ಆ್ಯಪ್ನಗರ

ವಿಂಟರ್‌ಗೆ ಊರ್ವಶಿ 3 ಸಲಹೆ

ನಟಿ ಊರ್ವಶಿ ರೌತೇಲಾ ಚಳಿಗಾಲದಲ್ಲಿ ಯಾವ ಬಗೆಯ ಆರೈಕೆ ಕೈಗೊಳ್ಳಬಹುದು ಎಂಬುದರ ಬಗ್ಗೆ ಒಂದಿಷ್ಟು ಟಿಫ್ಸ್‌ ನೀಡಿದ್ದಾರೆ.

Vijaya Karnataka 10 Dec 2018, 11:04 am
ಚಳಿಗಾಲದಲ್ಲಿ ಆದಷ್ಟೂ ಆರೋಗ್ಯದ ಬಗ್ಗೆ ಗಮನ ನೀಡುವುದು ಮುಖ್ಯ ಎನ್ನುತ್ತಾರೆ ಬಾಲಿವುಡ್‌ ನಟಿ ಊರ್ವಶಿ ರೌತೇಲಾ. ಅವರ ಪ್ರಕಾರ, ಚಳಿಗಾಲದಲ್ಲಿ ಆರೋಗ್ಯ ಚೆನ್ನಾಗಿದ್ದಲ್ಲಿ, ತ್ವಚೆಯು ಕೂಡ ಸುಂದರವಾಗಿ ಕಾಣುತ್ತದೆ ಎನ್ನುತ್ತಾರೆ ಅವರು.
Vijaya Karnataka Web 222075931b4295eb43


ಸಾಬೂನಿನ ಬಳಕೆ ಕಡಿಮೆ ಮಾಡಿ

ಪದೇ ಪದೇ ಸಾಬೂನಿನ ಬದಲು ಆದಷ್ಟೂ ಬೆಸನ್‌ ಪೌಡರ್‌ ಅಂದರೆ ಕಡಲೆ ಹಿಟ್ಟನ್ನು ಬಳಸಬಹುದು. ಇದು ಚರ್ಮದ ಕಲೆಗಳ ನಿವಾರಣೆಯನ್ನು ಮಾಡುತ್ತದೆ. ಅಂದಹಾಗೆ, ಹೊಂದುವಂತಹ ಚರ್ಮಕ್ಕೆ ಮಾತ್ರ ಬಳಸಬೇಕು ಎನ್ನುತ್ತಾರೆ. ಚಳಿಗಾಲ ಮುಗಿಯುವವರೆಗೂ ಚರ್ಮದ ಸಮಸ್ಯೆ ಇದ್ದೇ ಇರುತ್ತದೆ. ಹಾಗಾಗಿ ಮನೆಯಲ್ಲೆ ದೊರೆಯುವ ಹರ್ಬಲ್‌ ಪದಾರ್ಥಗಳಿಂದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಾರೆ.

ಬಾದಾಮಿ ಎಣ್ಣೆಯ ಮಸಾಜ್‌

'ಕೂದಲಿಗೆ ಬಾದಾಮಿ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡುತ್ತೇನೆ. ಇದು ಕೂದಲಿಗೆ ಕಾಂತಿ ನೀಡುತ್ತಲ್ಲದೆ ಪಳ ಪಳ ಹೊಳೆಯುವಂತೆ ಮಾಡುತ್ತದೆ. ಚಳಿಗಾಲಕ್ಕೆ ಇದು ಬೆಸ್ಟ್‌ ಹೇರ್‌ಕೇರ್‌' ಎನ್ನುತ್ತಾರೆ ರೌತೇಲಾ. ಹಾಗೆಯೇ ಬಾದಾಮಿ ಎಣ್ಣೆಯನ್ನು ಆಗಾಗ್ಗೆ ಚರ್ಮಕ್ಕೂ ಲೇಪಿಸಿ ಕೊಂಚ ಮಸಾಜ್‌ ಮಾಡುವುದರಿಂದ ಚರ್ಮ ಮೃದುವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಅವರವರ ತ್ವಚೆಗೆ ಹೊಂದುವಂತೆ ಬಳಸುವುದು ಉತ್ತಮ ಎನ್ನುತ್ತಾರೆ.

ಬಿಸಿಲಿಗೆ ಮೈ ಒಡ್ಡದಿರುವುದು ಉತ್ತಮ


ಚಳಿಗಾಲದಲ್ಲಿ ತುಂಬಾ ಚಳಿಯಿದೆಯೆಂದು, ಬಿಸಿಲಿಗೆ ಮೈಯೊಡ್ಡಿದರೆ, ನಿಮ್ಮ ಚರ್ಮಕ್ಕೆ ಹಾನಿಯಾಗುವುದು ಖಂಡಿತಾ. ಬೆಳಗಿನ ಎಳೆಬಿಸಿಲು ದೇಹಕ್ಕೆ ಹಾನಿಯುಂಟು ಮಾಡದಿದ್ದರೂ, ನಂತರದ ಉರಿಬಿಸಿಲಿನಿಂದ ಚರ್ಮ ಕಪ್ಪಾಗುತ್ತದೆ. ಆದುದರಿಂದ, ಮನೆಯಿಂದ ಹೊರಹೋಗುವ ಮೂವತ್ತು ನಿಮಿಷಗಳ ಮೊದಲು ದೇಹಕ್ಕೆ ಸನ್‌ ಬರ್ನ್‌ ಕ್ರೀಂ ಹಚ್ಚಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ