ಆ್ಯಪ್ನಗರ

ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ

ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಯುವಕ ಯುವತಿಯರು ತಮ್ಮ ಫ್ಯಾಮಿಲಿಯೊಂದಿಗೆ ಹಬ್ಬದ ಆಚರಣೆ ಮಾಡುತ್ತಿರುವುದು ವಿಶೇಷ.

Vijaya Karnataka 4 Mar 2019, 3:07 pm
ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಹಬ್ಬಗಳ ಆಚರಣೆ ಹಾಗೂ ಸೆಲೆಬ್ರೆಷನ್‌ನಲ್ಲಿ ಇಂದು ಯುವಕ-ಯುವತಿಯರು ಅತ್ಯುತ್ಸಾಹದಿಂದ ಪಾಲ್ಗೊಳ್ಳಲಾರಂಭಿಸಿದ್ದಾರೆ.
Vijaya Karnataka Web Shiva


ನಗೆ ಜಾಗರಣೆ:
ಇಡೀ ರಾತ್ರಿ ನಿದ್ದೆಯನ್ನು ಮಾಡದೇ ಜಾಗರಣೆ ಮಾಡುವವರಿಗಾಗಿಯೇ ದೇವಸ್ಥಾನ, ಮನೆ, ನಗರದ ಪ್ರಮುಖ ಬೀದಿಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ನಗೆ ಹಬ್ಬ, ಹರಿಕಥೆ, ಬೊಂಬೆಯಾಟ, ಶಿವನ ನಾಮ ಭಜನೆ, ಭಕ್ತಿಗೀತೆಗಳು, ಶಿವನ ಜೀವನ ಚರಿತ್ರೆ ಕುರಿತ ಕಾರ್ಯಕ್ರಮಗಳು ನಡೆಯುತ್ತಿವೆ.

ಕುಟುಂಬದವರೊಂದಿಗೆ ಆಚರಣೆ
ಫ್ಯಾಮಿಲಿಯೊಂದಿಗೆ ಹಬ್ಬವನ್ನು ಆಚರಿಸುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ ಕಾರ್ಯಕ್ರಮವೊಂದರ ಆಯೋಜಕರು. ತಮ್ಮ ಬಿಝಿ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ದೂರದ ಊರಿನಲ್ಲಿರುವ ಆಪ್ತರ ಮನೆ ಹಾಗೂ ತಮ್ಮ ಮನೆಗೆ ಹೋಗಿ ಕುಟುಂಬದ ಸದಸ್ಯರ ಜತೆ ಹಬ್ಬವನ್ನು ಆಚರಣೆ ಮಾಡುವುದು ಸಾಮಾನ್ಯವಾಗಿದೆ. 'ನಮ್ಮೂರಿಗೆ ಹೋಗಿ ಮನೆಯವರ ಜತೆಗೆ ಕಾಲ ಕಳೆದು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇನೆ' ಎನ್ನುತ್ತಾರೆ ವಿದ್ಯಾರ್ಥಿ ಚೈತ್ರಾ.

ವಿಶೇಷ ಪೂಜೆ
ಬೆಂಗಳೂರಿನ ಶಿವನಿರುವ ಎಲ್ಲಾ ದೇವಸ್ಥಾನಗಳಲ್ಲಿ ಇಂದು ವಿಶೇಷವಾದಂತಹ ಪೂಜೆ ಹಮ್ಮಿಕೊಳ್ಳಲಾಗಿದೆ. ಶಿವನ ಆರಾಧಕರು ಕುಟುಂಬ ಸಮೇತರಾಗಿ ಹತ್ತಿರದಲ್ಲಿರುವ ದೇವಸ್ಥಾನಗಳಿಗೆ ಸಾಂಪ್ರದಾಯಕ ಉಡುಗೆಯಲ್ಲಿ ಭೇಟಿ ನೀಡುವುದು ಹೆಚ್ಚಾಗಿದೆ. ಇನ್ನು ದೇವಾಲಯಗಳಲ್ಲಿ ರಾತ್ರಿಯೀಡಿ ಹಾಲು-ಮೊಸರಿನ ಅಭಿಷೇಕ, ತುಪ್ಪದ ಅಭಿಷೇಕ, ಗಂಧದ ಅಭಿಷೇಕ, ಕುಂಕುಮದ ಅಭಿಷೇಕ, ಪಂಚಾಮೃತದ ಅಭಿಷೇಕಗಳು ನಡೆಯಲಿದೆ.

ಹಣ್ಣು ಹಂಪಲುಗಳಿಗೆ ಹೆಚ್ಚಿದ ಬೇಡಿಕೆ
ಶಿವರಾತ್ರಿಯಲ್ಲಿ ಉಪವಾಸ ಹಾಗೂ ವ್ರತವನ್ನು ಮಾಡುವವರು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣು-ಹಂಪಲ ಬೆಲೆ ಹೆಚ್ಚಾಗಿದೆ. ಜ್ಯೂಸ್‌ ಸೆಂಟರ್‌, ಫ್ರೂಟ್ಸ್‌ ಸಲಾಡ್‌ ಶಾಪ್‌ನ ಮುಂದೆ ಜನಜಂಗುಳಿ ಹೆಚ್ಚಾಗಿದೆ. ಈ ಹಬ್ಬದ ಹೆಸರಲ್ಲಿ ಡಯಟ್‌ ಮಾಡುವವರು ಇದ್ದಾರೆ ಎನ್ನಬಹುದು. ಈ ದಿನ ರಸಾಯನ ಹಾಗೂ ಕಟ್‌ ಫ್ರೂಟ್ಸ್‌ ಸವಿಯುವುದು ಡಯಟ್‌ಗೆ ಸಹಕಾರಿ ಎಂದು ಸಲಹೆ ನೀಡುತ್ತಾರೆ ಡಯಟೀಶೀಯನ್ಸ್‌.

ಆಚರಣೆ ಮಾಡುವವರಿಗೆ ಟಿಪ್ಸ್:
ರಾತ್ರಿ ಪೂರ್ಣ ಜಾಗರಣೆ ಮಾಡುವುದರಿಂದ ಗ್ಯಾಸ್ಟ್ರಿಕ್ಟ್ ಸಮಸ್ಯೆ ಆಗದಂತೆ ನೋಡಿಕೊಳ್ಳಿ.

ದೇವಸ್ಥಾನಗಳಲ್ಲಿ ಹಬ್ಬದ ದಿನ ಉದ್ದವಾದ ಕ್ಯೂಇರುವುದರಿಂದ ಸಾಧ್ಯವಾದರೆ ನೀರಿನ ಬಾಟಲ್‌ ಜತೆಗೆ ತೆಗೆದುಕೊಂಡು ಹೋಗಿ.

ಸಾಂಪ್ರದಾಯಿಕ ಉಡುಗೆಗಳಲ್ಲಿಯೇ ಪೂಜೆಯಲ್ಲಿ ಭಾಗಿಯಾದರೆ ಹಬ್ಬದ ಕಳೆ ಹೆಚ್ಚಾಗುತ್ತದೆ.

ಶಿವನ ಅಲಂಕಾರಕ್ಕೆ ನಮ್ಮ ಮನೆಯಲ್ಲೆ ಪ್ರಾಧಾನ್ಯತೆ. ಮಾರುಕಟ್ಟೆಯಲ್ಲಿ ನಾನಾ ವೆರೈಟಿ ಹೂವುಗಳನ್ನು ಖರಿದೀಸಿ ಅಲಂಕರಿಸುತ್ತೇವೆ.
ಮುಕ್ತ ಶಿವಮೂರ್ತಿ, ಗೃಹಿಣಿ

ಶಿವರಾತ್ರಿ ಹಬ್ಬದಲ್ಲಿ ಅಮ್ಮ ಮಾಡುವ ರಸಾಯನ ನನಗೆ ತುಂಬಾ ಇಷ್ಟ. ಈ ಹಬ್ಬದಲ್ಲಿ ಜಾಗರಣೆ ಮಾಡುತ್ತಾ ಫ್ಯಾಮಿಲಿ ಸದಸ್ಯರೊಂದಿಗೆ ಕಾಲ ಕಳೆಯುತ್ತೇನೆ.
ಆಕರ್ಷ್‌, ವಿದ್ಯಾರ್ಥಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ