ಆ್ಯಪ್ನಗರ

ಮಳೆಗಾಲ ಬೆಚ್ಚಗಿರಲಿ ಎಂದ ನಿಮ್ರತ್‌

ಮಳೆಗಾಲದಲ್ಲಿ ಯಾವುದೇ ರುಟೀನ್‌ ಅಳವಡಿಸಿಕೊಳ್ಳುವ ಮುನ್ನ ಅದು ನಿಮಗೆ ಹೊಂದುತ್ತದೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಿ.

Vijaya Karnataka 23 Jun 2019, 4:06 pm
ಲವಲವಿಕೆಸುದ್ದಿಲೋಕ
Vijaya Karnataka Web Bollywood-Actress-Nimrat-Kaur-One-Piece-Dress-hd-photos


ಮಳೆಗಾಲದಲ್ಲಿ ಯಾವುದೇ ರುಟೀನ್‌ ಅಳವಡಿಸಿಕೊಳ್ಳುವ ಮುನ್ನ ಅದು ನಿಮಗೆ ಹೊಂದುತ್ತದೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಬದಲಾಗುವ ಲೈಫ್‌ಸ್ಟೈಲ್‌ ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಧಕ್ಕೆಯಾಗಕೂಡದು ಎನ್ನುತ್ತಾರೆ ನಿಮ್ರತ್‌ ಕೌರ್‌. ಸೀಸನ್‌ನಲ್ಲಿ ಆಯಾ ವ್ಯಕ್ತಿಗೆ ತಕ್ಕಂತೆ ನಾವು ಅಳವಡಿಸಿಕೊಳ್ಳುವ ಲೈಫ್‌ಸ್ಟೈಲ್‌ ಕೂಡ ಬದಲಾಗುತ್ತದೆ ಎನ್ನುತ್ತಾರೆ ಅವರು.

ಮಳೆಗಾಲಕ್ಕೆ ಆಯ್ಕೆ

ಆದಷ್ಟೂ ಮಳೆಯಲ್ಲಿ ನೆನೆದರೂ ಹೆಚ್ಚು ಒದ್ದೆಯಾಗದ ಉಡುಪುಗಳನ್ನೇ ಧರಿಸಲು ಪ್ರಿಫರ್‌ ಮಾಡಿ. ಮೇಕಪ್‌ಗೆ ಬೈ ಬೈ ಹೇಳಿ. ಕಣ್ತುಂಬ ಕಪ್ಪಾಗಿ ಕಾಣಿಸುವ ಕಾಡಿಗೆ, ಐ ಲೈನರ್‌ ಬೇಡ. ಅದರಲ್ಲೂ ಕ್ಯಾಶುವಲ್‌ ಮೇಕಪ್‌ಗೆ ಆದ್ಯತೆ ನೀಡಿ ಎನ್ನುತ್ತಾರೆ ಅವರು.

ಬದಲಾಗಿ

ಮೊದಲಿನಂತೆ ಮಳೆಗಾಲ ಬಂದಾಕ್ಷಣಾ ಮುದುಡಿಕೊಂಡು ಮನೆ ಮೂಲೆ ಸೇರುವ ಕಾಲ ಇದಲ್ಲ! ಈಗ ಮಾನ್ಸೂನ್‌ ಕೂಡ ಕಲರ್‌ಫುಲ್‌. ಮೈ ತುಂಬಾ ಬಟ್ಟೆ ಹೊದ್ದರೂ ಗ್ಲಾಮರಸ್‌ ಆಗಿ ಕಾಣುವ ಕಾಲವಿದು. ಮುಂದಿನ ಸಮ್ಮರ್‌ ಸೀಸನ್‌ ಬರುವವರೆಗೂ ಇವೆಲ್ಲವನ್ನು ಒಂದೆಡೆ ಗಂಟು ಮೂಟೆ ಕಟ್ಟಿ , ಕಬೋರ್ಡ್‌ನಲ್ಲಿ ಲಾಕ್‌ ಮಾಡಿ. ಮಳೆಗಾಲಕ್ಕೆ ತಕ್ಕ ಹಾಗೆ, ಡ್ರೆಸ್ಸಿಂಗ್‌ ಸೆನ್ಸ್‌ ಬದಲಿಸಿಕೊಳ್ಳಿ. ಟ್ರೆಂಡಿಯಾಗಿ. ಜತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ಸಲಹೆ ನೀಡುತ್ತಾರೆ ನಿಮ್ರತ್‌.

ಶಾಪಿಂಗ್‌ ಟಿಫ್ಸ್‌

ಮಳೆಯಲ್ಲಿ ಶಾಪಿಂಗ್‌ ಮಾಡಿದಲ್ಲಿ ಆರೋಗ್ಯ ಸಮಸ್ಯೆ ಎದುರಾಗಬಹುದು. ಶಾಪಿಂಗ್‌ ಚಿಕ್ಕ-ಪುಟ್ಟದ್ದೇ ಆಗಿರಲಿ, ಮಳೆಗಾಲದಲ್ಲಿ ಮನೆಯಿಂದ ಹೊರಹೊರಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಯಾವುದೇ ಜಂಜಾಟ ಇರದು ಎನ್ನುತ್ತಾರೆ. ಗುಂಪು ಗುಂಪಾಗಿ ಶಾಪಿಂಗ್‌ ತೆರಳುವುದು ಉಚಿತವಲ್ಲ. ಸುಖಾಸುಮ್ಮನೇ, ಮಕ್ಕಳು ಮಳೆ-ಗಾಳಿಗೆ ಸಿಲುಕಬೇಕಾದಂತಹ ಪ್ರಸಂಗಗಳು ಎದುರಾಗಬಹುದು. ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಟಿಫ್ಸ್‌ ನೀಡುತ್ತಾರೆ.

ವಾಹನದಲ್ಲಿ ತೆರಳುವಾಗ, ಮಳೆಯ ಮುನ್ಸೂಚನೆಯನ್ನು ಕಂಡುಕೊಂಡು ಮನೆಯಿಂದ ಹೊರಗೆ ಹೊರಡಿ. ಇಲ್ಲವಾದಲ್ಲಿ ಮಳೆಯಲ್ಲಿ ಸಿಲುಕಿ ಸಂಚಾರ ದಟ್ಟಣೆ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಸಲಹೆ ನೀಡುತ್ತಾರೆ ನಿಮ್ರತ್‌.

---

ಕೋಟ್ಸ್‌

ಮಳೆಗಾಲದಲ್ಲಿ ಹೊರಗೆ ಹೋಗುವಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೊರಡುವುದು ಉತ್ತಮ.

- ನಿಮ್ರತ್‌ ಕೌರ್‌, ನಟಿ

-------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ