ಆ್ಯಪ್ನಗರ

ಮಳೆಗಾಲದ ಅಂಬ್ರೆಲ ನಿರ್ವಹಣೆಗೆ 3 ಐಡಿಯಾ

ಮಳೆಗಾಲದಲ್ಲಿ ಬಳಸುವ ಛತ್ರಿಗಳ ನಿರ್ವಹಣೆ ಸರಿಯಾಗಿ ಮಾಡಿದಲ್ಲಿ ಹೆಚ್ಚು ಬಾಳಿಕೆ ಬರುತ್ತದೆ ಈ ಬಗ್ಗೆ ಇಲ್ಲಿದೆ 3 ಐಡಿಯಾ

Vijaya Karnataka 20 Jul 2019, 5:00 am
ಲವಲವಿಕೆಸುದ್ದಿಲೋಕ
Vijaya Karnataka Web pexels-photo-1844746


ಮಳೆಗಾಲದಲ್ಲಿ ಬಳಸುವ ಛತ್ರಿಗಳ ನಿರ್ವಹಣೆ ಸರಿಯಾಗಿ ಮಾಡಿದಲ್ಲಿ ಹೆಚ್ಚು ಬಾಳಿಕೆ ಬರುತ್ತದೆ. ಈ ಬಗ್ಗೆ ಇಲ್ಲಿದೆ 3 ಐಡಿಯಾ.

1. ಬಳಕೆ ಹೀಗಿರಲಿ

ಛತ್ರಿಯನ್ನು ಬಿಡಿಸುವಾಗ ಕೆಳಮುಖವಾಗಿ ಬಿಡಿಸಿ, ಆನಂತರ ಮೇಲ್ಮುಖ ಮಾಡಿಕೊಳ್ಳಬೇಕು. ಒಮ್ಮೆ ಛತ್ರಿ ಒದ್ದೆಯಾದರೆ, ಅದನ್ನು ಹಾಗೆಯೇ ಮಡಿಸಿ ಇಡದೇ ಅದನ್ನು ಒಣಗಿಸಿ ತೆಗೆದಿಡಬೇಕು. ಛತ್ರಿಯನ್ನು ಮಡಿಸಿ ಇಡುವಾಗ ಛತ್ರಿಯ ಹ್ಯಾಂಡಲ್‌ ಮೇಲ್ಮುಖಕ್ಕೆ ಬರುವಂತೆ ಮಡಿಸಬೇಕು. ಯಾವಾಗಲೂ ಛತ್ರಿಯ ಒಳಭಾಗಕ್ಕೆ ನೀರು ಹೋಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಛತ್ರಿಗೆ ಬೇಗ ರಸ್ಟ್‌ ಹಿಡಿಯುತ್ತದೆ.

2. ಆಯ್ಕೆ ಸರಿಯಾಗಿರಲಿ

ಮಳೆಯಲ್ಲಿ ಜೋರಾಗಿ ಗಾಳಿ ಬರುವಾಗ ಛತ್ರಿಯನ್ನು ಗಾಳಿಗೆ ವಿರುದ್ಧವಾಗಿ ಹಿಡಿದುಕೊಳ್ಳಬೇಕು. ಹೀಗೆ ಮಾಡುವುದರಿಂದ ಛತ್ರಿ ಹಾಳಾಗುವುದನ್ನು ತಡೆಯಬಹುದು. ಬಣ್ಣ ಬಣ್ಣದ ಛತ್ರಿಗಳು ಹೆಚ್ಚು ಎಕ್ಸ್‌ಪೋಸ್‌ ಆದಾಗ ಮಾಸಬಹುದು. ಕಪ್ಪು ಕಲರಿನ ಛತ್ರಿಗಳು ಹೆಚ್ಚು ಉತ್ತಮ. ಛತ್ರಿಗಳಲ್ಲಿ ಬಗೆ ಬಗೆಯ ಸೈಜ್‌ನದ್ದು ಮಾರುಕಟ್ಟೆಯಲ್ಲಿ ಬಂದಿರುವುದರಿಂದ ನಿಮ್ಮ ಆಯ್ಕೆಯ ಛತ್ರಿಗಳನ್ನು ಖರೀದಿಸಬಹುದು.

3. ಕ್ವಾಲಿಟಿ ಆಯ್ಕೆ

ಉತ್ತಮ ಕ್ವಾಲಿಟಿಯ ಛತ್ರಿಯನ್ನೇ ಖರೀದಿಸುವುದು ಉತ್ತಮ. ಮಳೆಗಾಲದಲ್ಲಿ ಛತ್ರಿಯೊಂದಿಗೆ ಒಂದು ಪ್ಲಾಸ್ಟಿಕ್‌ ಕವರ್‌ ನಿಮ್ಮ ಬ್ಯಾಗ್‌ನಲ್ಲಿದ್ದರೆ ನೀರಿನಿಂದ ಒದ್ದೆಯಾದ ಛತ್ರಿಯನ್ನು ಮಡಚಿಟ್ಟುಕೊಳ್ಳಲು ಸುಲಭವಾಗುತ್ತದೆ. ಬ್ಯಾಗು ಒದ್ದೆಯಾಗುವುದಿಲ್ಲ. ಮನೆಯ ಹೊರಗೆ ಛತ್ರಿಯನ್ನು ಬಿಡಿಸಿಡಬಾರದು. ಜೋರಾಗಿ ಗಾಳಿ ಬಂದಾಗ ಛತ್ರಿ ಹಾರಿ ಹೋಗುವ ಸಂಭವವಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ