ಆ್ಯಪ್ನಗರ

ಉದ್ವೇಗ: ಮಾನಸಿಕ ಅಷ್ಟೇ ಅಲ್ಲ, ದೈಹಿಕ ಆರೋಗ್ಯಕ್ಕೂ ಮಾರಕ

ಉದ್ವೇಗದಿಂದ ಮೂಳೆ ವೀಕ್‌ ಆಗುತ್ತದೆ ಮಾತ್ರವಲ್ಲ, ವಿಟಮಿನ್‌ ಡಿ ಲೆವೆಲ್‌ ಕಡಿಮೆಯಾಗುತ್ತದಂತೆ. ಹೌದು ಹಾಗೆಂದು ಹೊಸ ಸಂಶೋಧನೆಯೊಂದರ ಅಧ್ಯಯನ, ವರದಿ ಮಾಡಿದೆ.

Vijaya Karnataka Web 23 Mar 2019, 2:00 pm
ನಿಮ್ಮ ಮಾನಸಿಕ ಆರೋಗ್ಯ ಉತ್ತಮ ವಾಗಿರಬೇಕಾದರೆ ಉತ್ತಮ ಆಲೋಚನೆಗಳು ಬೇಕಾಗುತ್ತವೆ. ಆಧುನಿಕ ಕಾಲದ ಒತ್ತಡದ ಬದುಕಿಂದಾಗಿ ಜನರು ಸದಾ ಉದ್ವೇಗದಲ್ಲೇ ಇರುತ್ತಾರೆ. ಇದರಿಂದ ಮಾನಸಿಕವಾಗಿ ಕಿರಿಕಿರಿ ಆಗುವುದಷ್ಟೇ ಅಲ್ಲ. ದೈಹಿಕವಾಗಿಯೂ ಪರಿಣಾಮವಾಗುತ್ತದೆ ಎಂಬುದು ನಿಮಗೆ ಗೊತ್ತೇ?
Vijaya Karnataka Web Anxiety


ಉದ್ವೇಗದಿಂದ ಮೂಳೆ ವೀಕ್‌ ಆಗುತ್ತದೆ ಮಾತ್ರವಲ್ಲ, ವಿಟಮಿನ್‌ ಡಿ ಲೆವೆಲ್‌ ಕಡಿಮೆಯಾಗುತ್ತದಂತೆ. ಹೌದು ಹಾಗೆಂದು ಹೊಸ ಸಂಶೋಧನೆಯೊಂದರ ಅಧ್ಯಯನ, ವರದಿ ಮಾಡಿದೆ.

ಇಂದಿನ ಮಾಡರ್ನ್‌ ಯುಗದಲ್ಲಿನ ಸ್ಟ್ರೆಸ್‌ ಹಾಗೂ ಕೆಲಸದ ಒತ್ತಡದಿಂದ ಉಂಟಾಗುವ ಉದ್ವೇಗ ಆರೋಗ್ಯವನ್ನು ಹದಗೆಡಿಸುವುದರೊಂದಿಗೆ ಮೂಳೆಯ ಡೆನ್ಸಿಟಿಯನ್ನು ಕುಂಠಿತಗೊಳಿಸುತ್ತದೆ ಹಾಗೂ ಮೂಳೆ ಮುರಿತ ಹಾಗೂ ಫ್ರಾಕ್ಚರ್‌ಗೆ ನಾಂದಿ ಹಾಡುತ್ತದೆ ಎನ್ನುತ್ತದೆ ಸರ್ವೆ.

ಇತರೇ ಮಹಿಳೆಯರಿಗೆ ಹೋಲಿಸಿದಲ್ಲಿ ಉದ್ವೇಗಕ್ಕೆ ಒಳಗಾಗುವ ಮಹಿಳೆಯರಲ್ಲಿ ಈ ರಿಸ್ಕ್‌ ಹೆಚ್ಚಂತೆ. ಪುರುಷರಿಗಿಂತ ಇವರಲ್ಲೆ ಸೊಂಟ ಮುರಿಯುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಸಂಶೋಧಕರು. ಅತಿಯಾದ ಟೆನ್ಷನ್‌ನಿಂದಾಗ ದೇಹದಲ್ಲಿ ಬಿಡುಗಡೆಯಾಗುವ ಕಾರ್ಟಿಸಾಲ್‌ ಕಡಿಮೆಯಾಗುತ್ತದೆ. ಪರಿಣಾಮ, ದೇಹದಲ್ಲಿ ನಾನಾ ಬದಲಾವಣೆಗಳಾಗುತ್ತವೆ. ಮೂಳೆ ಹಾಗೂ ಸಂಧಿವಾತಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತದೆ ಸರ್ವೆ.

ಅಂತಹ ಸಮಯದಲ್ಲಿ ಒಮೆಗಾ3 ಫ್ಯಾಟಿ ಆಸಿಡ್‌ ಇನ್‌ಟೇಕ್‌ನಿಂದಾಗಿ ಉದ್ವೇಗವನ್ನು ಕಂಟ್ರೋಲ್‌ ಮಾಡಬಹುದು ಎನ್ನುತ್ತಾರೆ ವೈದ್ಯರು.

ದೈವಭಕ್ತಿ ಉದ್ವೇಗ ತಗ್ಗಿಸುತ್ತದೆ

ದೇವರ ಮೇಲಿನ ನಂಬಿಕೆ ಉದ್ವೇಗವನ್ನು ಕಡಿಮೆಗೊಳಿಸುತ್ತದೆ ಅಲ್ಲದೆ, ಒತ್ತಡವನ್ನು ತಗ್ಗಿಸುತ್ತದೆ ಎಂಬುದನ್ನು ಅಧ್ಯಯನ ಒಂದು ಕಂಡುಕೊಂಡಿದೆ.

ಧಾರ್ಮಿಕ ವ್ಯಕ್ತಿಗಳು ಅಥವಾ ದೇವರ ಅಸ್ತಿತ್ವದ ಮೇಲೆ ಸರಳ ನಂಬುಗೆ ಇರುವವರು ಸಹ ತಮ್ಮದೇ ತಪ್ಪುಗಳಿಗೂ ಭಾವೋದ್ವೇಗಗೊಳ್ಳುವುದು ಕಡಿಮೆ. ಅವರು ಕಡಿಮೆ ಉದ್ವಿಗ್ನಗೊಳ್ಳುತ್ತಾರೆ ಮತ್ತು ಕಡಿಮೆ ಒತ್ತಡಕ್ಕೊಳಗಾಗುತ್ತಾರೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ