ಆ್ಯಪ್ನಗರ

ಜೀವನದಲ್ಲಿ ಸೋತೆ ಎನ್ನುವವರು ಕೇಳಲೇಬೇಕಾದ ಮನೀಷಾರ ಮಾತುಗಳು

ಕ್ಯಾನ್ಸರ್‌ ಬಂದಾಗ ಸಾವು ಕದತಟ್ಟಿದರೂ ಸಾವನ್ನೇ ಗೆದ್ದು ಬಂದ ಈಕೆ ಬದುಕಿನ ಅರ್ಥವನ್ನು ವಿವರಿಸಿದ ರೀತಿ ಇದೆಯಲ್ಲಾ ಅದ್ಭುತವಾಗಿದೆ.

Vijaya Karnataka Web 6 Jun 2017, 12:18 pm
ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನೇಪಾಳ ಸುಂದರಿ ಮನೀಷಾ ಕೊಯಿರಾಲಾ ಅವರ ಟೆಡ್‌ ಟಾಕ್‌ ಬದುಕಿನಲ್ಲಿ ಎಲ್ಲವನ್ನು ಕಳೆದುಕೊಂಡೆ ಎನ್ನುವವರಿಗೆ, ಹೊಸ ಆಶಾ ಕಿರಣವನ್ನು ಮೂಡಿಸುವಂತಿದೆ.
Vijaya Karnataka Web how to find meaning when reality hits you manisha koirala
ಜೀವನದಲ್ಲಿ ಸೋತೆ ಎನ್ನುವವರು ಕೇಳಲೇಬೇಕಾದ ಮನೀಷಾರ ಮಾತುಗಳು


ಕ್ಯಾನ್ಸರ್‌ ಬಂದಾಗ ಸಾವು ಕದತಟ್ಟಿದರೂ ಸಾವನ್ನೇ ಗೆದ್ದು ಬಂದ ಈಕೆ ಬದುಕಿನ ಅರ್ಥವನ್ನು ವಿವರಿಸಿದ ರೀತಿ ಇದೆಯಲ್ಲಾ ಅದ್ಭುತವಾಗಿದೆ. ಜೀವನ ಚೆನ್ನಾಗಿ ಹೋಗುತ್ತಿದೆ ಎನ್ನುವಾಗ ನಮ್ಮೆಲ್ಲರ ಬದುಕಿನಲ್ಲಿ ಕೆಲವೊಂದು ಅನಿರೀಕ್ಷಿತ ತಿರುವುಗಳು ಉಂಟಾಗುತ್ತದೆ. ಕತೆಗಿಂತ ಜೀವನ ಕಲಿಸುವ ಪಾಠ ಇದೆಯಲ್ಲಾ ಅದು ತುಂಬಾ ಅರ್ಥಪೂರ್ಣವಾಗುತ್ತದೆ.

ಮನೀಷಾರ ಈ ಮಾತುಗಳನ್ನು ಕೇಳಿ, ಇವುಗಳು ಲೈಫ್‌ ಟಾನಿಕ್‌ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ:



ಅನುವಾದ: ಜೀವನದಲ್ಲಿ ನಾವೇನೋ ಮಾಡಬೇಕೆಂದು ಬ್ಯುಸಿಯಾಗಿರುವಾಗ ಮತ್ತೇನೋ ನಡೆಯುತ್ತದೆ ಎಂಬ ಮಾತಿದೆ. ಡಿಯರ್ ಫ್ರೆಂಡ್ಸ್‌.. ಈ ಅನೀರಿಕ್ಷಿತ ಘಟನೆಗಳೇ ಬದುಕನ್ನು ಚೂರುಮಾಡುತ್ತದೆ, ಇಲ್ಲಾ ಮತ್ತಷ್ಟು ಸುಂದರವಾಗಿಸುವುದು.

20-25 ವರ್ಷಗಳ ಹಿಂದೆ ನಾನು ಬದುಕಿದ ಬದುಕಿದೆಯಲ್ಲಾ, ಆ ಬದುಕು ಎಷ್ಟೋ ಜನರು ಕನಸ್ಸು ಕಾಣುವಂಥಾ ಬದುಕಾಗಿತ್ತು. ನೇಪಾಳದಿಂದ ನಾನು ಇಲ್ಲಿಗೆ ಬಂದೆ, ಒಬ್ಬ ಉತ್ತಮ ಕಲಾವಿದೆಯಾಗಬೇಕೆಂದು ಬಯಸಿದ್ದೆ, ಅದೆಲ್ಲವೂ ನನಗೆ ದೊರೆಯಿತು.

ನಿಜ ಹೇಳಬೇಕೆಂದರೆ ನಾನು ಬಯಸಿದ್ದೆಗಿಂತಲೂ ಹೆಚ್ಚೇ ದೊರೆಯಿತು. 80ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದೆ, ಎಲ್ಲವೂ ಒಂದಕ್ಕಿಂತ ಒಂದು ಸೂಪರ್‌ ಹಿಟ್‌ ಚಿತ್ರಗಳು, ಪ್ರಸಿದ್ಧಿ, ಹಣ, ಗ್ಲಾಮರ್‌ ಲೋಕ ಎಲ್ಲವೂ ನನ್ನನ್ನು ಹುಡುಕಿಕೊಂಡು ಬಂತು.


ಹೀಗೆ ನನ್ನ ಬದುಕು ಹೋಗುತ್ತಿದ್ದಾಗ, ಬದುಕು ಮತ್ತೇನೋ ಪ್ಲಾನ್‌ ಮಾಡಿತ್ತು. ಮೊದ-ಮೊದಲಿಗೆ ನಾನು ನಟಿಸಿದ ಚಿತ್ರಗಳು ಪ್ಲಾಪ್ ಆದೆವು...ನಾನು ಚಿತ್ರಗಳನ್ನು ಕೇರ್‌ಲೆಸ್ ಆಗಿ ಆಯ್ಕೆ ಮಾಡುತ್ತಿದ್ದೆ ಪರಿಣಾಮ ಒಂದು --ಎರಡು ..ಮೂರು ಅಂತ ನನ್ನ ಚಿತ್ರಗಳು ಪ್ಲಾಪ್ ಆದೆವು. ನನ್ನ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದೆವು.

ಒಳ್ಳೆಯ ನಿರ್ದೇಶಕರಿದ್ದಾರೆ, ನಾನು ಮತ್ತೆ ಪುಟಿದೇಳಬಹುದೆಂಬ ಭರವಸೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ, ಕೆಟ್ಟ ಲೈಫ್‌ಸ್ಟೈಲ್ ರೂಢಿಸಿಕೊಂಡೆ, ಅದರಿಂದಾಗಿ ಕೆಟ್ಟದ್ದೇ ಹೆಚ್ಚು ಆಕರ್ಷಿಸುತ್ತಿತ್ತು. ಒಂದು ಕೆಟ್ಟ ಸಂಬಂಧದಿಂದ ಮತ್ತೊಂದು ಕೆಟ್ಟ ಸಂಬಂಧಕ್ಕೆ ಬೀಳಲಾರಂಭಿಸಿದೆ. ನನ್ನ ಜೀವನ ಗಜಿಬಿಜಿ ಆಗಿ ಹೋಗಿತ್ತು. ನನ್ನ ಮದುವೆ ಮುರಿದು ಬಿದ್ದಾಗ ಮಂಡಿಯಲ್ಲಿ ಮುಖ ಹುದುಗಿ ಅತ್ತೆ... ಏನು ಮಾಡಬೇಕೆಂದು ತೋಚದಾಗಿದೆ, ಅದೇ ಸಂದರ್ಭದಲ್ಲಿ ನನಗೆ ಕ್ಯಾನ್ಸರ್‌ ಇದೆ ಎಂದು ಗೊತ್ತಾಯಿತು. ಇಲ್ಲಿಗೆ ನನ್ನ ಜೀವನ ಮುಗಿಯಿತು ಎಂದೇ ಭಾವಿಸಿದೆ.

ನನಗೆ ಬಂದ ಕ್ಯಾನ್ಸರ್‌ ಇದೆಯೆಲ್ಲಾ ಅದು ಭಯಾನಕ ಸ್ವರೂಪದ್ದಾಗಿತ್ತು. ಕೀಮೋಥೆರಪಿ ಮಾಡಿಸಿದರೆ ಹೃದಯಕ್ಕೆ ತೊಂದರೆ/ಕಿವುಡುತನ /ಇಲ್ಲಾ ಕೈಗಳು ಸ್ವಾದೀನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರು, ಕೂದಲೆಲ್ಲಾ ಉದುರಿ, ಹುಬ್ಬೆಲ್ಲಾ ಉದುರಿ ಹೋಯ್ತು, ಗ್ಲಾಮರ್‌ ಲೋಕದಲ್ಲಿ ಮಿಂಚಿದ್ದ ನಾನು ... ತುಂಬಾ ಭಯಪಟ್ಟೆ.. ಇದೇ ನನ್ನ ಕೊನೆಯಕ್ಷಣಗಳು ಇರಬಹುದೆಂದು ಅಂದುಕೊಂಡೆ, ಆಗ ನನಗೆ ಅನಿಸಿದ್ದು ಇಷ್ಟು ದಿನ ನಾನು ಬದುಕಿದ ಬದುಕಿನ ಬಗ್ಗೆ ಹೆಮ್ಮೆ ಇದೆಯೇ.. ಊಹುಂ ಖಂಡಿತ ಇಲ್ಲಾ... ತುಂಬಾ ಕೇರ್‌ಲೆಸ್‌ ಆಗಿ ಜೀವನ ನಡೆಸಿದ್ದೆ, ನನ್ನ ವೃತ್ತಿ ಬದುಕಿನ ಕಡೆಗೂ ಗಮನ ಕೊಟ್ಟಿರಲಿಲ್ಲ, ನನ್ನ ಪ್ರೀತಿಸುವವರ ಪ್ರೀತಿಯನ್ನು ಕಡೆಗಣಿಸಿದ್ದೆ.

ಕ್ಯಾನ್ಸರ್‌ ಬಂದು ಮಲಗಿದ್ದಾಗ ಮೊದಲಿನಿಂದಲೂ ಕೊನೆಯವರಿಗೆ ನನ್ನ ಜತೆಯಲ್ಲಿ ಇದ್ದವರು ನನ್ನ ಮನೆಯವರು ಹಾಗೂ ಕೆಲವೇ ಕೆಲವು ಸ್ನೇಹಿತರು. ಈಗ ನನಗೆ ನಿಜವಾದ ಸ್ನೇಹಿತರು ಯಾರು ಎಂದು ಗೊತ್ತಾಗಿದೆ. ಒಂದು ಕಾಲದಲ್ಲಿ ತುಂಬಾ ಫ್ರೆಂಡ್ಸ್‌ ಇದ್ದರು, ಈಗ ನನಗೆ ಬೆರಳಿಕೆಯಷ್ಟು ಸ್ನೇಹಿತರು ಮಾತ್ರ ಇದ್ದಾರೆ. ಅವರೊಂದಿಗೆ ಮಾತ್ರ ನಾನು ನನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ.

ಮತ್ತೊಂದು ಕತೆ ಹೇಳಬೇಕು. ಆಸ್ಪತ್ರೆಯಲ್ಲಿದ್ದಾಗ ಭಾನುವಾರ ನವನೀತ್‌ ಮರೋರಾ ಎಂಬ ಡಾಕ್ಟರ್‌ ಅವರ ರಜಾದಿನವಾದ ಭಾನುವಾರದಂದು ಬಂದು ಆ ದಿನ ಪೂರ್ತಿ ನನ್ನೊಂದಿಗೆ ಕಳೆಯುತ್ತಿದ್ದರು. ನಾನು ಅವರ ಬಳಿ ಕೇಳಿದೆ 'ಇದನ್ನೆಲ್ಲಾ ನನಗಾಗಿ ಏಕೆ ಮಾಡುತ್ತಿದ್ದೀರಾ? ನಾನು ನಿಮ್ಮ ಫ್ರೆಂಡ್‌ ಆಗಿರಲಿಲ್ಲ, ಅಲ್ಲದೆ ನೀವು ನನ್ನ ಅಭಿಮಾನಿಯೂ ಅಲ್ಲ, ಮತ್ಯಾಕೆ?'

ಅದಕ್ಕೆ ಆಕೆ ಹೇಳಿದ್ದು ಏನು ಗೊತ್ತೇ 'ಮನೀಷಾ ಜೀ .. ಮುಂದೊಂದು ದಿನ ಇದನ್ನು ನೀವು ಬೇರೆಯವರಿಗೆ ಮಾಡಬಹುದು ಎಂಬ ನಿರೀಕ್ಷೆಯಿಂದ'. ಆ ಕ್ಷಣವೇ ನಿರ್ಧರಿಸಿದೆ ಮತ್ತೊಂದು ಬದುಕು ಸಿಕ್ಕಿದರೆ ಖಂಡಿತ ಬೇರೆಯವರ ಸೇವೆಗಾಗಿ ಮೀಸಲಿಡುತ್ತೇನೆ ಎಂದು ಪ್ರಾಮಿಸ್‌ ಮಾಡಿದೆ.

ನೇಪಾಳದಲ್ಲಿ ಭೂಕಂಪ ಆಗಿದ್ದಾಗ ಅಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸಿದೆ, ಕ್ಯಾನ್ಸರ್‌ ಕೇಂದ್ರಗಳಿಗೆ ಅಲ್ಲಿರುವವರೆಗೆ ಬದುಕಿನ ಕುರಿತು ಭರವಸೆ ನೀಡುತ್ತೇನೆ.. ಹೀಗೆ ನನ್ನಿಂದ ಆಗುವ ಸಹಾಯ ಮಾಡುತ್ತಿದ್ದೇನೆ.

ಬದುಕಿನಲ್ಲಿ ಸಮಸ್ಯೆ ಬಂದಾಗ ನಮ್ಮ ಮುಂದೆ ಆಯ್ಕೆಗಳಿರುತ್ತದೆ ಅವುಗಳೆಂದರೆ ಆ ಸಮಸ್ಯೆಗೆ ಶರಣಾಗಿ ಅದಕ್ಕೆ ಬಲಿಯಾಗುವುದು, ಇಲ್ಲಾ ಆ ಸಮಸ್ಯೆಯನ್ನೇ ನಮ್ಮ ಬೆಳವಣಿಗೆಗೆ ಪ್ಲಾಟ್‌ಫಾರಂ ಆಗಿ ಬಳಸಿಕೊಳ್ಳುವುದು ಎರಡೂ ನಮ್ಮ ಕೈಯಲ್ಲಿದೆ'.

ಎಂಥ ಅದ್ಭುತ ಮಾತುಗಳು ಅಲ್ವಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ