ಆ್ಯಪ್ನಗರ

ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಿ, ಇಲ್ಲಿದೆ ಕೆಲವು ಟಿಪ್ಸ್

ಉರಿಬಿಸಿಲಿನಲ್ಲಿ ತಾಪ ಹೆಚ್ಚಾದಂತೆ ದೇಹ ದಣಿಯುತ್ತದೆ. ಹಾಗಾಗಿ ಪ್ರಿಪ್ಲಾನ್‌ ಮಾಡಿ ಕೆಲಸ ಕಾರ್ಯಗಳನ್ನು ತಂಪಿನ ವೇಳೆಯಲ್ಲಿ ಮುಗಿಸಿಕೊಳ್ಳಿ.

Agencies 7 May 2019, 3:59 pm
ಬೆಳಗ್ಗೆ 11 ರಿಂದ 3 ಗಂಟೆಯ ಸಮಯದಲ್ಲಿ ಬಿಸಿಲು ಹೆಚ್ಚಿರುತ್ತದೆ. ಹೊರಗೆ ತಾಪ ಹೆಚ್ಚಾದಂತೆ ದೇಹ ದಣಿಯುತ್ತದೆ. ಸೋ, ಮುಂದಿನ ದಿನದ ಕೆಲಸವನ್ನು ಹಿಂದಿನ ದಿನವೇ ಪ್ಲಾನ್‌ಮಾಡಿ, ಬಿಸಿಲು ಏರುವುದಕ್ಕಿಂತ ಮುಂಚೆಯೇ ಕೆಲಸ ಮುಗಿಸಿಕೊಳ್ಳಲು ಪ್ರಯತ್ನಿಸಿ.
Vijaya Karnataka Web Summer Heat


ನೆರಳಲ್ಲಿ ಓಕೆ

ತೋಟಕ್ಕೆ ನೀರು ಹಾಕುವುದು ಸೇರಿದಂತೆ, ಮನೆಯ ಮುಂದಿನ ಹೊರಗಿನ ಕೆಲಸಗಳಿದ್ದಲ್ಲಿ, ಮುಂಜಾನೆ ಅಥವಾ ಸಂಜೆ ಮಾಡಿಕೊಳ್ಳಿ. ನೆರಳಲ್ಲಿ ಕೆಲಸ ಮಾಡಿ.

ಕೂಲ್‌ ಇರಿಸಿ.


ನಿಮ್ಮ ಮನೆಯಲ್ಲಿ ಹವಾ ನಿಯಂತ್ರಣವಿಲ್ಲವೇ ಹಾಗಾದಲ್ಲಿ, ಯೋಚಿಸಬೇಡಿ. ಒಳಾಂಗಣ ಕೂಲ್‌ ಆಗಿರಿಸಲು ಒಂದೆರೆಡು ಇನ್‌ಡೋರ್‌ ಪ್ಲಾಂಟ್ಸ್‌ ಇರಿಸಿ. ಎವಾಪರೇಷನ್‌ ಕ್ರಿಯೆಯಿಂದಾಗಿ ಕೋಣೆಯ ಉಷ್ಣಾಂಶ ಹೆಚ್ಚುವುದಿಲ್ಲ. ಜತೆಗೆ ಕಿಟಕಿಗಳನ್ನು ತೆಗೆಯಿರಿ. ಕರ್ಟನ್‌ ಹರಡಿ. ಇತ್ತ ಗಾಳಿಯಾಡುವುದಲ್ಲದೆ, ಕೋಣೆ ಕೂಲಾಗಿರುತ್ತದೆ.

ನೀರಿನಂಶ ಹೆಚ್ಚಿಸಿಕೊಳ್ಳಿ

ನಿಮಗೆ ಬಾಯರಿಕೆಯಾಗಲಿ, ಬಿಡಲಿ ಆದಷ್ಟೂ ನೀರನ್ನು ಕುಡಿಯಿರಿ. ಹಣ್ಣಿನ ರಸ ಇಲ್ಲವೇ ಹಣ್ಣು ಕೂಡ ದೇಹಕ್ಕೆ ನೀರಿನಂಶ ನೀಡುತ್ತದೆ. ಹೊರಗೆ ತೆರಳುವಾಗ ನೀರಿನ ಬಾಟಲ್‌ ಅನ್ನು ಕೊಂಡೊಯ್ಯಿರಿ.

ಹೊರಗಡೆ ತಿನ್ನಬೇಡಿ


ಆದಷ್ಟೂ ಹೊರಗಡೆ ಅಶುದ್ಧ ಪರಿಸರದಲ್ಲಿ ಮಾರುವ ತಿಂಡಿ-ತಿನಿಸುಗಳಿಂದ ದೂರವಿದ್ದಲ್ಲಿ ನಿಮ್ಮ ಬಳಿ ಯಾವುದೇ ಸಾಂಕ್ರಾಮಿಕ ರೋಗ ಸುಳಿಯದು.

ಡ್ರೆಸ್ಸಿಂಗ್‌ ಹೀಗಿರಲಿ

ಬಿಗಿಯಾದ ಡ್ರೆಸ್‌ಗಳನ್ನು ಕಬೋರ್ಡ್‌ನಲ್ಲಿಟ್ಟು ಕೆಲ ಕಾಲ ಬೀಗ ಹಾಕಿ. ಕೊಂಚ ಸಡಿಲವಾದ, ಮೈಗೆ ಅಂಟಿಕೊಳ್ಳದ ಬಟ್ಟೆಗಳನ್ನು ಧರಿಸಿ. ಅತಿ ಬೆವರುವವರಾದಲ್ಲಿ ಕಾಟನ್‌ ಬಟ್ಟೆ ಧರಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ