ಆ್ಯಪ್ನಗರ

ಮಳೆಗಾಲದಲ್ಲಿ ಪಾದಗಳ ಆರೈಕೆ ಹೀಗಿರಲಿ

ಮಳೆಗಾಲದಲ್ಲಿ ಪಾದಗಳ ಆರೈಕೆ ಕಡೆ ಗಮನ ಕೊಡದಿದ್ದರೆ ತ್ವಚೆ ಸಮಸ್ಯೆ ಕಂಡು ಬರುವುದು. ಮಳೆಗಾಲದಲ್ಲಿ ಪೆಡಿಕ್ಯೂರ್‌ ಮಾಡುವುದರಿಂದ ಪಾದಗಳು ಆಕರ್ಷಕವಾಗಿ ಕಾಣುವುದು ಹಾಗೂ ತ್ವಚೆ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಸಹಕಾರಿ.

Vijaya Karnataka Web 10 Aug 2019, 2:16 pm
ಮಳೆಗಾಲದಲ್ಲಿ ಪಾದಗಳ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಮಳೆಯಲ್ಲಿ ಓಡಾಡುವುದರಿಂದ ಉಗುರುಗಳಲ್ಲಿ ಕೊಳೆ ತುಂಬಿಕೊಳ್ಳುವುದು. ಇದರಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ, ಕಾಲಿನ ತ್ವಚೆಯಲ್ಲೂ ಕೂಡ ಬದಲಾವಣೆ ಉಂಟಾಗುವುದು.
Vijaya Karnataka Web pedicure


ಮಳೆಗಾಲದಲ್ಲಿ ಪಾದದ ಆರೈಕೆಗೆ ಪಡಿಕ್ಯೂರ್ ಮಾಡುವುದು ಒಳ್ಳೆಯದು. ಪೆಡಿಕ್ಯೂರ್‌ ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ ನೋಡಿ:

ಸ್ಟೆಪ್ 1
ಒಂದು ಬಕೆಟ್‌ನಲ್ಲಿ ಉಗುರು ಬೆಚ್ಚಗಿನ ನೀರು ಹಾಕಿ ಅದಕ್ಕೆ ಸ್ವಲ್ಪ ಎಪ್ಸೋಮ್ ಸಾಲ್ಟ್ ಹಾಕಿ ಅದಕ್ಕೆ 2 ಹನಿ ತೆಂಗಿನೆಣ್ಣೆ ಹಾಕಿ ಅದರಲ್ಲಿ ಕಾಲನ್ನು ಹಾಕಿ 30 ನಿಮಿಷ ರಿಲ್ಯಾಕ್ಸ್ ಆಗಿ. ಇದರಿಂದ ಪಾದಗಳು ಸ್ವಚ್ಛವಾಗುವುದು ಮಾತ್ರವಲ್ಲ ನಿಮಗೂ ರಿಲ್ಯಾಕ್ಸ್ ಅನಿಸುವುದು.

ಸ್ಟೆಪ್ 2
ನಂತರ ಕಾಲುಗಳನ್ನು ಪ್ಯೂಮಿಕ್‌ ಸ್ಟೋನ್‌ನಿಂದ ತಿಕ್ಕಿ ತೊಳೆಯರಿ.ನಂತರ ಉಗುರುಗಳನ್ನ ಕತ್ತರಿಸಿ ಅದಕ್ಕೊಂದು ಚೆಂದದ ಶೇಪ್ ನೀಡಿ. ನಂತರ ಕಾಲುಗಳನ್ನು ತೊಳೆದು ಒರೆಸಿ ಮಾಯಿಶ್ಚರೈಸರ್‌ ಹಚ್ಚಿ.

ಇತರ ಟಿಪ್ಸ್

1. ಮಳೆಗಾಲದಲ್ಲಿ ಕಾಲಿನ ಉಗುರು ಬಿಡುವುದಕ್ಕಿಂತ ಕತ್ತರಿಸುವುದೇ ಒಳ್ಳೆಯದು. ಉಗುರನ್ನು ಹಳೆಯ ಟೂತ್‌ ಬ್ರೆಷ್‌ಗೆ ನಿಂಬೆರಸ ಹಾಕಿ ತಿಕ್ಕಿದರೆ ಉಗುರಿನ ಬಿಳುಪು ಹೆಚ್ಚುವುದು.

2. ನಿಮಗೆ ನೇಲ್‌ಪಾಲಿಷ್‌ ಹಚ್ಚುವುದು ಇಷ್ಟವಿರಬಹುದು, ಆದರೆ ಪ್ರತಿದಿನ ನೇಲ್‌ ಪಾಲಿಷ್‌ ಹಚ್ಚಲು ಹೋಗಬೇಡಿ. ಮಳೆಗಾಲದಲ್ಲಿ ಉಗುರಿಗೆ ನೇಲ್‌ ಪಾಲಿಷ್‌ ಹಚ್ಚಿದರೆ ಉಗುರಿನ ಒಳಗೆ ಕೊಳೆ ಕೂತರೆ ಗೊತ್ತಾಗುವುದಿಲ್ಲ.ಆದ್ದರಿಂದ ನೇಲ್‌ ಪಾಲಿಷ್‌ ಹಚ್ಚದಿರುವುದೇ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ