ಆ್ಯಪ್ನಗರ

ಇದೇ ಕಾರಣಕ್ಕೆ ಪುರುಷರಲ್ಲಿ ಕೂದಲು ಉದುರುವುದು! ಪರಿಹಾರ ಇಲ್ಲಿದೆ ನೋಡಿ...

ಕೂದಲು ಸೌಂದರ್ಯದ ಪ್ರತೀಕ. ಇದು ಪುರುಷರಿಗೆ ಕೂಡ ಅನ್ವಯವಾಗುವುದು

Vijaya Karnataka Web 1 Dec 2021, 1:47 pm
ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆಯು ಇರುವಂತೆ ಪುರುಷರಲ್ಲಿ ಕೂಡ ಇಂತಹ ಸಮಸ್ಯೆಯು ಕಂಡುಬರುವುದು. ಇದನ್ನು ನಿವಾರಣೆ ಮಾಡಲು ಕೆಲವರು ಎಲ್ಲಾ ರೀತಿಯಿಂದ ಪ್ರಯತ್ನ ಮಾಡುವರು. ಆದರೆ ಕೊನೆಗೆ ಬೋಳು ತಲೆಯನ್ನು ಮುಚ್ಚಿಡಬೇಕಾದಂತಹ ಪರಿಸ್ಥಿತಿ ಬರುವುದು.
Vijaya Karnataka Web try these easy tips to stop hair fall and prevent balding naturally
ಇದೇ ಕಾರಣಕ್ಕೆ ಪುರುಷರಲ್ಲಿ ಕೂದಲು ಉದುರುವುದು! ಪರಿಹಾರ ಇಲ್ಲಿದೆ ನೋಡಿ...


ಪುರುಷರಲ್ಲಿ ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳು ಏನು ಎಂದು ಮೊದಲು ತಿಳಿಯಬೇಕು. ಕೂದಲು ಉದುರುವ ಸಮಸ್ಯೆಯನ್ನು ಕಂಡು ಹಿಡಿಯಲು ಮುಖ್ಯವಾಗಿ ನಮ್ಮ ಆಹಾರ ಕ್ರಮ, ಜೀವನ ಶೈಲಿ, ಒತ್ತಡದ ಮಟ್ಟ ಇತ್ಯಾದಿಗಳ ಕಡೆಗೆ ಗಮನಹರಿಸಬೇಕು. ಪುರುಷರಲ್ಲಿ ಕೂದಲು ಉದುರುವಿಕೆಗೆ ಮುಖ್ಯ ಕಾರಣವೇನೆಂದು ತಿಳಿಯಲು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

ಆಹಾರದ ಕಡೆಗೆ ಗಮನವಿರಲಿ

  • ಆರೋಗ್ಯಕಾರಿ ಆಹಾರ ಕ್ರಮದಿಂದ ದಪ್ಪ ಹಾಗೂ ಉದ್ದದ ಕೂದಲು ಬರುವುದು. ಮೀನು, ಮಾಂಸ ಮತ್ತು ಸೋಯಾದಲ್ಲಿ ಕಂಡುಬರುವಂತಹ ಲೀನ್ ಪ್ರೋಟೀನ್ ಅಂಶವು ಕೂದಲಿನ ಬೆಳವಣಿಗೆಗೆ ಸಹಕಾರಿ.
  • ವಿಟಮಿನ್ ಇ ಮತ್ತು ಆರೋಗ್ಯಕಾರಿ ಕೊಬ್ಬು ಇರುವಂತಹ ಕೆಲವೊಂದು ಬೀಜಗಳನ್ನು ಸೇವನೆ ಮಾಡಿದರೆ ಅದರಿಂದ ವಿಟಮಿನ್ ಇ ಮತ್ತು ಆರೋಗ್ಯಕಾರಿ ಕೊಬ್ಬಿನಾಮ್ಲವು ಸಿಗುವುದು. ದಾಲ್ಚಿನ್ನಿಯನ್ನು ಇದಕ್ಕೆ ಸೇರ್ಪಡೆ ಮಾಡಿದರೆ ಅದರಿಂದ ಕೂಡ ಕೂದಲಿಗೆ ಪೋಷಣೆ ಸಿಗುವುದು.

ಕೋಳಿ ಮೊಟ್ಟೆಗಳು

  • ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಮೊಟ್ಟೆಗಳ ಉಪಯೋಗ ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವ ಪದ್ಧತಿ. ಮೊಟ್ಟೆಯ ಹಳದಿ ಲೋಳೆಯಲ್ಲಿ ಪೌಷ್ಠಿಕಾಂಶ ಮತ್ತು ಬಯೋಟಿನ್, ಫೋಲೇಟ್, ವಿಟಮಿನ್ ' ಎ ' ಮತ್ತು ವಿಟಮಿನ್ ' ಡಿ ' ಯಂತಹ ಪ್ರೋಟೀನ್ ಗಳಿವೆ.
  • ಇವುಗಳು ಪುರುಷರ ಬೋಳು ತಲೆಗೆ ಉತ್ತಮ ಪರಿಹಾರ ಒದಗಿಸಬಲ್ಲವು. ಕೋಳಿ ಮೊಟ್ಟೆಯಲ್ಲಿ ಕೂದಲಿಗೆ ಅಗತ್ಯವಾದ ಈ ಮೇಲಿನ ಪ್ರೊಟೀನ್ ಅಂಶಗಳು ಹೇರಳವಾಗಿದ್ದು ದಟ್ಟವಾದ ಮತ್ತು ಉದ್ದವಾದ ಕೂದಲು ನಿಮ್ಮದಾಗುವಂತೆ ಮಾಡುತ್ತವೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಜೀವ ಸತ್ವಗಳು ಸಮೃದ್ಧವಾಗಿದ್ದು ಅದು ಕೂದಲನ್ನು ಹಾನಿಗೊಳಗಾಗದಂತೆ ಮಾಡುತ್ತದೆ.

ವಿಟಮಿನ್ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಸೇವಿಸಿ

  • ಪುರುಷರಲ್ಲಿ ಕೂದಲು ಉದುರುವಿಕೆಗೆ ವಿಟಮಿನ್ ಕೊರತೆಯು ಪ್ರಮುಖ ಕಾರಣವಾಗಿದ್ದು, ಇದನ್ನು ನಿವಾರಣೆ ಮಾಡಲು ವಿಟಮಿನ್ ಗಳು ಅಗತ್ಯ ಪ್ರಮಾಣದಲ್ಲಿ ಇರುವಂತಹ ಆಹಾರ ಸೇವನೆ ಮಾಡಬೇಕು.
  • ವಿಟಮಿನ್ ಎ ಅಂಶವು ಕೂದಲಿನ ಕಿರುಚೀಲಗಳಲ್ಲಿನ ರೆಟಿನೊಯಿಕ್ ಆಮ್ಲದ ಸಂಶ್ಲೇಷಣೆಯನ್ನು ನಿಯಂತ್ರಿಸಲು ನೆರವಾಗುವುದು. ವಿಟಮಿನ್ ಬಿ ಅಂಶವು ಒತ್ತಡ ಕಡಿಮೆ ಮಾಡುವುದು. ಅದೇ ವಿಟಮಿನ್ ಸಿ, ಡಿ ಮತ್ತು ಇ ಯು ಆರೋಗ್ಯಕಾರಿ ಕೂದಲಿಗೆ ಬೇಕಾಗಿರುವಂತಹ ಪೋಷಕಾಂಶಗಳನ್ನು ಒದಗಿಸುವುದು.

ತಜ್ಞರ ನೆರವು ಪಡೆಯಿರಿ

  • ಕೂದಲು ಉದುರುವುದನ್ನು ಕಡಿಮೆ ಮಾಡುವುದು ಹೇಗೆ ಎಂದು ನೀವು ತಜ್ಞ ವೈದ್ಯರ ಬಳಿಯಲ್ಲಿ ಕೇಳಿ. ಪರಿಸ್ಥಿತಿಯು ಹದಗೆಡುವ ಮೊದಲು ನೀವು ಚಿಕಿತ್ಸೆ ಪಡೆಯುವುದು ಒಳ್ಳೆಯದು.
  • ಕೂದಲು ಉದುರುವಿಕೆಯನ್ನು ತಡೆಯಲು ಏನು ಮಾಡಬೇಕು ಎಂದು ವೈದ್ಯರು ನಿಮಗೆ ಸೂಚಿಸುವರು. ಕೆಲವೊಂದು ಔಷಧಿಗಳು ಹಾಗೂ ಉತ್ಪನ್ನಗಳ ಬಗ್ಗೆ ತಿಳಿಸುವರು. ಇದರಿಂದ ಕೂದಲು ಉದುರುವಿಕೆ ಸಮಸ್ಯೆಯು ನಿವಾರಣೆ ಆಗುವುದು.

ಕೂದಲು ಬಿಗಿಯಾಗಿ ಕಟ್ಟಬೇಡಿ

  • ಕೆಲವೊಮ್ಮೆ ಪುರುಷರು ಕೂಡ ಕೂದಲಿನಲ್ಲಿ ಬನ್ ಹಾಕುವರು. ಆದರೆ ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಹೆಚ್ಚು ಬಿಗಿಯಾಗಿ ಕಟ್ಟಿದಷ್ಟು ಕೂದಲಿಗೆ ಹಾನಿ ಆಗುವುದು ಅಧಿಕ.
  • ಹದಿಹರೆಯದಲ್ಲಿ ಇದು ನಿಮಗೆ ಅಗತ್ಯವೆಂದು ಕಾಣಿಸದೆ ಇರಬಹುದು. ಆದರೆ ವಯಸ್ಸಾಗುತ್ತಾ ಹೋದಂತೆ ಇದು ನಿಮಗೆ ಹೊಂದಾಣಿಕೆ ಆಗುತ್ತದೆಯಾ ಎಂದು ನೋಡಬೇಕು.

ಕೂದಲು ಉದುರುವಿಕೆಗೆ ಔಷಧಿ ಪಡೆಯಿರಿ

  • ಕೂದಲು ಬೋಳು ಆಗುವುದನ್ನು ತಪ್ಪಿಸಲು ಕೆಲವೊಂದು ಔಷಧಿಗಳು ಮತ್ತು ಚಿಕಿತ್ಸೆಗಳು ಅಗತ್ಯ. ಪುರುಷರಲ್ಲಿ ಕೂದಲು ಉದುರುವಿಕೆ ಮತ್ತು ಉದುರುವುದನ್ನು ನಿಧಾನವಾಗಿಸಲು ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
  • ಕೂದಲು ಉದುರುವಿಕೆಯನ್ನು ತಡೆದು, ಮರಳಿ ಕೂದಲು ಬೆಳೆಯುವಂತೆ ಮಾಡುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇದೆ. ಇವುಗಳನ್ನು ಫಲಿತಾಂಶ ಸಿಗುವ ತನಕ ಬಳಕೆ ಮಾಡಿದರೆ ತುಂಬಾ ಒಳ್ಳೆಯದು.

ಒತ್ತಡ ನಿಯಂತ್ರಿಸಿ

ಪುರುಷರು ಕೆಲವೊಂದು ಸಲ ಅತಿಯಾದ ಒತ್ತಡದಲ್ಲಿರುವರು. ಇದರಿಂದ ಕೂದಲು ಉದುರುವುದು. ಇದನ್ನು ತಪ್ಪಿಸಲು ಜೀವನಶೈಲಿ ಬದಲಾವಣೆ, ಸಂತೋಷವಾಗಿರುವುದು ಮತ್ತು ಧಾನ್ಯ ಮಾಡುವುದನ್ನು ಕಲಿಯಿರಿ. ಯೋಗ ಮತ್ತು ಧ್ಯಾನವು ಒತ್ತಡವನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿ ಕೆಲಸ ಮಾಡುವುದು.

ಧೂಮಪಾನ, ಮದ್ಯಪಾನ ಕಡಿಮೆ ಮಾಡಿ

  • ಧೂಮಪಾನ ಮತ್ತು ಮದ್ಯಪಾನವು ದೇಹದ ಆರೋಗ್ಯಕ್ಕೆ ಹಾನಿ ಉಂಟು ಮಾಡುವುದು ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಇದೇ ಕೆಟ್ಟ ಅಭ್ಯಾಸಗಳು ಕೂದಲು ಉದುರುವಿಕೆಗೂ ಕಾರಣವಾಗುವುದು. ಧೂಮಪಾನ ಮತ್ತು ಮದ್ಯಪಾನವು ಕೂದಲು ಉದುರುವಿಕೆಗೆ ಪ್ರಮುಖ ಕಾರಣ ಎಂದು ಹಲವಾರು ಅಧ್ಯಯನಗಳು ಹೇಳಿವೆ.
  • ಕೂದಲಿನ ಕಿರುಚೀಲಗಳಿಗೆ ಬರುವಂತಹ ರಕ್ತನಾಳಗಳಿಗೆ ಧೂಮಪಾನವು ಹಾನಿ ಉಂಟು ಮಾಡುವುದು. ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡಿದರೆ ಅದರಿಂದ ನಿರ್ಜಲೀಕರಣ ಉಂಟಾಗುವುದು ಮತ್ತು ಪೋಷಕಾಂಶ ಮೌಲ್ಯಗಳು ಕಡಿಮೆ ಆಗುವುದು.

ನಿಯಮಿತ ವ್ಯಾಯಾಮ

ವ್ಯಾಯಾಮವು ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ಇದು ಕೂದಲಿಗೆ ಕೂಡ ಒಳ್ಳೆಯದು ಎಂದು ನಿಮಗೆ ತಿಳಿದಿದೆಯಾ? ತಲೆಬುರುಡೆಗೆ ಸರಿಯಾದ ರೀತಿ ರಕ್ತ ಸಂಚಾರವಾಗಲು ಮತ್ತು ಕೂದಲಿನ ಸಂಪೂರ್ಣ ಆರೋಗ್ಯ ಕಾಪಾಡಲು ವ್ಯಾಯಾಮವು ಅತೀ ಅಗತ್ಯ.

ಸಪ್ಲಿಮೆಂಟ್ ಬಗ್ಗೆ ಮಾತನಾಡಿ

ಕೂದಲು ಉದುರುವಿಕೆ ತಡೆಯಲು ಹಾಗೂ ಮತ್ತೆ ಬೆಳೆಯಲು ಹಲವಾರು ರೀತಿಯ ಸಪ್ಲಿಮೆಂಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬಗ್ಗೆ ನೀವು ವೈದ್ಯರೊಂದಿಗೆ ಮಾತನಾಡಿ ಮತ್ತು ಅವರು ಒಳ್ಳೆಯ ಪರಿಣಾಮಕಾರಿ ಮತ್ತು ಗುಣಮಟ್ಟದ ಸಪ್ಲಿಮೆಂಟ್ ಗಳನ್ನು ನಿಮಗೆ ನೀಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ