ಆ್ಯಪ್ನಗರ

ಮಳೆಗಾಲದಲ್ಲಿ ಆರೋಗ್ಯವಾಗಿ ಹಾಗೂ ಫಿಟ್‌ ಆಗಿರಲು ಬಾದಾಮಿ ಸೂಪ್ ಸವಿಯಿರಿ!

ಬಾದಾಮಿಯಲ್ಲಿ ಆರೋಗ್ಯ ಲಾಭಗಳ ಬಗ್ಗೆ ನಮಗೆ ತಿಳಿದೇ ಇದೆ. ಇದರ ಸೂಪ್ ಮಾಡಿ ಕುಡಿದರೆ ಆಗ ಮಳೆಗಾಲದಲ್ಲಿ ದೇಹವನ್ನು ಫಿಟ್ ಆಗಿಡಬಹುದು.

Lipi 22 Aug 2020, 1:23 pm
ಮಳೆಗಾಲದಲ್ಲಿ ಆರೋಗ್ಯಕಾರಿ ಆಹಾರಕ್ಕೆ ಜನರು ಒತ್ತು ಕೊಡುವರು. ಮಳೆಗಾಲದಲ್ಲಿ ನಮ್ಮ ದೇಹವನ್ನು ವಿವಿಧ ರೀತಿಯ ಬ್ಯಾಕ್ಟೀರಿಯಾ, ಕೀಟಾಣು, ರೋಗಕಾರಕಗಳು ಕಾಡುವುದು. ಇಂತಹ ಸಂದರ್ಭದಲ್ಲಿ ದೇಹದ ಆರೋಗ್ಯವು ಬಲವಾಗಿದ್ದರೆ, ಆಗ ಖಂಡಿತವಾಗಿಯೂ ಸಣ್ಣಪುಟ್ಟ ಸಮಸ್ಯೆಗಳನ್ನು ಹಾಗೆ ನಿವಾರಣೆ ಮಾಡಬಹುದು.
Vijaya Karnataka Web ಮಳೆಗಾಲದಲ್ಲಿ ಆರೋಗ್ಯವಾಗಿ ಹಾಗೂ ಫಿಟ್‌ ಆಗಿರಲು ಬಾದಾಮಿ ಸೂಪ್ ಸವಿಯಿರಿ!


ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಜ್ವರ, ನೆಗಡಿ ಹಗೂ ಕೆಮ್ಮಿನ ಸಮಸ್ಯೆ ನಿವಾರಣೆ ಮಾಡಲು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಅದರ ಜತೆಗೆ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಸೂಕ್ತವಾಗಿರುವುದು.

ಆರೋಗ್ಯಕಾರಿ ಆಹಾರದ ಜತೆಗೆ ಪ್ರತಿನಿತ್ಯವೂ ವ್ಯಾಯಾಮ ಮಾಡಿದರೆ ಆಗ ಖಂಡಿತವಾಗಿಯೂ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯು ವೃದ್ಧಿಸುವುದು ಮತ್ತು ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುವುದು.

ಮಳೆಗಾಲದಲ್ಲಿ ಯಾವಾಗಲೂ ಬಿಸಿಯಾಗಿರುವಂತಹ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಅದರಲ್ಲೂ ಕೆಲವೊಂದು ಸೂಪ್‌ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂತಹ ಸೂಪ್ ಗಳನ್ನು ನೀವು ಮನೆಯಲ್ಲೇ ತಯಾರಿಸಿ. ಬಾದಾಮಿ ಹಾಕಿಕೊಂಡು ಮಾಡುವಂತಹ ಸೂಪ್ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಇದನ್ನು ಓದಿದ ಬಳಿಕ ಖಂಡಿತ ನೀವು ನೆನೆಸಿಟ್ಟ ಬಾದಾಮಿ ಸೇವಿಸುವಿರಿ!


ಬಾದಾಮಿ-ತುಳಸಿ ಸೂಪ್ ಆರೋಗ್ಯಕ್ಕೆ ಲಾಭಕಾರಿ

ಬೇಕಾಗುವ ಸಾಮಗ್ರಿಗಳು

  • 100 ಗ್ರಾಂ ಬಾದಾಮಿ(ಸಣ್ಣಗೆ ಹಚ್ಚಿರುವುದು)
  • ತುಳಸಿ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು,
  • ನಾಲ್ಕು ಚಮಚ ಆಲಿವ್ ತೈಲ
  • ಎರಡು ಚಮಚ ಕರಿಮೆಣಸು
  • ಒಂದು ಚಮಚ ಮೆಣಸು
  • ಒಂದು ಕಪ್ ನೀರು
  • ಅರ್ಧ ಕಪ್ ಲಿಂಬೆ
  • ಒಂದು ಚಮಚ ಉಪ್ಪು
  • ಈರುಳ್ಳಿ ಮತ್ತು ಬೆಳ್ಳುಳ್ಳಿ(ನಿಮಗೆ ಬೇಕಾದಷ್ಟು)
ತಯಾರಿಸುವ ವಿಧಾನ

  • ಉಗುರುಬೆಚ್ಚಗಿನ ನೀರಿನಲ್ಲಿ ಬಾದಾಮಿಯನ್ನು ಸ್ವಲ್ಪ ನೆನೆಸಿಡಿ.
  • ಇದರ ಬಳಿಕ ಬಾದಾಮಿ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಸಣ್ಣದಾಗಿ ಕತ್ತರಿಸಿಕೊಂಡು ಬದಿಗಿಡಿ.
  • ಮಧ್ಯಮ ಬೆಂಕಿಯಲ್ಲಿ ಒಂದು ಪಾತ್ರೆ ಇಡಿ ಮತ್ತು ಅದು ಬಿಸಿಯಾಗಲಿ. ಇದರ ಬಳಿಕ ಅದಕ್ಕೆ ಬೆಣ್ಣೆ ಹಾಕಿ.
  • ಈಗ ಕತ್ತರಿಸಿಕೊಂಡು ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮತ್ತು ಕಂದುಬಣ್ಣಕ್ಕೆ ಬರುವ ತನಕ ಹುರಿಯಿರಿ.
  • ಇದರ ಬಳಿಕ ಉಪ್ಪು ಮತ್ತು ಕರಿಮೆಣಸು ಹಾಕಿ ಮತ್ತು ಸ್ವಲ್ಪ ನೀರು ಹಾಕಿ. 3-4 ನಿಮಿಷ ಬಳಿಕ ಗ್ಯಾಸ್ ನಂದಿಸಿ
  • ಇದರ ಬಳಿಕ ಪ್ರತ್ಯೇಕವಾಗಿಟ್ಟ ಬಾದಾಮಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
  • ಇದಕ್ಕೆ ಮಸಾಲೆಗಳು ಮತ್ತು ಹಾಲು ಹಾಕಿ ಸರಿಯಾಗಿ ರುಬ್ಬಿ.
  • ಈಗ ಇನ್ನೊಂದು ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು ಈ ಮಿಶ್ರಣವನ್ನು ಅದರಲ್ಲಿ ಹಾಕಿ ಮತ್ತು ಕುದಿಯಲು ಬಿಡಿ. ಇದು ಕುದಿದ ಬಳಿಕ ಅದಕ್ಕೆ ಕ್ರೀಮ್ ಹಾಕಿ ಮತ್ತು 2-3 ನಿಮಿಷ ಹಾಗೆ ಕುದಿಯಲಿ ಮತ್ತು ಬಳಿಕ ಗ್ಯಾಸ್ ನಿಂದ ತೆಗೆಯಿರಿ.
ಮಳೆಗಾಲದಲ್ಲಿ ಪಾಲಿಸಬೇಕಾದ ಆಹಾರ ಕ್ರಮಗಳು


ಬಾದಾಮಿ ಹಾಗೂ ಬ್ರಾಕೋಲಿ ಸೂಪ್

  • ಬಾದಾಮಿ ಮತ್ತು ಬ್ರಾಕೋಲಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಪ್ರತಿರೋಧಕ ವ್ಯವಸ್ಥೆ ವೃದ್ಧಿಸುವ ಗುಣಗಳು ಇವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಅದರಿಂದ ದೇಹವು ಒಳಗಿನಿಂದ ಬಲಿಷ್ಠವಾಗುವುದು ಮಾತ್ರವಲ್ಲದೆ, ಸೋಂಕನ್ನು ಕಡಿಮೆ ಮಾಡುವ ಗುಣವು ಇದರಲ್ಲಿದೆ.
  • ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವಂತಹ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವಂತಹ ಹಲವಾರು ಬಗೆಯ ಆಂಟಿಆಕ್ಸಿಡೆಂಟ್ ಗಳು ಬಾದಾಮಿ ಹಾಗೂ ಬ್ರಾಕೋಲಿಯಲ್ಲಿದೆ.
  • ಬ್ರಾಕೋಲಿಯಲ್ಲಿ ಇರುವ ವಿಟಮಿನ್ ಸಿ ಅಂಗಾಂಶಗಳನ್ನು ಸರಿಪಡಿಸುವುದು ಮತ್ತು ಕಾಲಜನ್ ಉತ್ಪತ್ತಿ ವೃದ್ಧಿಸುವುದು. 100 ಗ್ರಾಂ ಬ್ರಾಕೋಲಿಯಲ್ಲಿ 89 ಗ್ರಾಂನಷ್ಟು ವಿಟಮಿನ್ ಸಿ ಇದೆ. ಬ್ರಾಕೋಲಿಯಲ್ಲಿ ಬೆಟಾ ಕ್ಯಾರೋಟಿನ್, ಸಲ್ಫರ್ ಮತ್ತು ಪ್ಯಾಂಟೊಥೆನಿಕ್ ಆಮ್ಲವಿದೆ. ಇದು ಚರ್ಮಕ್ಕೆ ತುಂಬಾ ಲಾಭಕಾರಿ.
  • ಬಾದಾಮಿಯು ಚರ್ಮದಲ್ಲಿ ಕಾಣಿಸುವಂತಹ ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವುದು.
  • ಬಾದಾಮಿ ಮತ್ತು ಬ್ರಾಕೋಲಿಯಲ್ಲಿ ಆರೋಗ್ಯಕಾರಿ ಆಹಾರದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಸುಧಾರಣೆ ಮಾಡುವುದು ಮತ್ತು ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ಅನಗತ್ಯ ತೂಕ ಹೆಚ್ಚಳ ತಡೆಯುವುದು.
ಮಳೆಗಾಲದಲ್ಲಿ ಬಿಸಿ ನೀರು ಕುಡಿದರೆ ಸಿಗುವ ಆರೋಗ್ಯ ಲಾಭಗಳು

ಬ್ರಾಕೋಲಿ ಮತ್ತು ಬಾದಾಮಿ ಸೂಪ್ ತಯಾರಿಸುವುದು ಹೇಗೆ?

  • ಬ್ರಾಕೋಲಿ ಹೂವುಗಳನ್ನು ಕತ್ತರಿಸಿಕೊಂಡು ಅದನ್ನು 6-8 ನಿಮಿಷ ಕಾಲ ಬೇಯಿಸಿ ಮತ್ತು ಅದನ್ನು ಮೆತ್ತಗಾಗಲು ಬಿಡಿ.
  • ಬೇಯಿಸಿದ ಬ್ರಾಕೋಲಿಯನ್ನು ಹಾಗೆ ರುಬ್ಬಿಕೊಳ್ಳಿ. ಇದಕ್ಕೆ 40 ಗ್ರಾಂ ಬಾದಾಮಿ, ಹಾಲಿನ ಕೆನೆ ಹಾಕಿ ಮತ್ತು ಮೆತ್ತಗಿನ ಪೇಸ್ಟ್ ಮಾಡಿ.
  • ಇದಕ್ಕೆ ಕರಿಮೆಣಸಿನ ಹುಡಿ ಮತ್ತು ಉಪ್ಪು ಹಾಕಿ.
  • ರುಬ್ಬಿಕೊಂಡಿರುವ ಪೇಸ್ಟ್ ನ್ನು ತವಾಗೆ ಹಾಕಿ ಮತ್ತು ಬಿಸಿ ಮಾಡಿ. ಇದಕ್ಕೆ ಸ್ವಲ್ಪ ಬಾದಾಮಿ ತುಂಡುಗಳನ್ನು ಹಾಕಿಕೊಂಡು ಸೇವಿಸಲು ಕೊಡಿ.
  • ಬಾದಾಮಿ ಸೂಪ್ ನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ ಮತ್ತು ಇದರಲ್ಲಿ ಹಲವಾರು ವಿವಿಧ ಪೋಷಕಾಂಶಗಳು ಕೂಡ ಇವೆ. ಇದರಲ್ಲಿ ನಾರಿನಾಂಶ, ಪ್ರೋಟೀನ್, ವಿಟಮಿನ್ ಇ, ಸೆಲೆನಿಯಂ, ಸತು, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ವಿಟಮಿನ್ ಬಿ ಇದೆ. ಇದರಲ್ಲಿ ಫಾಲಟೆ ಮತ್ತು ಬಿಯೊಟಿನ್(ವಿಟಮಿನ್ ಬಿ7) ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ