ಆ್ಯಪ್ನಗರ

ನಮ್ಮ ಊಟದಲ್ಲಿ ಮಸಾಲೆ ಪದಾರ್ಥ ಮತ್ತು ಸಿಹಿ ಎರಡು ಇರಬೇಕಂತೆ

ನಮ್ಮ ಆಹಾರ ಸಂಪೂರ್ಣ ಎಲ್ಲಾ ಪದಾರ್ಥಗಳ ಸಮ್ಮಿಶ್ರಣವಾಗಿರಬೇಕು. ಆಗಷ್ಟೇ ಸಮತೋಲನವಾದ ಆರೋಗ್ಯ ಸಿಗಲು ಸಾಧ್ಯ.

Vijaya Karnataka Web 28 Aug 2021, 10:52 am
ನಮ್ಮ ಹಿರಿಯರು ನಾವು ಸೇವನೆ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ವಸ್ತುನಿಷ್ಠತೆಗೆ ತುಂಬಾ ಬೆಲೆ ಕೊಟ್ಟಿದ್ದಾರೆ. ಹಾಗಾಗಿ ನಾವು ಸೇವನೆ ಮಾಡುವ ಯಾವುದೇ ಸಾಂಪ್ರದಾಯಿಕ ಆಹಾರ ಪದಾರ್ಥಗಳು ನಮಗೆ ಆರೋಗ್ಯವನ್ನು ಹೆಚ್ಚಾಗಿ ನೀಡುತ್ತವೆ ಎಂದು ಹೇಳಬಹುದು.
Vijaya Karnataka Web benefits of adding masala spices and sweet products in our food
ನಮ್ಮ ಊಟದಲ್ಲಿ ಮಸಾಲೆ ಪದಾರ್ಥ ಮತ್ತು ಸಿಹಿ ಎರಡು ಇರಬೇಕಂತೆ


ಬಹುಮುಖ್ಯವಾಗಿ ಹೇಳುವುದಾದರೆ ನಾವು ಸೇವನೆ ಮಾಡುವ ಆಹಾರ ಉಪ್ಪು, ಹುಳಿ, ಕಾರ ಇತ್ಯಾದಿಗಳನ್ನು ಒಳಗೊಂಡಂತೆ ಅಪ್ಪಟ ಮಸಾಲೆ ಪದಾರ್ಥಗಳು ಮತ್ತು ಸಿಹಿಯನ್ನು ಸಹ ಹೊಂದಿರಬೇಕು.ಇದರಿಂದ ಸಮತೋಲನವಾದ ಆಹಾರ ನಮಗೆ ಲಭ್ಯವಾದಂತೆ ಆಗುತ್ತದೆ.

​ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು

  • ಎಲ್ಲದರ ಸಮ್ಮಿಶ್ರಣದಿಂದ ಕೂಡಿದ ಆಹಾರ ಸೇವನೆ ಮಾಡುವುದರಿಂದ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡಲಿದೆ.
  • ನಾವು ಸೇವನೆ ಮಾಡಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಲು ಅಗತ್ಯವಾಗಿ ಬೇಕಾದ ಪ್ರಮಾಣದಲ್ಲಿ ಜೀರ್ಣ ರಸಗಳನ್ನು ಉತ್ಪತ್ತಿ ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ಒಂದು ಆಹಾರದ ಸೇವನೆ ಅಗತ್ಯ ಎಂದು ಹೇಳಬಹುದು.

ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ನಿಮ್ಮ ಅಡುಗೆ ಮನೆಯ ಈ ಗಿಡಮೂಲಿಕೆಗಳು ಸಹಕಾರಿ

​ಮಸಾಲೆ ಪದಾರ್ಥಗಳು+ ಸಿಹಿ ಪದಾರ್ಥಗಳು

  • ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಆಹಾರದಲ್ಲಿ ಸಿಹಿ ಪದಾರ್ಥಗಳನ್ನು ಕೂಡ ಸೇರಿಸಿ ತಿನ್ನುವುದರಿಂದ ಕಾರ್ಬೋಹೈಡ್ರೇಟ್ ಅಂಶಗಳ ಪ್ರಮಾಣ ಹೆಚ್ಚು ಸಿಗುತ್ತದೆ ಮತ್ತು ಜಡ ಜೀರ್ಣ ಕ್ರಿಯೆ ದೂರವಾಗುತ್ತದೆ.
  • ಇಷ್ಟೇ ಅಲ್ಲದೆ ಸಕ್ಕರೆ ಅಂಶ ಸೇವನೆ ಮಾಡುವುದರಿಂದ ಅಮೈನೋ ಆಮ್ಲ ಮತ್ತು ಟ್ರಿಪ್ಟೊಫಾನ್ ಅಂಶಗಳನ್ನು ನಮ್ಮ ದೇಹ ಹೆಚ್ಚಾಗಿ ಹೀರಿಕೊಳ್ಳುತ್ತದೆ. ಮುಖ್ಯವಾಗಿ ಇದು ನಮ್ಮ ಮೆದುಳಿನ ಭಾಗದಿಂದ ಸೇರೋಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿಯಲ್ಲಿ ನೆರವಾಗುತ್ತದೆ.

ಮಸಾಲೆ ಪದಾರ್ಥ ಎಂದು ಮೂಗು ಮುರಿಯಬೇಡಿ! ಅದರಿಂದಲೂ ಉಪಯೋಗವಿದೆ...

​ಆರೋಗ್ಯಕ್ಕೆ ಒಳ್ಳೆಯದು....

ನಮ್ಮ ಮನಸ್ಸಿನ ಒಳ್ಳೆಯ ಭಾವನೆಗಳನ್ನು ನಿಯಂತ್ರಣ ಮಾಡುವ ಹಾರ್ಮೋನ್ ಇದಾಗಿದೆ. ಹಾಗಾಗಿ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲದೆ ಇದ್ದರೂ ಕೂಡ ನಮ್ಮ ಹಿರಿಯರು ಸಂಪ್ರದಾಯಬದ್ಧವಾಗಿ ರೂಪಿಸಿದ ಮಸಾಲೆ ಪದಾರ್ಥಗಳು ಮತ್ತು ಸಿಹಿಯ ಮಿಶ್ರಣದ ಆಹಾರ ದೇಹಕ್ಕೆ ಬಹಳ ಆರೋಗ್ಯಕರ ಎಂದು ಹೇಳಬಹುದು.

​ಸಕ್ಕೆರೆ ಬಳಸಿದ ಸಿಹಿ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದಲ್ಲ....

  • ನಾವು ಸಾಧಾರಣವಾಗಿ ಮನೆಯಲ್ಲಿ ಪ್ರತಿ ದಿನ ಬಳಕೆಮಾಡುವ ಸಕ್ಕರೆ ಉಪಯೋಗಿಸಿ ತಯಾರು ಮಾಡಿದ ಸಿಹಿ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲು ಬರುವುದಿಲ್ಲ.
  • ಇದು ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚು ಮಾಡುತ್ತಾ ಹೋಗುವುದು ಮಾತ್ರವಲ್ಲದೆ ದೀರ್ಘಕಾಲದಲ್ಲಿ ನಿಮ್ಮ ಮಾನಸಿಕ ಸ್ಥಿತಿಯನ್ನು ನಿಯಂತ್ರಣ ಮಾಡುವ ಮಟ್ಟಿಗೆ ಬದಲಾಗುತ್ತದೆ ಜೊತೆಗೆ ದೇಹದಲ್ಲಿ ಬೊಜ್ಜಿನ ಅಂಶದ ಪ್ರಮಾಣವನ್ನು ಹೆಚ್ಚು ಮಾಡಿ ದೇಹದ ತೂಕವನ್ನು ಹೆಚ್ಚಿಸುತ್ತದೆ.
  • ಹಾಗಾಗಿ ಆರೋಗ್ಯದ ವಿಚಾರ ಬಂದಾಗ ಕಂದು ಬಣ್ಣದ ಸಕ್ಕರೆ ಅಥವಾ ಬೆಲ್ಲವನ್ನು ಬಳಕೆ ಮಾಡಿ. ಸಾವಯುವ ಬೆಲ್ಲ ನಿಮ್ಮ ಆಯ್ಕೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು.

ಟೀ-ಕಾಫಿಗೆಲ್ಲಾ ಸಕ್ಕರೆ ಬಳಸುವುದನ್ನು ನಿಲ್ಲಿಸಿ! ಆಮೇಲೆ ಆರೋಗ್ಯ ಹೇಗಿರುತ್ತೆ ನೋಡಿ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ