ಆ್ಯಪ್ನಗರ

ಈ ಸ್ಮಾರ್ಟ್‌ ಟಾಯ್ಲೆಟ್‌ನಿಂದ ಹೃದಯಾಘಾತ ಆಗುವ ಬಗ್ಗೆ ತಿಳಿದುಕೊಳ್ಳಬಹುದು!

​​ರೋಚೆಸ್ಟರ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಆರ್‌ಐಟಿ) ಇಂತಹ ಹೊಸ ಸ್ಮಾರ್ಟ್‌ ಟಾಯ್ಲೆಟ್‌ಗಳನ್ನು ತಯಾರಿಸಿದ್ದು, ಆಸ್ಪತ್ರೆಯಿಂದ ತೆರಳಿದ ರೋಗಿಗಳಿಗೆ ನೀಡಲು ಶಿಫಾರಸು ಮಾಡಿದೆ.

Times Now 27 May 2019, 7:21 pm
[This story originally published in Times of India on May 27,2019]
Vijaya Karnataka Web smart toilet

ಹೊಸದಿಲ್ಲಿ: ಬದಲಾದ ಜೀವನ ಕ್ರಮ, ಆಹಾರ ಕ್ರಮ ಇತ್ಯಾದಿಗಳಿಂದ ದೇಶದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಸಾವನ್ನಪ್ಪುತ್ತಿರುವವರ ಸಂಖ್ಯೆಯೇ ಇದರಲ್ಲಿ ಅಧಿಕ. ಈ ಹಿನ್ನೆಲೆಯಲ್ಲಿ ಸಂಶೋಧಕರ ತಂಡವೊಂದು ಟಾಯ್ಲೆಟ್‌ ಸೀಟ್‌ನಲ್ಲಿ ಕಾರ್ಡಿಯೋವಾಸ್ಕ್ಯುಲರ್‌ ಮಾನಿಟರಿಂಗ್‌ ವ್ಯವಸ್ಥೆಯನ್ನು ಅಳವಡಿಸಿದೆ.

ರೋಚೆಸ್ಟರ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಆರ್‌ಐಟಿ) ಇಂತಹ ಹೊಸ ಸ್ಮಾರ್ಟ್‌ ಟಾಯ್ಲೆಟ್‌ಗಳನ್ನು ತಯಾರಿಸಿದ್ದು, ಆಸ್ಪತ್ರೆಯಿಂದ ತೆರಳಿದ ರೋಗಿಗಳಿಗೆ ನೀಡಲು ಶಿಫಾರಸು ಮಾಡಿದೆ.

ಸ್ಮಾರ್ಟ್‌ ಟಾಯ್ಲೆಟ್‌ಗಳು, ರೋಗಿಗಳ ತೂಕ, ಹೃದಯ ಬಡಿತದ ಪ್ರಮಾಣ, ರಕ್ತದೊತ್ತಡ ಸೇರಿದಂತೆ ಇನ್ನಿತರ ಪರಿಮಾಣಗಳನ್ನು ಅಳೆಯುತ್ತದೆ. ಆಕ್ಸಿಜನ್‌ ಪ್ರಮಾಣ, ಸ್ಕ್ರೋಕ್‌ ವಾಲ್ಯುಮ್‌ಗಳ ಡೇಟಾವನ್ನು ಸ್ಮಾರ್ಟ್‌ ಟಾಯ್ಲೆಟ್‌ನಲ್ಲಿನ ಸೆನ್ಸರ್‌ ಸಂಗ್ರಹಿಸುತ್ತದೆ. ಈ ಸೆನ್ಸರ್‌ಗಳು ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಮೊದಲೇ ವೈದ್ಯರಿಗೆ ಎಚ್ಚರಿಕೆ ನೀಡುತ್ತದೆ.

ಹೃದಯಾಘಾತಕ್ಕೆ ಅಗತ್ಯ ಚಿಕಿತ್ಸೆ ಪಡೆದುಕೊಂಡ ಬಳಿಕದ ಒಂದು ತಿಂಗಳಲ್ಲಿ, ಅಂದರೆ ಆಸ್ಪತ್ರೆಯಿಂದ ತೆರಳಿದ ಬಳಿಕದ ಒಂದು ತಿಂಗಳಲ್ಲಿ ಶೇ.25 ರಷ್ಟು ಹೃದ್ರೋಗಿಗಳಲ್ಲಿ ಕಂಜೆಸ್ಟಿವ್‌ ಹಾರ್ಟ್‌ ಫೇಲ್ಯುರ್‌ ಉಂಟಾಗಿ, ಮತ್ತೊಮ್ಮೆ ಆಸ್ಪತ್ರೆ ಸೇರಿದ್ದಾರೆ. ಅಂತೆಯೇ ಶೇ.45ರಷ್ಟಯ ರೋಗಿಗಳು ಮೂರು ತಿಂಗಳಲ್ಲಿ ಮತ್ತೆ ಆಸ್ಪತ್ರೆಗೆ ಸೇರಿದ್ದಾರೆ ಎಂದು ರೋಚೆಸ್ಟರ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಆರ್‌ಐಟಿ)ಯ ಹಾರ್ಟ್‌ ಹೆಲ್ತ್‌ ಇಂಟಲಿಜೆನ್ಸ್‌ ವಿಭಾಗದ ಸಿಇಒ ನಿಕೊಲಸ್‌ ಕಾನ್‌ ಹೇಳಿದ್ದಾರೆ. ಇದಕ್ಕಾಗಿಯೇ ರೋಗಿಯ ಆರೋಗ್ಯದ ಬಗ್ಗೆ ನಿಖರ ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ ಇಂತಹ ವ್ಯವಸ್ಥೆಯುಳ್ಳ ಸ್ಮಾರ್ಟ್‌ ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಕ್ತ ಪರಿಚಲನೆಯಲ್ಲಾಗುವ ವ್ಯತ್ಯಾಸವನ್ನು ಇದರಲ್ಲಿರುವ ಸೆನ್ಸರ್‌ಗಳು ಗ್ರಹಿಸುವ ಹಿನ್ನೆಲೆಯಲ್ಲಿ, ರೋಗಿಗೆ ಹೃದಯಾಘಾತದ ಲಕ್ಷಣಗಳು ಗೋಚರಿಸುವ ಮುನ್ನವೇ ಸೆನ್ಸರ್‌ಗಳಿಗೆ ತಿಳಿಯುತ್ತದೆ ಎಂದು ನಿಕೊಲಸ್‌ ಹೇಳಿದ್ದಾರೆ. ಸಂಶೋಧನೆಯ ವಿವಿರ ಜೆಎಂಐಆರ್‌ ಎಂ ಹೆಲ್ತ್‌ ಹಾಗೂ ಯುಹೆಲ್ತ್‌ನಲ್ಲಿ ಪ್ರಕಟವಾಗಿದೆ.

ಹೃದಯದ ರಕ್ತನಾಳಗಳು, ಅವುಗಳಲ್ಲಿ ಸಾಗುವ ರಕ್ತದ ಪ್ರಮಾಣ, ರಕ್ತ ಸಾಗುವಲ್ಲಾಗುವ ಅಡೆಚಣೆ, ಪ್ರಮಾಣ ಇತ್ಯಾದಿಗಳು ರೋಗಿಗೇ ಗೋಚರಿಸುವುದು ಬಹಳ ವಿರಳ. ರೋಗಿಯ ಸೂಕ್ಷ್ಮತೆ ಅತ್ಯಂತ ಮುಖ್ಯವಾಗಿರುತ್ತದೆ. ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಲೇ ಹೋಗುತ್ತದೆ. ಹೀಗಾಗಿಯೇ ಸಂಶೋಧಕರು ರೋಗಿಯ ಹೃದಯದ ಆರೋಗ್ಯ, ರಕ್ತದ ಪರಿಚಲನೆಯ ವಿವರಗಳನ್ನು ಆಸ್ಪತ್ರೆಯಿಂದ ತೆರಳಿದ ಬಳಿಕವೂ ಗಮನಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ ಟಾಯ್ಲೆಟ್‌ ಪರಿಕಲ್ಪನೆಯನ್ನು ಕಂಡುಕೊಂಡಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ