ಆ್ಯಪ್ನಗರ

ಆಯುರ್ವೇದ: ಇಲ್ಲಿವೆ ಆಹಾರದ ಬಗ್ಗೆ ನಿಯಮ, ನಿಬಂಧನೆಗಳು

ಆಹಾರವನ್ನು ಹೇಗೆ ಸೇವನೆ ಮಾಡಬೇಕು? ಎಷ್ಟು ಸೇವನೆ ಮಾಡಬೇಕು ಎಂಬ ನಿಯಮವನ್ನು ಆಯುರ್ವೇದವು ಸ್ಪಷ್ಟವಾಗಿ ತಿಳಿಸುತ್ತದೆ. ಮುಂದೆ ಓದಿ.

Vijaya Karnataka Web 3 Jan 2022, 10:51 am
ನಾವು ಎಷ್ಟೇ ಆರೋಗ್ಯಕರವಾದ ಆಹಾರವನ್ನು ಸೇವೆನೆ ಮಾಡಿದರೂ ಸಮರ್ಪಕವಾಗಿ ಜೀರ್ಣಕ್ರಿಯೆ ಆಗದಿದ್ದರೆ ಬೇರೊಂದು ಆರೋಗ್ಯ ಸಮಸ್ಯೆ ಸೃಷ್ಟಿಯಾಗುತ್ತದೆ. ವಿಶೇಷವಾಗಿ ಆಯುರ್ವೇದವು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಎಂಥಹ ಆಹಾರವನ್ನು ಸೇವನೆ ಮಾಡಿದರೆ ಉತ್ತಮ? ಎಂಬುದನ್ನು ತಿಳಿಸಿದೆ. ಆ ವಿವರವನ್ನು ಇಲ್ಲಿ ತಿಳಿಯಿರಿ.
Vijaya Karnataka Web 10 ayurvedic rules for healthy eating in kannada
ಆಯುರ್ವೇದ: ಇಲ್ಲಿವೆ ಆಹಾರದ ಬಗ್ಗೆ ನಿಯಮ, ನಿಬಂಧನೆಗಳು


ನಿಮ್ಮ ಜೀರ್ಣಶಕ್ತಿ ಹಾಗು ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ಆಯುರ್ವೇದದಲ್ಲಿ ಹೇಳಲಾಗುವ ಕೆಲವು ಟಿಪ್ಸ್‌ಗಳನ್ನು ನೀವು ಫಾಲೋ ಮಾಡಲೇಬೇಕು. ಮಾಹಿತಿಗಾಗಿ ಮುಂದೆ ಓದಿ.

​೧. ಪ್ರಶಾಂತವಾದ ಮನಸ್ಸು

ಆಹಾರ ಕೇವಲ ಹೊಟ್ಟೆ ತುಂಬಿಸಲು ಮಾತ್ರವಲ್ಲ, ಬದಲಾಗಿ ಆರೋಗ್ಯಕರವಾದ ಶರೀರ ಮತ್ತು ಮನಸ್ಸು ಪಡೆಯಲು ಮೈಂಡ್ ಫುಲ್ ಈಟಿಂಗ್ ಅತಿ ಮುಖ್ಯವಾದುದು. ಪ್ರಸ್ತುತ ಬಹುತೇಕರಿಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಲೇ ಇದೆ. ಹಾಗಾಗಿ ಪ್ರತಿಯೊಬ್ಬರು ಕೂಡ ಆಹಾರದ ಅಭ್ಯಾಸದ ವಿಷಯದಲ್ಲಿ ಜಾಗರೂಕತೆಯನ್ನು ವಹಿಸಲೇಬೇಕು. ಆಯುರ್ವೇದದಲ್ಲಿ ಆಹಾರವನ್ನು ಹೇಗೆ ತಿನ್ನಬೇಕು ಎಂಬ ಟಿಪ್ಸ್ ಇಲ್ಲಿದೆ. ಮುಂದೆ ಓದಿ.

​೨. ಆಯುರ್ವೇದದ ಪ್ರಕಾರ ಆಹಾರ ಪದ್ಧತಿ

ಸಾಂಕ್ರಾಮಿಕ ರೋಗಗಳು ಬಂದಾಗಿನಿಂದ ಜನರು ಆಹಾರ ಹಾಗು ದೇಹದಂಡನೆಯಲ್ಲಿ ಸ್ವಲ್ಪ ಬದಲಾವಣೆಯನ್ನು ತರುತ್ತಿದ್ದಾರೆ. ಆದರೆ ಆಯುರ್ವೇದವು ಪೂರ್ವದಲ್ಲಿಯೇ ಆಹಾರ ಹಾಗು ವ್ಯಾಯಾಮದ ಬಗ್ಗೆ ಸವಿವರವಾಗಿ ತಿಳಿಸಿದೆ. ಆಯುರ್ವೇದ ಡಯಟ್ ಪ್ರಕಾರ ಆಹಾರವನ್ನು ಸೇವಿಸಲು ಕೆಲವು ರೂಲ್ಸ್ ಇವೆ. ಎಂತಹ ಆಹಾರ ಯಾವಾಗ ತಿನ್ನಬೇಕು? ಹೇಗೆ ಸೇವಿಸಬೇಕು? ನಿಮ್ಮ ಶರೀರ ಎಂಥಹ ಆಹಾರಕ್ಕೆ ಹೊಂದಿಕೊಳ್ಳುತ್ತದೆ?

​೩. ಆರೋಗ್ಯಕ್ಕೆ ನಿಯಮಗಳು

  • ನಿಮಗೆ ಹಸಿವು ಆದಾಗ ಮಾತ್ರ ಸೇವಿಸಿ, ಸುಖಾಸುಮ್ಮನೆ ತಿನ್ನಬೇಕು ಎಂದು ತಿನ್ನಬೇಡಿ.
  • ಪೂರ್ತಿಯಾಗಿ ಹಸಿವು ಉಂಟಾ ಆಹಾರ ಸೇವನೆ ಮಾಡಿದರೆ, ಇದಕ್ಕಿಂತ ಮುಂಚೆ ನೀವು ತಿಂದ ಆಹಾರವು ಸಂಪೂರ್ಣವಾಗಿ ಜೀರ್ಣವಾಗಿ ಮತ್ತೆ ಹಸಿವು ಆಗಿದೆ ಎಂದೇ ಅರ್ಥ.
  • ಕೆಲವು ಬಾರಿ ಡಿಹೈಡ್ರೇಷನ್‌ಯಿಂದಾಗಿ ಕೂಡ ಹಸಿವು ಉಂಟಾಗುತ್ತದೆ. ಹಾಗಾಗಿ ನಿಮಗೆ ಸಂಪೂರ್ಣವಾಗಿ ಹಸಿವು ಉಂಟಾದರೆ ಮಾತ್ರ ಆಹಾರವನ್ನು ತೆಗೆದುಕೊಳ್ಳಿ.

ಪದೇ ಪದೇ ಹಸಿವು ಉಂಟಾಗುತ್ತಿದ್ದರೆ, ಈ ಸಮಸ್ಯೆಗಳು ಇರಬಹುದು ಎಚ್ಚರ..!

​೪. ಕೆಳಗೆ ಕುಳಿತು ತಿನ್ನಿ

  • ಪ್ರಶಾಂತವಾದ ವಾತಾವರಣದಲ್ಲಿ ಕುಳಿತುಕೊಂಡು ನಿಧಾನವಾಗಿ ತಿನ್ನಬೇಕು. ಯಾವುದೇ ಕಾರಣಕ್ಕೂ ಆತುರವಾಗಿ ಆಹಾರವನ್ನು ಸೇವಿಸಬಾರದು ಎನ್ನುತ್ತದೆ ಆಯುರ್ವೇದ.
  • ಕೆಳಗೆ ಕುಳಿತು ಆಹಾರ ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.
  • ಆಹಾರ ಸೇವನೆ ಮಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಟಿವಿ, ಮೊಬೈಲ್, ಲ್ಯಾಪ್‌ಟ್ಯಾಪ್, ಬುಕ್ಸ್ ನಂತವುಗಳಿಂದ ಸಂಪೂರ್ಣವಾಗಿ ದೂರವಿರಿ. ಇದೊಂದು ಅನಾರೋಗ್ಯಕರವಾದ ಅಭ್ಯಾಸ ಎನ್ನುತ್ತದೆ ಆಯುರ್ವೇದ.
  • ಅಲ್ಲದೇ, ನಿಮಗೆ ಅಗತ್ಯವಾದ ಆಹಾರ ಪ್ರಮಾಣವನ್ನು ಮಾತ್ರ ಸೇವನೆ ಮಾಡಿ.

ಆಯುರ್ವೇದ: ಇವುಗಳನ್ನು ತಿಂದರೆ ಯಾವುದೇ ರೋಗಗಳು ಹತ್ತಿರ ಕೂಡ ಸುಳಿಯುವುದಿಲ್ಲವಂತೆ…

​೫. ಪ್ರಿಡ್ಜ್ ಆಹಾರ ಬೇಡ

  • ಆದಷ್ಟು ಆಹಾರವನ್ನು ಬಿಸಿ ಬಿಸಿಯಾಗಿರುವಾಗಲೇ ಸೇವನೆ ಮಾಡಬೇಕು.
  • ವಾಸ್ತವವಾಗಿ ತಾಜಾ ತರಕಾರಿಗಳು, ತಾಜಾ ಹಣ್ಣುಗಳನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.
  • ಪ್ರಿಡ್ಜ್ ನಲ್ಲಿರುವ ಆಹಾರಗಳನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.
  • ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಆಹಾರ, ಪಿಷ್ಟ ಆಹಾರ, ಸಂಸ್ಕರಿಸಿದ ಆಹಾರಗಳಿಂದ ಆದಷ್ಟು ದೂರವಿರಿ. ಈ ಆಹಾರಗಳ ಬದಲಾಗಿ ಪೋಷಕಾಂಶದಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ.
  • ಹೊರಗೆ ತಯಾರು ಮಾಡಿದ ಆಹಾರಗಳಲ್ಲಿ ಕಲಬೆರಕೆ ಹಾಗು ಅಶುಚಿ ಇರುವುದರಿಂದ ಮನೆಯಲ್ಲಿ ತಯಾರು ಮಾಡಿದ ಆಹಾರವನ್ನೇ ಸೇವನೆ ಮಾಡಿ.

ಆಯುರ್ವೇದದ ಪ್ರಕಾರ ಹಣ್ಣುಗಳನ್ನು ಯಾವಾಗ ಸೇವಿಸಬೇಕು ಗೊತ್ತ?

​೬. ಹಾಲು ಮತ್ತು ಹಣ್ಣುಗಳನ್ನು ಸೇರಿಸಿ ಸೇವಿಸಬಾರದು

  • ಹಾಗೆಯೇ ಎರಡು ವಿಭಿನ್ನವಾದ ಆಹಾರವನ್ನು ಮಿಶ್ರಣ ಮಾಡಿ ತೆಗೆದುಕೊಳ್ಳಬೇಡಿ.
  • ಅದರಲ್ಲಿಯೂ, ಹಾಲು ಮತ್ತು ಹಣ್ಣುಗಳನ್ನು ಸೇರಿಸಿ ಸೇವಿಸಬಾರದು ಎನ್ನುತ್ತದೆ ಆಯುರ್ವೇದ.
  • ಆಹಾರವನ್ನು ತೆಗೆದುಕೊಳ್ಳುವ ಸಮಯದಲ್ಲಿ ಏಕಾಗ್ರತೆಯಿಂದ ಐದು ಇಂದ್ರಿಯಾಗಳನ್ನು ಉಪಯೋಗಿಸಿ ತಿನ್ನಿ.
  • ನೀವು ಸೇವನೆ ಮಾಡುತ್ತಿರುವ ಆಹಾರದ ರುಚಿ ಹಾಗು ಸ್ವಾದವನ್ನು ಸವಿಯುತ್ತಾ ಆಹಾರವನ್ನು ಸೇವಿಸಬೇಕು.
  • ಎಂದಿಗೂ ಆಹಾರ ಅಥವಾ ನೀರನ್ನು ನಿಂತು ತಿನ್ನಬಾರದು ಮತ್ತು ಕುಡಿಯಬಾರದು.
  • ಸರಿಯಾದ ಸಮಯದಲ್ಲಿ ಆಹಾರವನ್ನು ಸೇವನೆ ಮಾಡಬೇಕು.

ಈ ಮೇಲಿನ ವಿಷಯವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಆಯುರ್ವೇದ ತಿಳಿಸುವ ರೀತಿಯಲ್ಲಿ ಸೇವನೆ ಮಾಡಿ. ಇದರಿಂದ ಆರೋಗ್ಯಕರವಾದ ಜೀವನವನ್ನು ಸಾಗಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ