ಆ್ಯಪ್ನಗರ

ಮುಖದ ಮೇಲೆ ಕಂಡುಬರುವ ಡಾರ್ಕ್ ಸ್ಪಾಟ್ ನಿವಾರಣೆಗೆ ಸಿಂಪಲ್ ಟಿಪ್ಸ್

ಮುಖದ ಮೇಲೆ ಕಂಡುಬರುವ ಕಲೆಗಳನ್ನು ಮನೆ ಮದ್ದುಗಳ ಮೂಲಕ ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು.

Vijaya Karnataka Web 2 Sep 2021, 1:21 pm
ನೈಸರ್ಗಿಕ ವಿಧಾನದಲ್ಲಿ ನಮ್ಮ ಮುಖವನ್ನು ಹೊಳಪಿನಿಂದ ಕಾಯ್ದುಕೊಳ್ಳುವಂತೆ ಮಾಡಬೇಕು ಎಂದುಕೊಂಡರೆ, ಅದಕ್ಕೆ ಸುಲಭ ವಿಧಾನ ಮನೆಮದ್ದುಗಳು. ನಮ್ಮ ದಿನಬಳಕೆಯ ಹಲವಾರು ಆಹಾರ ಪದಾರ್ಥಗಳು ನಮ್ಮ ಮುಖವನ್ನು ಸ್ವಚ್ಛ ಆಗಿಸುವಲ್ಲಿ ಪ್ರಮುಖಪಾತ್ರ ಬೀರುತ್ತವೆ.
Vijaya Karnataka Web naturally you can remove the blemishes this way
ಮುಖದ ಮೇಲೆ ಕಂಡುಬರುವ ಡಾರ್ಕ್ ಸ್ಪಾಟ್ ನಿವಾರಣೆಗೆ ಸಿಂಪಲ್ ಟಿಪ್ಸ್


ಈ ಲೇಖನದಲ್ಲಿ ಅಂತಹ ಕೆಲವೊಂದು ಪದಾರ್ಥಗಳನ್ನು ಮುಖದ ಸೌಂದರ್ಯವನ್ನು ಹೆಚ್ಚು ಮಾಡುವ ರೀತಿ ಕೆಲಸ ಮಾಡುವ ಔಷಧೀಯ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಪರಿಚಯ ಮಾಡಿಕೊಡಲಾಗಿದೆ.

​ಟೊಮೇಟೊ ಹಣ್ಣಿನ ಜ್ಯೂಸ್ ಅಪ್ಲೈ ಮಾಡಿ

  • ಟೊಮೆಟೊ ಹಣ್ಣಿನಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ವಿಟಮಿನ್-ಸಿ ಅಂಶ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ತುಂಬಾ ಹೇರಳವಾಗಿ ಕಂಡುಬರುತ್ತದೆ.
  • ನಿಮ್ಮ ಚರ್ಮಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಇದು ಸುಲಭವಾಗಿ ಪರಿಹಾರ ಮಾಡುತ್ತದೆ. ಚರ್ಮದ ಮೇಲಿನ ಸಣ್ಣ ಸಣ್ಣ ರಂಧ್ರಗಳನ್ನು ತೆರೆಯುವಂತೆ ಮಾಡುತ್ತದೆ. ಚರ್ಮದ ಮೇಲೆ ಕಂಡುಬರುವ ಕಪ್ಪುಕಲೆಗಳನ್ನು ಮತ್ತು ದದ್ದುಗಳನ್ನು ಇದು ಹೋಗಲಾಡಿಸುತ್ತದೆ.

​ಟೊಮೆಟೊ ಹಣ್ಣಿನ ಪ್ಯಾಕ್ ಮಾಡುವ ವಿಧಾನ

  • ಹಸಿಯಾದ ಟೊಮೆಟೊ ತೆಗೆದುಕೊಂಡು ಅದರಲ್ಲಿನ ರಸ ಹಿಂಡಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಮುಖದ ಮೇಲೆ ಚೆನ್ನಾಗಿ ಮಸಾಜ್ ಮಾಡಿ.
  • ಬಿಸಿ ನೀರಿನಿಂದ ಮುಖ ತೊಳೆಯಿರಿ. ಕ್ರಮೇಣವಾಗಿ ಈ ರೀತಿ ಮಾಡುತ್ತಾ ಬರುವುದರಿಂದ ನಿಮ್ಮ ಚರ್ಮ ಆರೋಗ್ಯಕರವಾಗಿ ಕೂಡಿರುತ್ತದೆ.

ಮುಖದ ಮೇಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ-ಟೊಮೆಟೊ ಫೇಸ್ ಪ್ಯಾಕ್!

​ಮೊಟ್ಟೆಯ ಬಿಳಿ ಭಾಗ ಅನ್ವಯಿಸಿ

  • ಮೊಟ್ಟೆಯ ಬಿಳಿ ಭಾಗ ತಮ್ಮಲ್ಲಿ ನೈಸರ್ಗಿಕವಾದ ಅಂಶಗಳನ್ನು ಒಳಗೊಂಡಿದ್ದು, ಕಪ್ಪಾಗಿರುವ ಚರ್ಮವನ್ನು ಬಿಳಿಯಾಗಿ ಮಾಡುತ್ತದೆ. ಚರ್ಮದ ಮೇಲೆ ಯಾವುದೇ ಕಲೆಗಳು ಇಲ್ಲದಂತೆ ನೋಡಿಕೊಳ್ಳುತ್ತದೆ.
  • ಸುಂದರವಾದ ಮತ್ತು ಯಾವುದೇ ಧೂಳು ಮತ್ತು ಕೊಳೆ ಇಲ್ಲದಂತಹ ಚರ್ಮ ನಿಮ್ಮದಾಗುತ್ತದೆ. ವಾರದಲ್ಲಿ ಎರಡು ಬಾರಿ ಇದನ್ನು ಅನ್ವಯಿಸುವುದರಿಂದ ನಿಧಾನವಾಗಿ ನಿಮ್ಮ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.

ಮೊಟ್ಟೆಯ ಬಿಳಿ ಭಾಗ ಬಳಸಿದರೆ ಹೊಳೆಯುವ ತ್ವಚೆ ನಿಮ್ಮದಾಗೋದ್ರಲ್ಲಿ ಅನುಮಾನವೇ ಇಲ್ಲ!

​ಜೇನುತುಪ್ಪ

  • ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ತುಂಬಾ ಇದೆ. ಇವುಗಳಲ್ಲಿ ಉರಿಯೂತ ನಿವಾರಕ ಗುಣಲಕ್ಷಣಗಳು ಕೂಡ ಇವೆ.
  • ಚರ್ಮದ ಮೇಲೆ ಕಂಡುಬರುವ ಕಲೆಗಳನ್ನು ಇದು ಸುಲಭವಾಗಿ ನಿವಾರಣೆ ಮಾಡುತ್ತದೆ. ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಇದನ್ನು ಹಾಗೆ ಇರಲು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಜೇನುತುಪ್ಪ ಉಪಯೋಗಗಳನ್ನು ಎಷ್ಟು ಹೊಗಳಿದರೂ ಸಾಲದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ