌ಗೆ ನನ್ನ ಹೋಲಿಸ್ತಾರೆ ಏನ್ಮಾಡ್ಲಿ?

ನಂದಿನಿ, ನಂದಬಳ್ಳಿ

ನೀವು ರಾಜಿ ಆಗ್ಬಿಡ್ಲಿ ಅಂತ ಇರಬೇಕು.

ಮೈಸೂರು ರಸ್ತೆಯಲ್ಲಿ ಬಿರಿಯಾನಿ ಹೋಟೆಲ್‌ ಇಟ್ಟರೆ ವ್ಯಾಪಾರ ಜಾಸ್ತಿಯಂತೆ?

ವಿಜಯ್‌, ಗುಬ್ಬಿ

ಇಟ್ಟೋರು ಸುಮಾರು ಜನ ತಳ್ಳೊ ಗಾಡಿಗೆ ಬಂದವರಲ್ಲ.



ರಾಜ ಗುರುಗಳ ಕರಾಮತ್ತು ಈಗಲೂ ನಡೆಯುತ್ತಾ?


ಮೈಲಾರಪ್ಪ, ತುಮಕೂರು

ರಾಜ ಶಿಷ್ಯರು ಇರುವವರೆಗೂ.



ಬದುಕಲ್ಲಿ ಸಾಧಿಸಬೇಕು ಅಂದ್ರೆ ತುಂಬಾ ನಡೆಯಬೇಕಾ?


ರಘುನಾಥ್‌, ಬೆಂಗಳೂರು

ತೆವಳಲೂ ಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ