ಆ್ಯಪ್ನಗರ

ಮಧುಮೇಹ ನಿಯಂತ್ರಣಕ್ಕೆ ಬಿದಿರಕ್ಕಿ ಅನ್ನ ತಿನ್ನಿ

ಬ್ಯಾಂಬು ರೈಸ್‌, ಮುಲಯಾರಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಬಿದಿರಿನ ಅಕ್ಕಿಯೀಗ ಬೇಡಿಕೆಯ ಆಹಾರವಾಗಿ ಹೊರಹೊಮ್ಮಿದೆ. ಕಂದು ಬಣ್ಣದ ಈ ಸಣ್ಣ ಅಕ್ಕಿ ಕಾಳುಗಳು ತುಂಬಾ ವಿರಳವಾಗಿ ಕಾಣಸಿಗುತ್ತದೆ. ಯಾಕೆಂದರೆ ಇದು ನಮಗೆ ಬೇಕಾದಾಗಲೆಲ್ಲಾ ಸಿಗುವುದಿಲ್ಲ. ಬಿದಿರಿನ ಜೀವಿತಾವಧಿ ಕೊನೆಗೊಂಡಾಗ ಅದು ಹೂ ಬಿಡುತ್ತದೆ.

Agencies 12 May 2019, 2:59 pm
ಬಿದಿರಕ್ಕಿಯ ಕಾಲ ಬಂದ್ರೆ ಬರಗಾಲ ನಿಶ್ಚಿತ ಎಂಬುದು ಜನಪದೀಯ ನಂಬಿಕೆ. 60 ವರ್ಷಗಳಿಗೊಮ್ಮೆ ಬಿದಿರು ಅಕ್ಕಿ ನೀಡುತ್ತದೆ. ಅಕ್ಕಿ ನೀಡಿದ ಬೆನ್ನಿಗೆ ಬಿದಿರು ಸಾಯುತ್ತದೆ. 70ರ ದಶಕದಲ್ಲಿ ಇಂತಹುದೆ ಪರಿಸ್ಥಿತಿ ಬಂದಿತ್ತು. 2014ರಲ್ಲಿ ಇದು ಪುನರಾವರ್ತನೆಯಾಗಿತ್ತು.
Vijaya Karnataka Web BambooRice


ಬ್ಯಾಂಬು ರೈಸ್‌, ಮುಲಯಾರಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಬಿದಿರಿನ ಅಕ್ಕಿಯೀಗ ಬೇಡಿಕೆಯ ಆಹಾರವಾಗಿ ಹೊರಹೊಮ್ಮಿದೆ. ಕಂದು ಬಣ್ಣದ ಈ ಸಣ್ಣ ಅಕ್ಕಿ ಕಾಳುಗಳು ತುಂಬಾ ವಿರಳವಾಗಿ ಕಾಣಸಿಗುತ್ತದೆ. ಯಾಕೆಂದರೆ ಇದು ನಮಗೆ ಬೇಕಾದಾಗಲೆಲ್ಲಾ ಸಿಗುವುದಿಲ್ಲ. ಬಿದಿರಿನ ಜೀವಿತಾವಧಿ ಕೊನೆಗೊಂಡಾಗ ಅದು ಹೂ ಬಿಡುತ್ತದೆ. ಈ ಹೂಗಳಿಂದ ಅಕ್ಕಿಯನ್ನು ಬಿಡಿಸಿ ಸಂಗ್ರಹಿಸಿ ಇಡಬೇಕು.

ಬಿದಿರಿನ ಮರ ಹೂ ಬಿಡುವ ಪ್ರಕ್ರಿಯೆ 60 ವರ್ಷಗಳಿಗೊಮ್ಮೆ ನಂತರ ನಡೆಯುವುದರಿಂದ ಈ ಅಕ್ಕಿ ತುಂಬಾ ಅಪರೂಪದ್ದು ಎನ್ನಲಾಗುತ್ತದೆ. ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನರ ಪ್ರಮುಖ ಆದಾಯ ಮೂಲವಾಗಿರುವ ಬಿದಿರಿನ ಅಕ್ಕಿಯನ್ನು ಇತರ ಅಕ್ಕಿಗಳಂತೆಯೇ ಬೇಯಿಸಿ ಅನ್ನ ಮಾಡಲಾಗುತ್ತದೆ. ಆದರೆ ಈ ಅಕ್ಕಿಯ ಅನ್ನ ಮಾತ್ರ ಸಿಹಿ ರುಚಿ ಹೊಂದಿರುತ್ತದೆ.

ಸ್ವಲ್ಪ ಅಂಟು ಅಂಟಾಗಿರುವ ಇದನ್ನು ಹೆಚ್ಚಾಗಿ ಕಿಚಡಿ ಮಾಡಲು ಉಪಯೋಗಿಸುತ್ತಾರೆ. ಇತರ ಅಕ್ಕಿ ಮತ್ತು ಗೋಧಿಗಿಂತ ಹೆಚ್ಚಿನ ಪ್ರೊಟೀನ್‌ ಹೊಂದಿರುವ ಬಿದಿರಿನಿ ಅಕ್ಕಿಯ ಅನ್ನ ಸೇವನೆ ಸಂಧಿ ನೋವು, ಬೆನ್ನು ನೋವು ಇತ್ಯಾದಿಗಳಿಗೆ ತುಂಬಾ ಒಳ್ಳೆಯದು ಎಂದು ಸಮೀಕ್ಷೆಯೊಂದು ಹೇಳಿದೆ. ಇದರ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್‌ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಪ್ರತಿ ಮಧುಮೇಹ ಗುಣವನ್ನೂ ಹೊಂದಿದೆ. ಇದರ ಔಷಧೀಯ ಗುಣಗಳಿಂದಾಗಿ ಈ ಅಕ್ಕಿಗೀಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ