ಆ್ಯಪ್ನಗರ

ರಕ್ತದಲ್ಲಿ ಯೂರಿಕ್ ಆಸಿಡ್‌ ಹೆಚ್ಚಾಗಬಾರದೆಂದರೆ ಈ ಆಹಾರಗಳನ್ನು ಸೇವಿಸಬೇಕು!

ಯೂರಿಕ್ ಆಮ್ಲದ ಸಮಸ್ಯೆ ಇದೆ ಎಂದು ಗೊತ್ತಾದ ಬಳಿಕ, ಆದಷ್ಟು ಪ್ಯೂರಿನ್ ಭರಿತ ಆಹಾರ ಪದಾರ್ಥಗಳಿಂದ ದೂರವಿದ್ದು, ನೈಸರ್ಗಿಕವಾಗಿ ಸಿಗುವ ಹಣ್ಣು-ತರಕಾರಗಳನ್ನು ಸೇವನೆ ಮಾಡಬೇಕು

Produced byಮನೋಹರ್ ಶೆಟ್ಟಿ | Vijaya Karnataka Web 28 May 2023, 10:12 am
ಯೂರಿಕ್ ಆಸಿಡ್ ಬಗ್ಗೆ ನಾವು ಹಲವಾರು ಬಾರಿ ಹಿಂದಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ. ಈ ಯೂರಿಕ್ ಆಸಿಡ್ ಅಥವಾ ಯೂರಿಕ್ ಆಮ್ಲ ಎಂದರೆ, ನಾವು ಆಹಾರ ಸೇವಿಸಿದ ಬಳಿಕ, ನಮ್ಮ ಜೀರ್ಣಾಂಗದಲ್ಲಿ ಆಹಾರ ಜೀರ್ಣವಾಗುವ ಸಂದರ್ಭದಲ್ಲಿ, ಕೆಲವೊಮ್ಮೆ ವಿಷಕಾರಿ ಅಂಶಗಳು ಉತ್ಪತ್ತಿ ಆಗುವುದು ಅದರಲ್ಲಿ ಯೂರಿಕ್ ಆಮ್ಲ ಕೂಡ ಒಂದು!
Vijaya Karnataka Web add these natural foods in your diet to get relief from uric acid naturally
ರಕ್ತದಲ್ಲಿ ಯೂರಿಕ್ ಆಸಿಡ್‌ ಹೆಚ್ಚಾಗಬಾರದೆಂದರೆ ಈ ಆಹಾರಗಳನ್ನು ಸೇವಿಸಬೇಕು!


ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪ್ಯೂರಿನ್ಸ್ ಎಂಬ ರಾಸಾಯನಿಕ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆಯಿಂದ ದೇಹದ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆಯಂತೆ. ಒಂದು ವೇಳೆ, ನಮ್ಮ ದೇಹದ ಕಿಡ್ನಿಗಳು ಯೂರಿಕ್ ಆಮ್ಲವನ್ನು ಪರಿಣಾಮಕಾರಿ ಯಾಗಿ ದೇಹದಿಂದ ಹೊರಹಾಕದೇ ಇದ್ದರೆ, ಮುಂದಿನ ದಿನಗಳಲ್ಲಿ ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ, ಜೊತೆಗೆ ಯೂರಿಕ್ ಆಮ್ಲ ರಕ್ತದಲ್ಲಿ ಬೆರೆತು ಹಲವಾರು ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಒಂದು ವೇಳೆ ಈ ಎಲ್ಲಾ ಸಮಸ್ಯೆಗಳು ಕಂಡು ಬರುವುದರ ಜೊತೆಗೆ ನಮ್ಮ ರಕ್ತ ಸಂಚಾರದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಬೆರೆತು ಹೋದರೆ, ಇದನ್ನು ವೈದ್ಯ ಕೀಯ ಭಾಷೆಯಲ್ಲಿ ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ.

ಯೂರಿಕ್ ಆಮ್ಲದ ಅಡ್ಡಪರಿಣಾಮಗಳು

  • ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ದೇಹದಲ್ಲಿ ಯೂರಿಕ್ ಆಸಿಡ್ ಅಥವಾ ಯೂರಿಕ್ ಆಮ್ಲ ಹೆಚ್ಚಾ ಗಲೂ ಬಾರದು ಮತ್ತು ಕಡಿಮೆ ಆಗಲು ಬಾರದು.
  • ಒಂದು ವೇಳೆ ಇದರಲ್ಲಿ ಏರುಪೇರಾದರೆ ಆರೋಗ್ಯಕ್ಕೆ ಸಮಸ್ಯೆ ಗಳು ಕಂಡು ಬರುವ ಸಾಧ್ಯತೆ ಇರುತ್ತದೆ. ಸಾಮಾ ನ್ಯವಾಗಿ ಮಹಿಳೆಯರಲ್ಲಿ 2.4 ರಿಂದ 6.0 ಮಿ.ಗ್ರಾಂ ಯೂರಿಕ್ ಆಮ್ಲ ಕಂಡು ಬಂದರೆ, ಪುರುಷರಲ್ಲಿ 3.4 ರಿಂದ 7.0 ಮಿ.ಗ್ರಾಂಗಳಷ್ಟು ಇರುತ್ತವೆ.
  • ಒಂದು ವೇಳೆ ಇದರಲ್ಲಿ ಲಯ ತಪ್ಪಿದರೆ, ಮಂಡಿ ನೋವು ಕಾಣಿಸಿಕೊಳ್ಳುವುದು, ಕೈಗಂಟುಗಳಲ್ಲಿ ನೋವು, ಊತ, ಕೀಲು ನೋವು, ಮಣಿ ಗಂಟುಗಳಲ್ಲಿ ನೋವು, ಸಂಧಿವಾ ತದಂತಹ ಲಕ್ಷಣಗಳು ಕಂಡು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ.

ದೇಹದ ಈ ಭಾಗಗಳಲ್ಲೆಲ್ಲಾ ನೋವು ಕಾಣಿಸಿಕೊಂಡ್ರೆ ನಿಮಗೆ ಯೂರಿಕ್ ಆಮ್ಲದ ಸಮಸ್ಯೆ ಇದೆ ಎಂದರ್ಥ

ಯೂರಿಕ್ ಆಸಿಡ್ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ

ದಿನಾ ಒಂದೆರಡು ಬಾಳೆಹಣ್ಣು ಸೇವಿಸಿ

  • ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುವ ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಮ ಗೆಲ್ಲಾ ಗೊತ್ತೇ ಇದೆ.
  • ಪ್ರಮುಖವಾಗಿ ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಅಧಿಕ ಪ್ರಮಾಣ ದಲ್ಲಿ ಸಿಗುವುದರ ಜೊತೆಗೆ ವಿಟಮಿನ್ಸ್ ಗಳಾದ ಬಿ6, ಬಿ12 ಹಾಗೂ ವಿಟಮಿನ್ಸ್ ಸಿ ಅಂಶ ಹೇರಳವಾಗಿ ಕಂಡು ಬರುತ್ತದೆ. ಎಲ್ಲಾಕ್ಕಿಂತ ಮುಖ್ಯವಾಗಿ ಈ ಹಣ್ಣಿ ನಲ್ಲಿ ಪ್ಯೂರಿನ್ಸ್ ಎಂಬ ರಾಸಾಯನಿಕ ಅಂಶಗಳು ಇಲ್ಲದೆ ಇರುವುದರಿಂದ, ಈಗಾಗಲೇ ಸಂಧಿವಾತದಂತಹ ಸಮಸ್ಯೆ ಯನ್ನು ಎದುರಿಸುವವರು, ಪ್ರತಿದಿನ ಒಂದೊಂದು ಬಾಳೆ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಇಟ್ಟು ಕೊಂಡರೆ ಬಹಳ ಒಳ್ಳೆಯದು.
  • ಪ್ರಮುಖವಾಗಿ ಯೂರಿಕ್ ಆಸಿಡ್ ಸಮಸ್ಯೆ ಇದ್ದವರು, ಯಾವಾ ಗಲೂ ಕೂಡ ಪ್ಯೂರಿನ್ಸ್ ಅಂಶ ಕಡಿಮೆ ಇರು ವಂತಹ ಆಹಾರಪದಾರ್ಥಗಳ ಸೇವನೆ ಮಾಡಬೇಕು. ಇವು ರಕ್ತದಲ್ಲಿ ಬೆರೆತುಕೊಂಡಿರುವ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡಲು ನೆರವಿಗೆ ಬರುತ್ತದೆ.

ದಿನಕ್ಕೊಂದು ಸೇಬು ತಿನ್ನಿ!

  • ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರ ಬಹುದು ಎನ್ನುವುದು ಹಳೆಯ ಇಂಗ್ಲಿಷ್ ನಾಣ್ಣುಡಿ. ಇದು ನಿಜ ಕೂಡ!
  • ಈ ಹಣ್ಣಿನಲ್ಲಿ ಕಂಡು ಬರುವ ಆರೋಗ್ಯಕಾರಿ ಅಂಶಗಳು, ಹಲವು ರೀತಿಯ ಪೌಷ್ಟಿಕ ಸತ್ವಗಳು ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು.
  • ಪ್ರಮುಖವಾಗಿ ಈ ಹಣ್ಣಿನಲ್ಲಿ ನಾರಿನಾಂಶ ಮತ್ತು ಪೆಕ್ಟಿನ್ ಎನ್ನುವ ನೈಸರ್ಗಿಕ ಅಂಶ ಹೇರಳವಾಗಿ ಕಂಡು ಬರುತ್ತದೆ.
  • ಇದರೊಂದಿಗೆ ವಿವಿಧ ರೀತಿಯ ವಿಟಮಿನ್ಸ್ ಗಳು, ಖನಿ ಜಾಂಶಗಳು ಹಾಗೂ ಪ್ರಬಲ ಆಂಟಿಆಕ್ಸಿಡೆಂಟ್‌ಗಳಾಗಿ ರುವ ವಿಟಮಿನ್ ಸಿ, ವಿಟಮಿನ್ ಕೆ, ಈ ಕೆಂಪು ಹಣ್ಣಿನಲ್ಲಿ ಹೇರಳವಾಗಿ ಕಂಡು ಬರುವುದರಿಂದ, ರಕ್ತದಲ್ಲಿ ಶೇಖರಣೆ ಗೊಂಡಿರುವ, ಯೂರಿಕ್ ಆಸಿಡ್ ಪ್ರಮಾಣವನ್ನು ತಗ್ಗಿ ಸಲು ನೆರವಿಗೆ ಬರುತ್ತದೆ.
  • ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಸೇಬುಹಣ್ಣಿ ನಲ್ಲಿ ಕಂಡು ಬರುವ ಫೈಬರ್ ಅಥವಾ ನಾರಿನಾಂಶವು ರಕ್ತದಿಂದ ಯೂರಿಕ್ ಆಮ್ಲವನ್ನು ಹೀರಿಕೊಳ್ಳುತ್ತದೆ ಹಾಗೂ ಅದರಿಂದ ದೇಹಕ್ಕೆ ಅಡ್ಡಪರಿಣಾಮಗಳು ಆಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ.
  • ಇದಲ್ಲದೆ ಈ ಹಣ್ಣಿನಲ್ಲಿ ಮಾಲಿಕ್ ಆಮ್ಲ (malic acid) ಕೂಡ ಕಂಡು ಬರುವುದರಿಂದ ಯೂರಿಕ್ ಆಮ್ಲದ ಮಟ್ಟ ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದಿನಕ್ಕೊಂದು ಸೇಬು ತಿನ್ನಿ ಪರ್ವಾಗಿಲ್ಲ, ಆದ್ರೆ ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ಹಾನಿಕರ!!

ಚೆರ್ರಿ ಹಣ್ಣುಗಳು

  • ಚೆರ್ರಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣವನ್ನು ತಗ್ಗಿಸಲು ನೆರವಾ ಗುತ್ತದೆ.
  • ಹೀಗಾಗಿ ನೇರವಾಗಿ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಒಳ್ಳೆಯದು, ಇಲ್ಲಾವೆಂದರೆ ಇದರ ಜ್ಯೂಸ್ ಮಾಡಿಕೊಂಡು ಕೂಡ ಸೇವನೆ ಮಾಡ ಬಹುದು

ಕೊನೆಯ ಮಾತು

  • ಕೃತಕ ಸಕ್ಕರೆ ಅಂಶ ಇರುವಂತಹ ತಂಪು ಪಾನೀಯಗಳು, ಸಿಹಿ ತಿಂಡಿಗಳಿಂದ ಆದಷ್ಟು ದೂರವಿದ್ದರೆ ಒಳ್ಳೆಯದು.
  • ಯಾಕೆಂದರೆ ಇಂತಹ ಸಿಹಿ ಅಂಶ ಹೆಚ್ಚಿರುವ ತಿಂಡಿ ಹಾಗೂ ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡುವು ದರಿಂದ, ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಾಗುತ್ತದೆ ಎಂದು ಹಲವಾರು ಅಧ್ಯಾಯನಗಳು ಸಾಬೀತು ಪಡಿಸಿದೆ.
  • ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿರುವ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
  • ಪ್ರಬಲ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಹಣ್ಣು ತರಕಾರಿಗಳನ್ನು ಸೇವನೆ ಮಾಡಿದರೆ ಇನ್ನೂ ಒಳ್ಳೆಯದು.
  • ಉದಾಹರಣೆಗೆ, ಬೆರ್ರಿ ಹಣ್ಣುಗಳು, ಸ್ಟ್ರಾಬೆರ್ರಿ ಹಣ್ಣು ಗಳನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು.
ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ