ಆ್ಯಪ್ನಗರ

ನಿರಂತರವಾದ ಬಿಕ್ಕಳಿಕೆ ನಿವಾರಣೆಗೆ ಸಾಕು ಒಂದು ಕಪ್ ಮೊಸರು!

ಮಕ್ಕಳಿಗಾಗಲಿ ಅಥವಾ ದೊಡ್ಡವರಿಗಾಗಲಿ ಬಿಕ್ಕಳಿಕೆ ಬಂದಾಗ ಸ್ವಲ್ಪ ಮೊಸರು ತಿನ್ನಲು ಕೊಟ್ಟರೆ ಬಿಕ್ಕಳಿಕೆ ಥಟ್ ಅಂತ ನಿಂತು ಹೋಗುತ್ತದೆ.

Vijaya Karnataka Web 11 Oct 2021, 1:10 pm
ಬಿಕ್ಕಳಿಕೆ ಎಂದಿಗೂ ಸಹ ಆರೋಗ್ಯ ಸಮಸ್ಯೆಯಲ್ಲ. ಬದಲಿಗೆ ಇದು ಶ್ವಾಸಕೋಶದ ಮಾಂಸಖಂಡಗಳನ್ನು ಸಹಜಸ್ಥಿತಿಗೆ ತಲುಪಿಸುವ ಒಂದು ಪ್ರಕ್ರಿಯೆ ಅಷ್ಟೇ. ಈ ಸಮಯದಲ್ಲಿ ಶ್ವಾಸಕೋಶದ ಭಾಗ ಹಿಂದೆ ಮುಂದೆ ಆಡುವುದರಿಂದ ಆಂತರಿಕವಾಗಿ ದೇಹದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳು ಕೂಡ ಆಗುತ್ತದೆ.
Vijaya Karnataka Web a full stop to continuous how to get rid of hiccups just by a bowl of curd
ನಿರಂತರವಾದ ಬಿಕ್ಕಳಿಕೆ ನಿವಾರಣೆಗೆ ಸಾಕು ಒಂದು ಕಪ್ ಮೊಸರು!


ಆದರೆ ಬಿಕ್ಕಳಿಕೆ ಏಕೆ ಬರುತ್ತದೆ ಎಂದು ತಿಳಿದುಕೊಂಡರೆ, ಮುಂದೆ ಅಂತಹ ಸಂದರ್ಭ ಎದುರಾಗದಂತೆ ನೋಡಿಕೊಳ್ಳಬಹುದು. ಉದಾಹರಣೆಗೆ ಬಿಕ್ಕಳಿಕೆ, ಅತಿಯಾದ ಮಾನಸಿಕ ಒತ್ತಡ, ಕೆಮ್ಮು, ಮಾನಸಿಕ ಆತಂಕ, ಅಳುವುದು, ಹಠಾತ್ತಾಗಿ ನುಂಗುವುದು, ಕೆಲವೊಂದು ಔಷಧಿಯ ಅಡ್ಡ ಪರಿಣಾಮಗಳು ಇತ್ಯಾದಿ ಸಮಸ್ಯೆಗಳಿಂದ ಕಂಡುಬರುವ ಸಾಧ್ಯತೆ ಇರುತ್ತದೆ.

ಆದರೆ ಬಿಕ್ಕಳಿಕೆ ಬಂದ ಸ್ವಲ್ಪ ಹೊತ್ತಿನಲ್ಲಿ ತಾನಾಗಿಯೇ ನಿಂತುಹೋಗುತ್ತದೆ. ಒಂದು ವೇಳೆ ಅದು ಮೂರು ಗಂಟೆಗಳು ಕಳೆದರೂ ನಿಲ್ಲದೇ ಹೋದರೆ ಅದರಿಂದ ಆರೋಗ್ಯದ ತೊಂದರೆ ತಪ್ಪಿದ್ದಲ್ಲ. ಆಗ ನೀವು ವೈದ್ಯರಿಂದ ತಪ್ಪದೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಕೆಲವರಿಗೆ ಇದು ಶಸ್ತ್ರಚಿಕಿತ್ಸೆ ತೆಗೆದುಕೊಳ್ಳಲು ಕೂಡ ಕಾರಣ ಆಗಬಹುದು.

ಆದರೆ ಒಂದು ವೇಳೆ ಸಾಧಾರಣ ಬಿಕ್ಕಳಿಕೆ ಸಮಸ್ಯೆ ನಿಮಗೆ ಉಂಟಾಗಿದ್ದರೆ, ಸ್ವಲ್ಪ ಏಲಕ್ಕಿ ಪುಡಿಯನ್ನು ಬಾಯಲ್ಲಿ ಹಾಕಿಕೊಳ್ಳುವುದರಿಂದ ತಕ್ಷಣವೇ ಪರಿಹಾರ ಸಿಗುತ್ತದೆ. ಬೇಕೆಂದರೆ ಏಲಕ್ಕಿಯನ್ನು ಸ್ವಲ್ಪ ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರ ರಸವನ್ನು ಕುಡಿಯಬಹುದು. ಇದರ ಜೊತೆಗೆ ಕೆಲವು ಮನೆಮದ್ದುಗಳು ಬಿಕ್ಕಳಿಕೆ ಸಮಸ್ಯೆ ಹೋಗಲಾಡಿಸಲು ಇಲ್ಲಿವೆ.

​ಮೊಸರು ಸೇವನೆ ಮಾಡಿ

ಬಿಕ್ಕಳಿಕೆ ಬಂದಾಗ ತಕ್ಷಣ ಪರಿಹಾರ ಕಂಡುಕೊಳ್ಳಲು ಒಂದು ಸ್ವಲ್ಪ ಮೊಸರು ಸೇವನೆ ಮಾಡಿದರೆ ಉತ್ತಮ ಎನಿಸುತ್ತದೆ. ಏಕೆಂದರೆ ಮೊಸರಿನಲ್ಲಿ ಆಲ್ಕಲೈನ್ ಗುಣ ಲಕ್ಷಣಗಳು ಹೆಚ್ಚಾಗಿರುವುದರಿಂದ ಮತ್ತು ಇದು ನಿಮ್ಮ ದೇಹದ ಪಿಹೆಚ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಕಾರಣದಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಆಮ್ಲೀಯತೆಯನ್ನು ತಡೆ ಹಾಕುತ್ತದೆ.

ಬಿಕ್ಕಳಿಕೆ ಬಂದಾಗ ತಕ್ಷಣ ಪರಿಹಾರ ಕಂಡುಕೊಳ್ಳಲು

​ಜೇನುತುಪ್ಪ ಸೇವಿಸಬಹುದು

ಬಿಕ್ಕಳಿಕೆ ಸಮಸ್ಯೆಯನ್ನು ಅನುಭವಿಸುತ್ತಿರುವವರು ನಾಲಿಗೆ ಮೇಲೆ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಂಡು ನೆಕ್ಕುವುದರಿಂದ ತಕ್ಷಣವೇ ಪರಿಹಾರ ಸಿಗುತ್ತದೆ.

​ಸರಳವಾಗಿ ನೀರು ಕೂಡ ಕುಡಿಯಬಹುದು

ನಿಧಾನವಾಗಿ ನೀರು ಕುಡಿದು ಬಿಕ್ಕಳಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿ. ಬಿಕ್ಕಳಿಕೆ ಬಂದಂತಹ ಸಂದರ್ಭದಲ್ಲಿ ನಿಧಾನವಾಗಿ ನೀರನ್ನು ಗುಟುಕಿನ ರೀತಿ ಸೇವನೆ ಮಾಡುವುದರಿಂದ ಒಳ್ಳೆಯ ಪರಿಹಾರ ಸಿಗುತ್ತದೆ.

​ಶುಂಠಿ ಸೇವನೆ ಮಾಡಿ

ಶುಂಠಿಯಲ್ಲಿ anti-inflammatory ಗುಣ ಲಕ್ಷಣಗಳು ಹೆಚ್ಚಾಗಿ ಕಂಡುಬರುವುದರಿಂದ ನಿಮಗೆ ಬಿಕ್ಕಳಿಕೆ ಉಂಟುಮಾಡುವ ದೇಹದ ಒಳಗಿನ ಸಾಧ್ಯತೆಯನ್ನು ಇದು ಕಡಿಮೆ ಮಾಡುತ್ತದೆ. ಒಂದು ವೇಳೆ ಅಜೀರ್ಣತೆಯ ಸಮಸ್ಯೆಯಿಂದ ಬಿಕ್ಕಳಿಕೆ ಉಂಟಾಗಿದ್ದರೆ ಅದು ಶುಂಠಿಯಿಂದ ಸುಲಭವಾಗಿ ಪರಿಹಾರವಾಗುತ್ತದೆ.

ಶುಂಠಿ ಚಹಾ ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ