ಆ್ಯಪ್ನಗರ

ಟ್ಯಾಟೂ ಹಾಕಿಸಿಕೊಂಡ ಬಳಿಕ ಯಾವ ರೀತಿ ಕಾಳಜಿ ವಹಿಸಬೇಕು ಗೊತ್ತಾ?

ಟ್ಯಾಟೂ ಹಾಕಿಸಿಕೊಂಡಾಗ ತೀವ್ರವಾದ ನೋವು ಉಂಟಾಗುತ್ತದೆ. ಆ ನೋವು ಸ್ವಲ್ಪ ದಿನಗಳವರೆಗೆ ಹಾಗೆಯೇ ಇರುತ್ತದೆ. ಹಾಗಾಗಿ ಆ ಜಾಗದ ಕಾಳಜಿವಹಿಸಬೇಕಾದುದು ಬಹಳ ಮುಖ್ಯ.

Vijaya Karnataka Web 17 Apr 2021, 12:33 pm
ಶಾಶ್ವತವಾದ ಹಚ್ಚೆ/ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಫ್ಯಾಷನ್ ಆಗಿದೆ. ವಿವಿಧ ಬಗೆಯ ಟ್ಯಾಟೂ ಹಾಕಿಸಿಕೊಳ್ಳುವುದು ಇಂದಿನ ಯುವಕರಲ್ಲಿ ಒಂದು ರೀತಿಯ ಉತ್ಸಾಹ ಹಾಗೂ ಸಂತೋಷವನ್ನು ನೀಡುವುದು. ಶಾಶ್ವತವಾದ ಹಚ್ಚೆಯನ್ನು ಹಾಕಿಸಿಕೊಳ್ಳುವಾಗ ಸೂಜಿ ಮತ್ತು ಶಾಯಿಯನ್ನು ಬಳಸುತ್ತಾರೆ. ಚರ್ಮದ ಮೇಲೆ ಚುಚ್ಚುವುದರಿಂದ ಹಚ್ಚೆ ಹಾಕಿಸಿಕೊಂಡ ಜಾಗ ತೀವ್ರವಾದ ನೋವು ಹಾಗೂ ಗಾಯದಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ವಿಶೇಷ ಕಾಳಜಿಯನ್ನು ವಹಿಸಬೇಕು. ಇಲ್ಲವಾದರೆ ಅಲರ್ಜಿ ಅಥವಾ ಅಡ್ಡ ಪರಿಣಾಮ ಬೀರುವ ಮೂಲಕ ಒಂದಷ್ಟು ಕಿರಿಕಿರಿಯನ್ನುಂಟುಮಾಡುವುದು.
Vijaya Karnataka Web dont forget these things after getting tattoo
ಟ್ಯಾಟೂ ಹಾಕಿಸಿಕೊಂಡ ಬಳಿಕ ಯಾವ ರೀತಿ ಕಾಳಜಿ ವಹಿಸಬೇಕು ಗೊತ್ತಾ?


​ಮುಟ್ಟಬೇಡಿ

ಹಚ್ಚೆಯನ್ನು ಹಾಕಿಸಿಕೊಂಡ ಬಳಿಕ ಒಂದು ಬಗೆಯ ತುರಿಕೆ ಹಾಗೂ ನೋವನ್ನು ಅನುಭವಿಸ ಬಹುದು. ಆ ಕಾರಣದಿಂದಾಗಿ ಪದೇ ಪದೇ ಮುಟ್ಟುವುದು ಅಥವಾ ತುರಿಸಿಕೊಳ್ಳುವುದು ಮಾಡಬಾರದು. ಹಾಗೆ ಮಾಡಿದರೆ ಅದು ನಿಧಾನವಾಗಿ ಸೋಂಕಿಗೆ ಕಾರಣವಾಗುತ್ತದೆ. ಇಲ್ಲವೇ ತೆರೆದ ಗಾಯವಾಗಿ ಗುಣವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಾಗಾಗಿ ಹಚ್ಚೆಯನ್ನು ಹಾಕಿಸಿಕೊಂಡ ಸ್ವಲ್ಪ ದಿನ ಅದನ್ನು ಮುಟ್ಟುವುದು ಅಥವಾ ಕೆರಸುವಂತಹ ಕೆಲಸಕ್ಕೆ ಹೋಗಬಾರದು.

ಚರ್ಮದ ರಕ್ಷಣೆಗೆ ವಿಟಮಿನ್ ಇ ಸೇರಿಸಿ, ಹೊಳಪನ್ನು ಪಡೆಯಿರಿ

​ಬಟ್ಟೆಯಿಂದ ಮುಚ್ಚ ಬಾರದು

ಹಚ್ಚೆಯನ್ನು ಹಾಕಿಸಿಕೊಂಡು ಸ್ವಲ್ಪ ದಿನಗಳ ಕಾಲ ಗಾಳಿಗೆ ಆರಲು ಬಿಡಬೇಕು. ಅದನ್ನು ಬಟ್ಟೆಯಿಂದ ಮುಚ್ಚುವುದು ಅಥವಾ ಗಾಳಿ ಆಡದಂತಹ ಬಟ್ಟೆಯನ್ನು ಧರಿಸಬಾರದು. ಹಾಗೆ ಮಾಡಿದರೆ ಸಾಕಷ್ಟು ತೊಂದರೆ ಉಂಟಾಗುವುದು. ಹೊಟ್ಟೆ, ತೋಳು ಅಥವಾ ಇನ್ಯಾವುದೇ ಪ್ರದೇಶದಲ್ಲಿ ಹಚ್ಚೆಯನ್ನು ಹಾಕಿಸಿಕೊಂಡಿದ್ದರೆ ಅದರ ನೋವು ಮತ್ತು ಗಾಯ ಗುಣವಾಗುವ ತನಕ ಗಾಳಿ ಆಡಲು ಬಿಡಬೇಕು. ಆಗ ಬಹುಬೇಗ ಗಾಯ ಗುಣವಗುವುದು. ಸೋಂಕು ಮತ್ತು ಗಾಯಗಳಂತಹ ಸಮಸ್ಯೆ ಆಗದಂತೆ ಸುಲಭವಾಗಿ ತಡೆಯಬಹುದು.

​ಪ್ರತಿದಿನ ತೊಳೆಯಿರಿ

ಹಚ್ಚೆಯಿಂದ ಸೋಂಕು ಉಂಟಾಗದಿರಲು ಮತ್ತು ಬಹುಬೇಗ ಗಾಯ ಕಡಿಮೆ ಆಗಲು ಗಣನೀಯವಾದ ಆರೈಕೆ ಹಾಗೂ ಸ್ವಚ್ಛತೆಯ ಅಗತ್ಯ ಇರುತ್ತದೆ. ಹಾಗಾಗಿ ಹಚ್ಚೆಯನ್ನು ಪ್ರತಿದಿನ ತೊಳೆಯುವುದನ್ನು ಮರೆಯಬಾರದು. ರಾಸಾಯನಿಕ ವಸ್ತು ಮತ್ತು ಅಧಿಕ ಸುಗಂಧಗಳಿಂದ ತುಂಬಿರುವ ಉತ್ಪನ್ನಗಳನ್ನು ಬಳಸದಿರಿ. ಅವು ಹಚ್ಚೆಯ ಮೇಲೆ ಅಥವಾ ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಹಚ್ಚೆಯ ಭಾಗವನ್ನು ಸ್ವಚ್ಛಗೊಳಿಸಲು ಆದಷ್ಟು ಮೃದುವಾದ ತಣ್ಣೀರನ್ನು ಬಳಸಲು ಸಲಹೆ ನೀಡಲಾಗುವುದು.

ಡಿಯೋಡ್ರೆಂಟ್ ಬಳಸುವವರು ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

​ತೇವಾಂಶದಿಂದ ಇರಿಸಬೇಕು

ಹಚ್ಚೆ ಹಾಕಿಸಿಕೊಂಡ ಜಾಗವು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಮಾಯ್ಚುರೈಸರ್ ಬಳಸುವುದರ ಮೂಲಕ ಚರ್ಮ ಶುಷ್ಕವಾಗುವುದನ್ನು ತಡೆಯಬಹುದು. ಚರ್ಮದಲ್ಲಿ ಶುಷ್ಕತೆ ಉಂಟಾಗದಂತೆ ತಡೆಯಲು ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಸಬಹುದು. ಇದು ಚರ್ಮದ ಮೇಲೆ ಉಂಟಾದ ಗಾಯವನ್ನು ಗುಣಪಡಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಜೊತೆಗೆ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುವುದು. ಜೊತೆಗೆ ಗಾಯ ಮತ್ತು ಸೋಂಕುಗಳು ತಗುಲದಂತೆ ಮಾಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ