ಆ್ಯಪ್ನಗರ

ಮಧು ಮೇಹವು ನಿಮ್ಮ ಕಣ್ಣಿನ ದೃಷ್ಠಿಯನ್ನು ಮಂಜಾಗಿಸಬಹುದು ಎಚ್ಚರ!

ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿದಾಗ ಕಣ್ಣುಗಳು ಮಂಜಾಗುವುದು, ಯಾವುದೂ ಸ್ಪಷ್ಟವಾಗಿ ಗೋಚರಿಸದೆ ಇರುವುದು, ಬಣ್ಣಗಳ ವ್ಯತ್ಯಾಸ ತಿಳಿಯದೆ ಇರುವುದು ಹೀಗೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮಧುಮೇಹ ಬಂದಾಗ ಕಣ್ಣಿನ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು.

Vijaya Karnataka Web 18 Sep 2021, 6:06 pm
ಮಧುಮೇಹ ಒಂದು ದೀರ್ಘ ಕಾಲದ ಕಾಯಿಲೆ. ಒಮ್ಮೆ ಮಧುಮೇಹ ಬಂದರೆ ಸಾಯುವ ತನಕ ನಮ್ಮನ್ನು ಬಾಧಿಸುತ್ತಲೇ ಇರುತ್ತವೆ. ಮಧು ಮೇಹ ತೀವ್ರತೆ ಹೆಚ್ಚಾದರೆ ವಿವಿಧ ಅಂಗಾಂಗಗಳ ವೈಫಲ್ಯತೆ ಉಂಟಾಗುವುದು. ಮಸುಕಾದ ದೃಷ್ಟಿ ಸಮಸ್ಯೆಯು ಮೊದಲ ಆರೋಗ್ಯ ವೈಫಲ್ಯವಾಗಿ ಗೋಚರಿಸುವುದು. ಮಧುಮೇಹ ಆರೋಗ್ಯ ಸಮಸ್ಯೆಯ ದುರಾದೃಷ್ಟಕರ ಸಂಗತಿ ಎಂದರೆ ಮಧು ಮೇಹ ತೀವ್ರತೆ ಪಡೆದುಕೊಂಡರೆ ದೇಹದ ಕೆಲವು ಅಂಗಗಳ ಆರೋಗ್ಯವೂ ಹದಗೆಡುತ್ತವೆ.
Vijaya Karnataka Web all you want to know about blood sugar levels and eye health
ಮಧು ಮೇಹವು ನಿಮ್ಮ ಕಣ್ಣಿನ ದೃಷ್ಠಿಯನ್ನು ಮಂಜಾಗಿಸಬಹುದು ಎಚ್ಚರ!


​ಯಾರಲ್ಲಿ ಹೆಚ್ಚು ತೊಂದರೆ ಕಾಡುವುದು?

ಮಧುಮೇಹ ಇರುವವರಲ್ಲಿ ದೃಷ್ಟಿ ದೋಷದ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಟೈಪ್-1 ಮತ್ತು ಟೈಪ್ -2 ಮಧುಮೇಹ ಇರುವ ಶೇ.25ರಷ್ಟು ಮಂದಿಯಲ್ಲಿ ದೃಷ್ಟಿ ಸಂಬಂಧಿತ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದಾಗ ಕಣ್ಣಿನ ಕೆಳಭಾಗದಲ್ಲಿ ಇರುವ ಸೂಕ್ಷ್ಮ ಅಂಗಾಂಶಗಳ ಪೂರೈಕೆಯಾಗುವ ರಕ್ತನಾಳಗಳನ್ನು ಹಾನಿಗೊಳಿಸುತ್ತವೆ. ಆಗ ಕಣ್ಣಿನ ಆರೋಗ್ಯ ಸಮಸ್ಯೆ ಕಾಡುವುದು. ಹಾಗಾಗಿ ಮಧು ಮೇಹಿಗಳು ತಮ್ಮ ರಕ್ತದಲ್ಲಿ ಆದಷ್ಟು ಗ್ಲೂಕೋಸ್ ಪ್ರಮಾಣ ಸಮತೋಲಿತವಾಗಿ ಇರುವಂತೆ ನೋಡಿಕೊಳ್ಳಬೇಕು.

ಕಣ್ಣುಗಳ ಆರೋಗ್ಯ: ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಸಬಹುದಾದ ಐದು ಸರಳ ಸಲಹೆಗಳು

​ಡಯಾಬಿಟಿಕ್ ರೆಟಿನೋಪತಿ

ಮಧುಮೇಹ ಹೊಂದಿರುವ ಜನರು ಡಯಾಬಿಟಿಕ್ ರೆಟಿನೋಪತಿ ಸಮಸ್ಯೆಯನ್ನು ಎದುರಿಸುತ್ತಾರೆ. ಡಯಾಬಿಟಿಕ್ ರೆಟಿನೋಪತಿಯಿಂದಾಗಿ ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ, ಕಣ್ಣಿನ ಪೊರೆ ಮತ್ತು ಗ್ಲುಕೋಮಾ, ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವು ಮಧುಮೇಹದಿಂದ ಉಂಟಾಗುವ ಕುರುಡುತನಕ್ಕೆ ಪ್ರಮುಖ ಕಾರಣವಾಗುತ್ತವೆ. ಕೆಲವರಿಗೆ ಯಾವುದೇ ಚಿಹ್ನೆಗಳು ಗಮನಕ್ಕೆ ಬಾರದೆಯೇ ಕುರುಡತ್ವ ಕಾಡುವುದು. ಕೆಲವರಿಗೆ ಕೆಲವು ಚಿಹ್ನೆಗಳು ಗೋಚರಿಸುವುದರ ಮೂಲಕ ಸಮಸ್ಯೆ ಎದುರಾಗುವುದು.

​ಕಣ್ಣಿನ ಸಮಸ್ಯೆಯ ಲಕ್ಷಣಗಳು

ಮಧುಮೇಹಿಗಳು ಕಣ್ಣಿನ ಸಮಸ್ಯೆಗೆ ಒಳಗಾಗುವ ಮೊದಲು ಕೆಲವು ಲಕ್ಷಣಗಳನ್ನು ಅನುಭವಿಸುತ್ತಾರೆ. ಅಂತಹ ಸಮಯದಲ್ಲಿ ನಿಷ್ಕಾಳಜಿ ತೋರದೆ ಸೂಕ್ತ ಚಿಕಿತ್ಸೆ ಅಥವಾ ತಪಾಸಣೆಗೆ ಒಳಗಾಗಬೇಕು.

- ದೃಷ್ಟಿ ಮಂಜಾಗಿ ಕಾಣುವುದು. ಯಾವುದೇ ವಸ್ತುಗಳನ್ನು ನೋಡಿದರೂ ಅವು ಮಸುಕಾಗಿ ಗೋಚರಿಸುವುದು.

- ಒಂದೇ ಬಣ್ಣದ ವಿವಿಧ ಛಾಯೆಯನ್ನು ಗುರುತಿಸುವಲ್ಲಿ ವೈಫಲ್ಯತೆಯನ್ನು ಅನುಭವಿಸುವುದು.

- ಮಂದ ಬೆಳಕಿನಲ್ಲಿ ಯಾವುದೇ ವಸ್ತುವನ್ನು ನೋಡಲು ಕಣ್ಣು ಶ್ರಮಿಸುವುದು.

- ಕಣ್ಣಿನ ಆಯಾಸ ಹಾಗೂ ಅಸಹಜತೆ ಕಿರಿಕಿರಿಯನ್ನುಂಟುಮಾಡುವುದು.

ಕಣ್ಣು ಮಿಟುಕಿಸುವ ಅಭ್ಯಾಸಕ್ಕೆ ಕಾರಣ ಹಾಗೂ ಲಕ್ಷಣಗಳು ಏನು ಗೊತ್ತಾ?

​ಇತರ ಕಾರಣಗಳ ಪ್ರಚೋದನೆ

ಮಧು ಮೇಹ ಇತಿಹಾಸಹೊಂದಿದವರು, ಅತಿಯಾದ ಬೊಜ್ಜು ಅನುಭವಿಸುತ್ತಿರುವವರು, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಹಾಗೂ ಧೂಮಪಾನ ಮಾಡುವವರು ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳಬೇಕು. ಇಂತಹ ಸಮಸ್ಯೆ ಇರುವವರು ಭವಿಷ್ಯದಲ್ಲಿ ಮಧುಮೇಹ ಸಮಸ್ಯೆ ಹಾಗೂ ಅದರಿಂದಾಗಿ ಕಣ್ಣಿನ ದೋಷವನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಮಧುಮೇಹ ಸಮಸ್ಯೆಗೆ ಒಳಗಾದ ನಂತರವೂ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚದಂತೆ ಕಾಳಜಿ ವಹಿಸಬೇಕು. ಆಗ ಮಾತ್ರ ಇತರ ಅಂಗಗಳ ವೈಫಲ್ಯತೆ ಅಥವಾ ಆರೋಗ್ಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು.

​ಮಧುಮೇಹ ಕಣ್ಣಿನ ಆರೋಗ್ಯ ನಿಯಂತ್ರಿಸುವುದು ಹೇಗೆ?

ಮಧುಮೇಹ ಇರುವವರು ನಿಯಮಿತವಾಗಿ ಆಗಾಗ ಕಣ್ಣಿನ ತಪಾಸಣೆಯನ್ನು ಮಾಡಿಸುತ್ತಿರಬೇಕು. ವರ್ಷಕ್ಕೊಮ್ಮೆ ಕಣ್ಣಿನ ವೈದ್ಯರಲ್ಲಿ ತಪಾಸಣೆ ಮಾಡಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸಮಯೋಚಿತ ವೈದ್ಯಕೀಯ ಮಧ್ಯಸ್ಥಿಕೆ ಹಾಗೂ ತಪಾಸಣೆಯಿಂದ ಕಣ್ಣಿನಲ್ಲಿ ಆಗುವ ತೊಡಕನ್ನು ನಿಯಂತ್ರಿಸಬಹುದು. ಉತ್ತಮ ಜೀವನ ಶೈಲಿ ಹಾಗೂ ಪೂರಕ ಆಹಾರ ಸೇವನೆಯ ಅಭ್ಯಾಸವು ಸಾಕಷ್ಟು ಅನಾರೋಗ್ಯ ಹಾಗೂ ಮಧುಮೇಹದಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ