ಆ್ಯಪ್ನಗರ

ತ್ವಚೆಯ ರಕ್ಷಣೆಗೆ ನ್ಯಾಚುರಲ್‌ ಮಾಸ್ಕ್‌

ಬೇಸಿಗೆಯ ಬೇಗೆಗೆ ತ್ವಚೆ ಕೂಡ ಕಳೆಗುಂದುತ್ತದೆ. ತಾಜಾತನ ಕಳೆದುಕೊಂಡು ಕೆಲವೊಮ್ಮೆ ಕಪ್ಪುಚುಕ್ಕೆ, ಮೊಡವೆಯಂಥ ಸಮಸ್ಯೆ ಕೂಡ ಉಂಟಾಗುತ್ತದೆ.

Vijaya Karnataka Web 30 Apr 2017, 2:06 pm
ಬೇಸಿಗೆಯ ಬೇಗೆಗೆ ತ್ವಚೆ ಕೂಡ ಕಳೆಗುಂದುತ್ತದೆ. ತಾಜಾತನ ಕಳೆದುಕೊಂಡು ಕೆಲವೊಮ್ಮೆ ಕಪ್ಪುಚುಕ್ಕೆ, ಮೊಡವೆಯಂಥ ಸಮಸ್ಯೆ ಕೂಡ ಉಂಟಾಗುತ್ತದೆ. ಈ ಸಂದರ್ಭದಲ್ಲಿ ತ್ವಚೆಯ ರಕ್ಷಣೆ ಮಡಬೇಕಾದ ಅಗತ್ಯ ಇದೆ. ಇದಕ್ಕಾಗಿ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ಅದರಲ್ಲೂ ವಿಶೇಷವಾಗಿ ನೈಸರ್ಗಿಕ ವಸ್ತುಗಳನ್ನೊಳಗೊಂಡ ಮಾಸ್ಕ್‌ ಬಳಕೆ ಪ್ರಯೋಜನಕಾರಿ
Vijaya Karnataka Web skin care tips
ತ್ವಚೆಯ ರಕ್ಷಣೆಗೆ ನ್ಯಾಚುರಲ್‌ ಮಾಸ್ಕ್‌


ಅಲೋವೆರಾ ಮತ್ತು ಟೀ ಮರದ ಎಣ್ಣೆ: ನೈಸರ್ಗಿಕವಾಗಿ ಸಿಗುವ ಅಲೋವೆರಾ ರಸ, ಕೆಲವು ಹನಿ ಟೀ ಮರದ ಎಣ್ಣೆ. ಇವೆರಡನ್ನೂ ಸೇರಿಸಿ ಮುಖಕ್ಕೆ ಹಚ್ಚಿ. ಹಾಗೆ 10 ನಿಮಿಷ ಬಿಡಿ. ಅಲೋವೆರಾ ನೈಸರ್ಗಿಕವಾಗಿಯೇ ಸೂರ‍್ಯನ ಪ್ರಕರ ಕಿರಣಗಳಿಂದ ರಕ್ಷಿಸುತ್ತದೆ. ಟೀ ಮರದ ಎಣ್ಣೆ ಕೂಡ ಸುಸ್ತು ಸೇರಿದಂತೆ ಬಿಸಿಲಿನ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಬೇಸಿಗೆಯಲ್ಲಿ ದಿನ ಬಿಟ್ಟು ದಿನ ಇದನ್ನು ಟ್ರೈ ಮಾಡಿ.

ಕಡಲೆ ಹಿಟ್ಟು ಹಾಗೂ ಆಲೀವ್‌ ಎಣ್ಣೆ ಮಾಸ್ಕ್‌: ಕಡಲೆ ಹಿಟ್ಟಿಗೆ ಆಲೀವ್‌ ಎಣ್ಣೆ ಹಾಕಿ ಕಲಸಿ. ಐದು ನಿಮಿಷ ಹಾಗೆ ಬಿಡಿ. ಬೆಚ್ಚನೆಯ ನೀರಿನಿಂದ ಮುಖ ಒರೆಸಿ. ಕಡಲೆಹಿಟ್ಟು ಮುಖದ ತ್ವಚೆಯನ್ನು ಕೊಳೆಯನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಸತ್ತ ಕೋಶಗಳನ್ನು ತೆಗೆದು ಹಾಗಿ ಮಾಯಿಶ್ಚರೈಸ್‌ ಮಾಡುತ್ತದೆ. ವಾರದಲ್ಲಿ ಎರಡು ಬಾರಿ ಇದನ್ನು ಪ್ರಯೋಗಿಸಿ.

ಸೌತೆಕಾಯಿ, ಟೊಮೆಟೊ ಹಾಗೂ ಓಟ್ಸ್‌ ಮಾಸ್ಕ್‌: ಎಣ್ಣೆ ಚರ್ಮದವರಿಗೆ ಇದು ಉತ್ತಮ. ಬೆಳಗಿನ ಸಮಯದಲ್ಲಿ ಈ ಮಾಸ್ಕ್‌ ಬಳಸುವುದು ಒಳ್ಳೆಯದು. ಒಂದು ಚಮಯ ಸೌತೆಕಾಯಿ, ಟೊಮೇಟೊ ಹಾಗೂ ಓಟ್ಸ್‌ ಬಳಸಿ ಮೆತ್ತಗಾಗುವ ತನಕ ಕಲಕಿ. ಅನಂತರ ಮುಖಕ್ಕೆ ಹಚ್ಚಿ.

ಸೌತೆಕಾಯಿ ಮುಖದ ಮೇಲಿನ ಕಪ್ಪುಚುಕ್ಕೆಗಳನ್ನು ಕಮ್ಮಿ ಮಾಡುತ್ತದೆ. ತಂಪಿನ ಅನುಭವ ಕೂಡ ನೀಡುತ್ತದೆ. ಟೊಮೆಟೊ ಕೂಡ ತ್ವಚೆಯ ಮೇಲೆ ಕುಳಿ ಬೀಳದಂತೆ ತಪ್ಪಿಸುತ್ತದೆ. ಓಟ್ಸ್‌ ತ್ವಚೆಯನ್ನು ಸೌಮ್ಯಗೊಳಿಸುತ್ತದೆ. ಮಾಸ್ಕ್‌ ಬಳಸುವ ಮುನ್ನ ಮುಖವನ್ನು ಶುದ್ಧ ಮಾಡಿಕೊಳ್ಳಿ. ಮಾಸ್ಕ್‌ ಬಳಸಿದ ನಂತರ ತ್ವಚೆಯನ್ನು ರಕ್ಷಿಸುವಂಥ ಕ್ರೀಂ ಬಳಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ