ಆ್ಯಪ್ನಗರ

ಕ್ರೀಮ್, ಪೌಡರ್ ಬಳಸದೇ ಸುಂದರವಾಗಿ ಕಾಣಬೇಕಾ? ಇಲ್ಲಿದೆ ಟಿಪ್ಸ್!

ಮಳೆಗಾಲದಲ್ಲಿ ತ್ವಚೆಯನ್ನು ಕಾಂತಿಯುತವಾಗಿ ಇಡಲು ಈ ಕ್ರಮಗಳನ್ನು ಪಾಲಿಸಬೇಕು.

Vijaya Karnataka Web 13 Aug 2021, 6:16 pm
ತ್ವಚೆಯು ಕಾಂತಿಯುತವಾಗಿರಬೇಕಾದರೆ, ಆಗ ದೇಹದ ಆರೋಗ್ಯವು ಉತ್ತಮವಾಗಿರಬೇಕು, ಜತೆಗೆ ಸೇವನೆ ಮಾಡುವಂತಹ ಆಹಾರವು ಕೂಡ ಆರೋಗ್ಯಕಾರಿ ಆಗಿರಬೇಕು. ಮಳೆಗಾಲದಲ್ಲಿ ತ್ವಚೆಯು ಒಣಗುವ ಸಮಸ್ಯೆಯು ಕಂಡುಬರುವುದು.
Vijaya Karnataka Web diet tips to get fabulous skin this monsoon season
ಕ್ರೀಮ್, ಪೌಡರ್ ಬಳಸದೇ ಸುಂದರವಾಗಿ ಕಾಣಬೇಕಾ? ಇಲ್ಲಿದೆ ಟಿಪ್ಸ್!


ಇದನ್ನು ನಿವಾರಣೆ ಮಾಡಲು ಹೆಚ್ಚಿನವರು ಮೊಶ್ಚಿರೈಸರ್ ಮೊರೆ ಹೋಗುವರು. ಆದರೆ ಇಲ್ಲಿ ಮೊಶ್ಚಿರೈಸರ್ ಬದಲಿಗೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ, ಅದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

ಅದೇ ರೀತಿಯಾಗಿ ತಿನ್ನುವಂತಹ ಆಹಾರದಲ್ಲಿ ಕೂಡ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ಆಗ ಖಂಡಿತವಾಗಿಯೂ ತ್ವಚೆಯು ಕಾಂತಿಯನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಮಳೆಗಾಲದಲ್ಲಿ ತ್ವಚೆಗೆ ಕಾಂತಿ ಬರಲು ಏನು ಮಾಡಬೇಕು ಎಂದು ನೀವು ತಿಳಿಯಿರಿ.

​ಹಣ್ಣುಗಳ ಸೇವಿಸಿ

  • ಮಳೆಗಾಲದಲ್ಲಿ ಕೂಡ ಹಲವಾರು ರೀತಿಯ ಹಣ್ಣುಗಳು ಲಭ್ಯವಿದ್ದು, ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ ಕೂಡ ಇದೆ. ದೇಹದಲ್ಲಿ ಫ್ರೀ ರ್ಯಾಡಿಕಲ್ ನಿಂದಾಗಿ ಆಗುವ ಹಾನಿಯನ್ನು ಆಂಟಿಆಕ್ಸಿಡೆಂಟ್ ಗಳು ತಡೆಯುವುದು.
  • ದೇಹದಲ್ಲಿ ಫ್ರೀ ರ್ಯಾಡಿಕಲ್ ಹೆಚ್ಚಾಗಿದ್ದರೆ, ಅದರಿಂದ ಚರ್ಮವು ನಿಸ್ತೇಜ ಮತ್ತು ನೆರಿಗೆಯಿಂದ ಕೂಡಿರುವುದು. ಮಳೆಗಾಲದಲ್ಲಿ ವಿಟಮಿನ್ ಸಿ ಇರುವ ಹಣ್ಣುಗಳಾಗಿರುವಂತಹ ಪಿಯರ್ಸ್, ಲೀಚಿ, ಜಾಮೂನ್, ಪೀಚ್ ಇತ್ಯಾದಿಗಳನ್ನು ಸೇವನೆ ಮಾಡಿ.

ಸುಂದರವಾಗಿ ಕಾಣಬೇಕಾ? ಹಾಗಾದ್ರೆ ಈ ಹಣ್ಣುಗಳನ್ನು ಸೇವಿಸಿ

​ಎಣ್ಣೆಯುಕ್ತ ಆಹಾರ ಕಡೆಗಣಿಸಿ

  • ರಸ್ತೆ ಬದಿಯಲ್ಲಿ ಸಿಗುವಂತಹ ಕರದಿ ಆಹಾರಗಳು ಯಾವಾಗಲೂ ನಾಲಗೆಗೆ ರುಚಿ ನೀಡುವುದು. ಆದರೆ ಮಳೆಗಾಲದಲ್ಲಿ ಇಂತಹ ಆಹಾರಗಳನ್ನು ಕಡೆಗಣಿಸಿದರೆ, ಆಗ ಚರ್ಮವು ಜೋತು ಬೀಳುವುದು ಹಾಗೂ ಕಾಂತಿ ಕಳೆದುಕೊಳ್ಳುವುದು ತಪ್ಪುವುದು. ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರವನ್ನು ಕಡಿಮೆ ಮಾಡಿ.
  • ರಸ್ತೆ ಬದಿಯ ಆಹಾರವು ಹೆಚ್ಚಿನ ಪ್ರಮಾಣದಲ್ಲಿ ಕಲುಷಿತವಾಗಿರಬಹುದು. ಹೀಗಾಗಿ ಎಣ್ಣೆಯುಕ್ತ ಹಾಗೂ ರಸ್ತೆಬದಿ ಆಹಾರದಿಂದ ದೂರವಿರಬೇಕು.

ಎಣ್ಣೆಯುಕ್ತ ಆಹಾರಗಳನ್ನು ತಿಂದ ಬಳಿಕ ತಪ್ಪದೇ ಈ ಕೆಲಸಗಳನ್ನು ಮಾಡಿ!

​ಹೈಡ್ರೇಟ್ ಆಗಿರಿ

ಚರ್ಮದ ಅಂಗಾಂಶಗಳಿಗೆ ಹೆಚ್ಚಿನ ಪ್ರಮಾಣದ ನೀರು ಬೇಕು. ಇವುಗಳು ನಿರ್ಜಲೀಕರಣಗೊಂಡರೆ ಆಗ ಚರ್ಮವು ಒಣಗುವುದು ಹಾಗೂ ನಿಸ್ತೇಜವಾಗುವುದು. ಹೀಗಾಗಿ ನೀವು ದಿನವಿಡಿ ನೀರು ಕುಡಿಯುತ್ತಾ ಇರಬೇಕು. ನಿಮಗೆ ನೀರು ಕುಡಿಯಲು ಬೇಸರವೆನಿಸಿದರೆ, ಆಗ ಜ್ಯೂಸ್, ಲಿಂಬೆ ಜ್ಯೂಸ್, ಗ್ರೀನ್ ಟೀ ಮತ್ತು ಸೂಪ್ ಸೇವನೆ ಮಾಡಬಹುದು.

​ಆರೋಗ್ಯಕಾರಿ ಬೀಜಗಳು

  • ಕೆಲವೊಂದು ಬೀಜಗಳಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳಿದ್ದು, ಇವುಗಳನ್ನು ಬಿಸಾಕದೆ, ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ, ಆಗ ಅದು ತುಂಬಾ ಲಾಭಕಾರಿ ಆಗಿರುವುದು.
  • ಸೂರ್ಯಕಾಂತಿ ಬೀಜ ಮತ್ತು ಕುಂಬಳಕಾಯಿ ಬೀಜದಲ್ಲಿ ವಿಟಮಿನ್ ಇ ಅಂಶವು ಉತ್ತಮ ಪ್ರಮಾಣದಲ್ಲಿದ್ದು, ಇದನ್ನು ಸೇವನೆ ಮಾಡಿದರೆ, ಆಗ ಚರ್ಮವು ಯೌವನಯುತ ಹಾಗೂ ಕಾಂತಿಯುತವಾಗಿ ಕಾಣಿಸುವುದು.

ಕುಂಬಳಕಾಯಿ ಬೀಜದ ಆರೋಗ್ಯ ಲಾಭಗಳು

​ಸಕ್ಕರೆ ಕಡೆಣಿಸಿ

  • ಮಳೆಗಾಲದಲ್ಲಿ ಸಕ್ಕರೆ ಸೇವನೆ, ಅಥವಾ ಸಕ್ಕರೆ ಅಂಶ ಇರುವ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿದರೆ, ಅದು ಆರೋಗ್ಯಕ್ಕೆ ತುಂಬಾ ಲಾಭಕಾರಿ.
  • ಸಕ್ಕರೆ ಸೇವನೆ ಮಾಡಿದ ಸಂದರ್ಭದಲ್ಲಿ ಅದು ಗ್ಲುಕೋಸ್ ವಿಪರೀತದಿಂದಾಗಿ ಗ್ಲೈಕೇಶನ್ ಎಂಬ ಪ್ರತಿಕ್ರಿಯೆಯನ್ನು ಪ್ರಚೋದಿಸುವುದು. ಇದರ ಪರಿಣಾಮವಾಗಿ ಚರ್ಮದಲ್ಲಿ ನೆರಿಗೆ ಹಾಗೂ ವೇಗವಾಗಿ ವಯಸ್ಸಾಗುವಂತೆ ಕಂಡುಬರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ