ಆ್ಯಪ್ನಗರ

ಹೊಸ ಸಿನಿಮಾಗಳಲ್ಲಿ ಹೊಸತನ ಕಡಿಮೆಯಾಗುತ್ತಿದೆಯಲ್ಲಾ?

ಅದು ಅವರ ಹಳೆತನದಿಂದ.

Vijaya Karnataka 19 May 2019, 5:00 am
Vijaya Karnataka Web kindle corner by komal
ಹೊಸ ಸಿನಿಮಾಗಳಲ್ಲಿ ಹೊಸತನ ಕಡಿಮೆಯಾಗುತ್ತಿದೆಯಲ್ಲಾ?

ಹಾಡುಗಳು ಅರ್ಥ ಆಗದೇ ಇದ್ರೂ ಜನ ಪದೇಪದೆ ಕೇಳುವುದೇಕೆ?
ದೇವೇಂದ್ರ, ಕಡೂರು
ಅರ್ಥ ಆಗಲಿ ಅಂತ.



ಆರ್‌ಸಿಬಿ ಸೋತರೂ ಜನ ಬೇಜಾರು ಮಾಡಿಕೊಳ್ಳದಿರಲು ಕಾರಣ?
ಚೆನ್ನವೀರ ನಲ್ವಾಡ. ಚಿಕ್ಕೇನಕೊಪ್ಪ
ಮತ್ತೆ ಯಾವಾತ್ತಾದ್ರೂ ಅವರ ಓನರ್‌ ವಾಪಸ್‌ ಬಂದು ಗೆಲ್ಲಿಸ್ತಾರೆ ಅಂತ.

ನೀವು ಆಕಾಶವಾಣಿಯಲ್ಲಿ ಬರಲ್ವಲ್ಲ ಯಾಕೆ?
ಸುಖೇಶ್‌, ಮಂಗಳೂರು
ತರಂಗ ಸ್ವಲ್ಪ ಬದಲಾಗಿದೆ.

ಇತ್ತೀಚೆಗೆ ನೀವು ಸೋಷಿಯಲ್‌ ಮೀಡಿಯಾದಲ್ಲಿ ಸೋಷಿಯಲ್‌ ಆಗಿ ಮಾತಾಡ್ತಿರಂತೆ?
ಮಂಜುನಾಥ್‌, ಕುಣಿಗಲ್‌
ನಿಮಗೆ ಅನ್ನಿಸ್ತಾ!


ರಾಜಕೀಯದಲ್ಲಿರುವವರಿಗೆ ಮಿದುಳು ಇರುವುದಿಲ್ಲವಾ?
ಕರಿಯಪ್ಪ, ಸಿರಾ
ಹಾಗೆಲ್ಲ ಹೇಳ್ದೋರಿಗೆ ಸರ್ಜರಿ ಮಾಡಿ ಬಿಡ್ತಾರೆ.


ನಿಮ್ಮ ಪ್ರಕಾರ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ?
ವಿಜಯ್‌, ಧಾರವಾಡ
ಯಾರಾರ‍ಯರ ಕಣ್ಣು ಅನುಗ್ರಹ ಮನೆ ಮೇಲಿದಿಯೋ ಅವರೆಲ್ಲರೂ ಇದ್ದಾರೆ.

ಈ ಬರ್ತ್‌ಡೇಗಳ ಆಚರಣೆಯಿಂದ ಏನಾದ್ರೂ ಉಪಯೋಗ ಇದೆಯಾ?
ರಾಜೇಶ್‌, ಹುಣಸೂರು
ಗಿಫ್ಟ್‌ ಅಥವಾ ಬೊಕ್ಕೆ ಸಿಗತ್ತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ