ಆ್ಯಪ್ನಗರ

ಚಳಿಗಾಲದಲ್ಲಿ ಕಾಡುವ ಶೀತ ಕೆಮ್ಮು, ಜ್ವರದ ಸಮಸ್ಯೆಗೆ ಆಯುರ್ವೇದಿಕ್ ಔಷಧಿಗಳು

ಚಳಿಗಾಲದಲ್ಲಿ ಕೆಮ್ಮು ಕಾಡಿದರೆ ನೀವು ಈ ಮೂರು ಆಯುರ್ವೇದಿಕ್ ಔಷಧಿ ಬಳಕೆ ಮಾಡಬಹುದು.

Vijaya Karnataka Web 28 Nov 2020, 11:43 am
ಚಳಿಗಾಲವೆಂದರೆ ಅದು ಶೀತ, ಕೆಮ್ಮು ಹಾಗೂ ಜ್ವರದಂತಹ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವುದು. ಇದನ್ನು ನಿವಾರಣೆ ಮಾಡಲು ಹಿಂದಿನಿಂದಲೂ ಕೆಲವೊಂದು ಮನೆಮದ್ದುಗಳು ಹಾಗೂ ಆಯುರ್ವೇದಿಕ್ ಔಷಧಿಗಳು ತುಂಬಾ ಪರಿಣಾಮಕಾರಿ ಆಗಿದೆ.
Vijaya Karnataka Web ayurvedic remedies to beat fever sore throat and cold this winter
ಚಳಿಗಾಲದಲ್ಲಿ ಕಾಡುವ ಶೀತ ಕೆಮ್ಮು, ಜ್ವರದ ಸಮಸ್ಯೆಗೆ ಆಯುರ್ವೇದಿಕ್ ಔಷಧಿಗಳು


ಆದರೆ ನಾವಿಂದು ಅಲೋಪತಿ ಔಷಧಿಗೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ಶೀತ ಬಂದರೂ ಮೆಡಿಕಲ್ ಗೆ ಹೋಗಿ ಒಂದೆರಡು ಮಾತ್ರೆ ತೆಗೆದುಕೊಳ್ಳುತ್ತೇವೆ. ನಮಗೆ ತಕ್ಷಣವೇ ಪರಿಹಾರ ಬೇಕಾಗುವುದು ಕೂಡ ಇದಕ್ಕೆ ಒಂದು ಕಾರಣ.

ನಾವಿಲ್ಲಿ ಚಳಿಗಾಲದಲ್ಲಿ ಕಾಡುವಂತಹ ಕೆಮ್ಮು ನಿವಾರಣೆ ಮಾಡಲು ಇರುವ ಮೂರು ಆಯುರ್ವೇದಿಕ್ ಔಷಧಿಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ತುಂಬಾ ಪರಿಣಾಮಕಾರಿ ಹಾಗೂ ಯಾವುದೇ ಅಡ್ಡ ಪರಿಣಾಮ ಉಂಟು ಮಾಡದು. ಅಂತಹ ಆಯುರ್ವೇದಿಕ್ ಔಷಧಿಗಳು ಯಾವುದು ಎಂದು ತಿಳಿಯಿರಿ.

​ಗಂಟಲು ನೋವು ಅಥವಾ ಮೂಗು ಕಟ್ಟಿದ ಸಮಸ್ಯೆಗೆ- ಉಪ್ಪು ನೀರು

  • ಶ್ವಾಸಕೋಶದ ಮೇಲ್ಭಾಗದ ಸೋಂಕನ್ನು ನಿವಾರಣೆ ಮಾಡಲು ನೀವು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದು ಶೀತದ ತೀವ್ರತೆ ಕಡಿಮೆ ಮಾಡುವುದು.
  • ಉದಾಹರಣೆಗೆ ಗಂಟಲು ನೋವು ಅಥವಾ ಮೂಗು ಕಟ್ಟಿದ ಸಮಸ್ಯೆ ಇದ್ದರೆ ಇದರಿಂದ ಪರಿಹಾರ ಪಡೆಯಬಹುದು.
  • ಉಪ್ಪು ನೀರಿನಿಂದ ದಿನಕ್ಕೆ ಮೂರು ಅಥವಾ ನಾಲ್ಕು ಸಲ ಬಾಯಿ ಮುಕ್ಕಳಿಸಿ ಕೊಂಡರೆ ಆಗ ಬ್ಯಾಕ್ಟೀರಿಯಾ ಮತ್ತು ಸೋಂಕುಕಾರಕ ಹೊಂದಿರುವ ಕಫ ಕಡಿಮೆ ಅಥವಾ ಸಡಿಲವಾಗುವುದು. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸಿ.

​ಒಣ ಶುಂಠಿ, ಕರಿಮೆಣಸು ಮತ್ತು ಜೇನುತುಪ್ಪ

  • ಒಣ ಶುಂಠಿ, ಕರಿಮೆಣಸು ಮತ್ತು ಜೇನುತುಪ್ಪದ ಕಷಾಯವು ಕೆಮ್ಮು ನಿವಾರಣೆಗೆ ತುಂಬಾ ಪರಿಣಾಮಕಾರಿ ಎಂದು ಆಯುರ್ವೇದಿಕ್ ತಜ್ಞರು ಹೇಳುವರು.
  • ಶುಂಠಿ ಮತ್ತು ಕರಿಮೆಣಸು ಸ್ವಲ್ಪ ಘಾಟು ಆಗಿದ್ದರೂ ಇದು ಶ್ವಾಸಕೋಶ ಹಾಗೂ ವಾಯುನಾಳದ ಆರೋಗ್ಯ ಕಾಪಾಡುವ ಜತೆಗೆ ಜೀರ್ಣಕ್ರಿಯೆ ಸುಧಾರಣೆ ಮಾಡುವುದು.
  • ಇದು ದೇಹದಲ್ಲಿ ಉಷ್ಣತೆ ಹೆಚ್ಚಿಸುವುದು. ನೀರಿಗೆ ಒಣ ಶುಂಠಿ ಮತ್ತು ಕರಿಮೆಣಸು ಹಾಕಿ ಸರಿಯಾಗಿ ಕುದಿಸಿ, ನೀರು ಅರ್ಧದಷ್ಟು ಆಗಲಿ. ಇದು ಸ್ವಲ್ಪ ತಣ್ಣಗಾದ ಬಳಿಕ ಜೇನುತುಪ್ಪ ಹಾಕಿಕೊಂಡು ಕುಡಿಯಿರಿ. ಇದನ್ನು ನೀವು ದಿನದಲ್ಲಿ 3-4 ಸಲ ಕುಡಿದರೆ ಚಳಿಗಾಲದಲ್ಲಿ ಕಾಡುವಂತಹ ಕೆಮ್ಮು ನಿವಾರಣೆ ಆಗುವುದು.

ಚಳಿಗಾಲದಲ್ಲಿ ಕೆಮ್ಮು ನಿವಾರಣೆಗೆ ಕರಿಮೆಣಸು-ಜೇನುತುಪ್ಪದ ಚಹಾ!

​ತುಳಸಿ ಎಲೆಗಳು ಮತ್ತು ಲವಂಗ

  • ಚಳಿಗಾಲದಲ್ಲಿ ಜ್ವರ ಸಾಮಾನ್ಯ ವಿಚಾರ. ಈ ಕಷಾಯವು ಜ್ವರ ನಿವಾರಣೆ ಮಾಡಲು ನೆರವಾಗುವುದು. ಇದನ್ನು ಕುಡಿದರೆ ಅದರಿಂದ ದೇಹವು ಬೆವರುವುದು ಮತ್ತು ಜ್ವರ ಕಡಿಮೆ ಆಗುವುದು.
  • 7 ತುಳಸಿ ಮತ್ತು ಐದು ಲವಂಗ ತೆಗೆದುಕೊಂಡು ಅದನ್ನು ಜಜ್ಜಿಕೊಳ್ಳಿ. ಇದನ್ನು ಒಂದು ಲೋಟ ಕುದಿಯುವ ನೀರಿಗೆ ಹಾಕಿ. ಇದು ಸರಿಯಾಗಿ ಕುದಿಯಲಿ. ಇದರ ಬಳಿಕ ಅರ್ಧಕ್ಕೆ ಬರಲಿ ಮತ್ತು ಕಲ್ಲುಪ್ಪು ಹಾಕಿಕೊಂಡು ದಿನದಲ್ಲಿ 2-3 ಸಲ ಕುಡಿಯಿರಿ.

ಖಾಲಿ ಹೊಟ್ಟೆಗೆ 'ತುಳಸಿ ಎಲೆ'ಗಳನ್ನು ತಿಂದರೆ ಜನ್ಮದಲ್ಲಿ ಇಂತಹ ಕಾಯಿಲೆಗಳು ಬರಲ್ಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ