ಆ್ಯಪ್ನಗರ

ಸದಾ ಖುಷ್ ಖುಷಿಯಾಗಿರಲು ಸರಳ ಸೂತ್ರ

ತೀರ ಮೂಡಿ ಅಂದೆನಿಸಿಕೊಳ್ಳಲು ಒತ್ತಡದ ಜೀವನಶೈಲಿ, ಅನಾರೋಗ್ಯ ಕಾರಣವಿರಬಹುದು. ಆದರೆ ಅದರ ಜತೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಿಲ್ಲ. ಅದನ್ನು ಎದುರಿಸಿ.

Vijaya Karnataka Web 26 Mar 2019, 3:02 pm
ಸದಾ ಹ್ಯಾಪ ಮೋರೆ ಹಾಕಿಕೊಂಡಿದ್ದರೆ ನೀವು ಮಾನಸಿಕವಾಗಿ ಅಷ್ಟೇ ಅಲ್ಲ, ದೈಹಿಕವಾಗಿಯೂ ದುರ್ಬಲರಾಗುತ್ತೀರ. ಖುಷಿಯಾಗಿರಬೇಕು ಅಂದರೆ ನಿಮ್ಮ ಮನಸ್ಸಿನ ಆರೋಗ್ಯವಷ್ಟೆ ಅಲ್ಲ, ದೈಹಿಕ ಆರೋಗ್ಯ ಕೂಡ ವೃದ್ಧಿಸುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲೂ ಖುಷಿಯಾಗಿರುವುದು ಸುಲಭವಲ್ಲ. ಆದರೆ ಅದು ಅಸಾಧ್ಯವೂ ಅಲ್ಲ. ಅದಕ್ಕೊಂದಿಷ್ಟು ನಿಯಮಗಳನ್ನು ಪಾಲಿಸಿ. ಕೆಲವರನ್ನು ಗಮನಿಸಿ ನೋಡಿ. ಎಂಥದ್ದೇ ಸಂದರ್ಭವನ್ನು ತೀರ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಚಿಕ್ಕಪುಟ್ಟದ್ದನ್ನೇ ತಲೆಗೆ ಹಚ್ಚಿಕೊಂಡು ಕೊರಗುವುದೂ ಇಲ್ಲ. ಅವರ ಮುಖದಲ್ಲೊಂದು ಉತ್ಸಾಹದ ಬುಗ್ಗೆ, ಕೆಲಸದಲ್ಲಿ ಕ್ರಿಯಾಶೀಲತೆ , ಮಾತಿನಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ನೀವು ಕೂಡ ಸದಾ ಸಂತೋಷದಿಂದ ಇರುವುದನ್ನು ಕಲಿತುಕೊಳ್ಳಿ.
Vijaya Karnataka Web Happy


ತೀರ ಮೂಡಿ ಅಂದೆನಿಸಿಕೊಳ್ಳಲು ಒತ್ತಡದ ಜೀವನಶೈಲಿ, ಅನಾರೋಗ್ಯ ಕಾರಣವಿರಬಹುದು. ಆದರೆ ಅದರ ಜತೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಿಲ್ಲ. ಅದನ್ನು ಎದುರಿಸಿ.

ಅತಿಯಾದ ಭಾವುಕತೆ ನಿಮ್ಮನ್ನು ಮತ್ತಷ್ಟು ದುರ್ಬಲರನ್ನಾಗಿ ಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಭಾವನೆಗಳ ಮೇಲೆ ನಿಯಂತ್ರಣವಿರಲಿ.

ಧನಾತ್ಮಕ ಯೋಚನೆ, ಆತ್ಮವಿಶ್ವಾಸ ಜತೆಗಿರಲಿ.

ನಿಮಗೊಂದು ಲಿಮಿಟೇಷನ್‌ ಇದೆ. ಅದನ್ನು ಅರಿತು ಬದುಕು ನಡೆಸಿದರೆ ಸಂತೋಷವಾಗಿರುತ್ತೀರ.

ಅತೀ ನಿರೀಕ್ಷೆ ಒಳ್ಳೆಯದಲ್ಲ. ಹಾಗಂತ ನಕಾರಾತ್ಮಕ ಯೋಚನೆ ಕೂಡ ಬೇಡ.

ಚಿಕ್ಕಚಿಕ್ಕ ಸಂಗತಿಗೂ ಖುಷಿ ಪಡಿ.

ಜನರ ಜತೆ ಹೆಚ್ಚೆಚ್ಚು ಬೆರೆಯಿರಿ.

ಯೋಗ, ಧ್ಯಾನ ರೂಢಿಸಿಕೊಳ್ಳಿ.

ಸೇವಿಸುವ ಆಹಾರ ಪದಾರ್ಥದ ಮೇಲೂ ಹಿಡಿತವಿರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ