ಆ್ಯಪ್ನಗರ

ಹುರಿದ ಕಡ್ಲೇ ಕಾಳನ್ನು ಸೇವಿಸಿದರೆ ತೂಕ ಇಳಿಯುವುದೇ?

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ದೇಹದಲ್ಲಿ ಅನಗತ್ಯವಾದ ಕೊಬ್ಬನ್ನು ಕರಗಿಸುವುದು.

Vijaya Karnataka Web 7 Jun 2021, 4:00 pm
ಯಾವುದೇ ಆಯಾಸ ಅಥವಾ ಆಹಾರ ಪತ್ಯಗಳನ್ನು ಅನುಸರಿಸದೆಯೇ ತೂಕ ಇಳಿಸುವ ಆಲೋಚನೆಯನ್ನು ಹೊಂದಿದ್ದರೆ ನಿಮಗೆ ಹುರಿದ ಕಡ್ಲೇ ಕಾಳು ಉತ್ತಮ ಆಯ್ಕೆ ಆಗುವುದು. ಕಡ್ಲೇ ಕಾಳು ಸಮೃದ್ಧವಾದ ನಾರಿನಂಶ, ಪ್ರೋಟೀನ್ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ದೇಹದ ತೂಕವು ಗಮನಾರ್ಹ ಇಳಿಕೆಯನ್ನು ಕಾಣುವುದು.
Vijaya Karnataka Web benefits of roasted chana in weight loss
ಹುರಿದ ಕಡ್ಲೇ ಕಾಳನ್ನು ಸೇವಿಸಿದರೆ ತೂಕ ಇಳಿಯುವುದೇ?



​ಕಡಿಮೆ ಕ್ಯಾಲೂರಿ

ಕಡ್ಲೇ ಕಾಳು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಲಘು ಆಹಾರವಾಗಿರುತ್ತದೆ. ಅದನ್ನು ಸೇವಿಸಿದರೆ ಹೆಚ್ಚು ಕಾಲ ಹಸಿವನ್ನು ತಡೆಯಬಹುದು. ಆಗ ಅಧಿಕ ಆಹಾರಗಳ ಸೇವನೆಯನ್ನು ನಿಯಂತ್ರಣದಲ್ಲಿ ಇಡಬಹುದು. ಅನಗತ್ಯವಾದ ತೂಕವು ನಿಯಂತ್ರಣಕ್ಕೆ ಬರುವುದು.

ರಾತ್ರಿ 8 ಗಂಟೆಯ ನಂತರ ಊಟ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆಯೇ?

​ಸಮೃದ್ಧವಾದ ಪ್ರೋಟೀನ್

ತಜ್ಞರು ಅಭಿಪ್ರಾಯಿಸುವುದರ ಪ್ರಕಾರ ಹುರಿದ ಕಡ್ಲೇ ಕಾಳಿನಲ್ಲಿ ಹೇರಳವಾಗಿ ಪ್ರೋಟೀನ್ ಇರುತ್ತದೆ. ಅದು ದೇಹದ ತೂಕವನ್ನು ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುವುದು. ಇದರಲ್ಲಿ ಇರುವ ಪ್ರೋಟೀನ್ ದೀರ್ಘ ಸಮಯ ಹಸಿವಾಗದಂತೆ ತಡೆಯುವುದು. ಆ ಮೂಲಕ ದೇಹದ ತೂಕವು ನಿಯಂತ್ರಣಕ್ಕೆ ಬರುವುದು.

​ಅಧಿಕ ನಾರಿನಂಶ

ಸಮೃದ್ಧವಾದ ನಾರಿನಂಶವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದು. ದೇಹದಲ್ಲಿ ಇರುವ ವಿಷಕಾರಿ ಅಂಶ ಹಾಗೂ ಕೊಬ್ಬಿನ ಪ್ರಮಾಣವು ಗಮನಾರ್ಹವಾಗಿ ಬದಲಾವಣೆಯನ್ನು ಕಾಣುವುದು. ಜೊತೆಗೆ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ.

ಹೊಟ್ಟೆಯ ಕೊಬ್ಬನ್ನು ಕರಗಿಸಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ತಪ್ಪುಗಳನ್ನು ಮಾಡಲೇ ಬೇಡಿ

​ಇತರ ಪ್ರಯೋಜನಗಳು

ಈ ಎಲ್ಲಾ ಆರೋಗ್ಯಕರ ಅಂಶವು ವ್ಯಕ್ತಿಯ ಆರೋಗ್ಯ ಸ್ಥಿತಿಯು ಉತ್ತಮವಾಡಲು ಸಹಕರಿಸುತ್ತದೆ. ಹುರಿದ ಕಡ್ಲೇ ಕಾಳು ಮಧುಮೇಹದಿಂದ ಬಳಲುತ್ತಿದ್ದವರಿಗೆ ಒಳ್ಳೆಯದು. ಇದು ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದು. ಜೊತೆಗೆ ಮೂಳೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುವುದು.

ರಕ್ತದ ಸ್ಥಿರತೆಯನ್ನು ಉತ್ತಮ ಸ್ಥಿತಿಯಲ್ಲಿ ಇಡುವಂತೆ ಮಾಡುವುದು. ಜೊತೆಗೆ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ನೀವು ದಿನಕ್ಕೆ 100 ಗ್ರಾಂನಷ್ಟು ಕಡಲೆಯನ್ನು ಸೇವಿಸಬಹುದು. ಆದರೆ ಇದನ್ನು ಸೇವಿಸಿದ ಅರ್ಧ ಗಂಟೆಗಳ ವರೆಗೆ ನೀರನ್ನು ಕುಡಿಯುವಂತಿಲ್ಲ.

To Read in English Click: This is how roasted chana helps in weight loss

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ